Thursday, January 5, 2012

ನೀ ಹೋದ ಮೇಲೆ


 
ತಿಳಿನೀರ ಕೊಳ, ಕೆಂಪೇರಿದ ಬಾನು,
ನೀರವ ಮೌನ, ಏಕಾಂಗಿ ನಾನು.

ದೂರವಾಗುತ್ತಿರುವೆ ನೀ, ಕಳೆದಂತೆ ಕಾಲ,
ಕುಗ್ಗುತಿರುವೆ ಒಳಗೆ, ಮನದಲ್ಲಿಲ್ಲದೆ ಬಲ.

ಚಂದಿರನು ನೀ, ಭೂಮಿಯು ನಾ; ಭಾವಿಸಿದ್ದೆನು ಹೀಗೆ,
ನನ್ನ ಸುತ್ತದೆ ದೂರಾದೆ ಹೇಗೆ?

ಮುಂಗಾರಿಲ್ಲ, ಹಿಂಗಾರಿಲ್ಲ, ಹಸಿರೇಗೆ ಇದ್ದೀತು?
ಚೈತ್ರ ಬರದು, ಕೋಗಿಲೆ ಹೇಗೆ ಹಾಡೀತು?

ಸುಖಾಂತ್ಯವ ತರದೆ ನಡುವೆಯೇ ದುಃಖವ ತಂದೆ
ಕಾರಂಜೆಯ ಹಾಗೆ ನಲಿವ ಚಿಮ್ಮಿಸಬಾರದಿತ್ತೆ?