Thursday, March 24, 2011

ನುಡಿ ನಮನ


ವೀರ ಮರಣವ ಹೊಂದಿದರು ಮೂವರು ಅಂದು
ಅದುವೇ ಆಗಿ ೮೦ ವರುಷವಾಗಿದೆ ಇಂದು
ಪೂರ್ಣ ಸ್ವಾತಂತ್ರ್ಯವೇ ಅವರ ಗುರಿ
ಒಪ್ಪಲಿಲ್ಲ ಬ್ರೀಟಿಷರ ಆಳ್ವಿಕೆ ನಿ ಕೇಳು ಮರಿ
ನೌಜವಾನ್ ಭಾರತ್ ಸಭಾದ ಸದಸ್ಯರಾಗಿ
ಸೇರಿಸಿದರು ಹಿಂದೂ ಮುಸಲ್ಮಾನರನು
ಒಗ್ಗೂಡಿಸಿದರು ಯುವಜನರನು
ಮೊಳಗಿಸಿದರು ಹಿಂದೂ-ಮುಸ್ಲಿಂ
ಅಣ್ಣ ತಮ್ಮರೆಂಬ ಘೋಷಣೆಯನು
ಯುವ ಜನರಲಿ ಬಿತ್ತಿದರು ನಾವೆಲ್ಲಾ
ಒಂದೇ;ಭಾರತೀಯರೆಂಬ ಭಾವನೆಯನು
ಎಸೆದರು ಸಿಡಿಗುಂಡುಗಳನು,ಹೇಳಿದರು
ಇದುವೇ ಕೂಗು ಕಿವುಡರಿಗೆ ಎಂದು
ಘೋಷಿಸಿದರು ಇಂಕ್ವಿಲಾಬ್ ಜಿನ್ದಾಬಾದ್ ಎಂದು
ಬಂಧಿತರಾದರು ಜೈಲಿನಲಿ
ಆದರು ನಿಲ್ಲಿಸಲಿಲ್ಲ ತಮ್ಮ ಕಾರ್ಯಾಚರಣೆಗಳನು
ಮುಂದುವರೆಸಿದರು ಕ್ರಾಂತಿಯನು
೬೪ ದಿನಗಳ ಉಪವಾಸದಿ ಗಳಿಸಿಕೊಂಡರು
ತಾವು ನೀಡಿದ ಬೇಡಿಕೆಗಳನು ಹಾಗು
ಸಾಮಾನ್ಯ ಜನರ ಬೆಂಬಲವನ್ನು
ಸ್ಯಾಂಡರ್ಸ್ನ ಕೊಲೆ ಆಪಾದನೆಯಲಿ
ಈ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು
ಸಾಯುವ ಸಮಯದಳು ಭಾರತ ಮಾತೆಯ ನೆನೆದರು
ಭಾರತ ಮಾತೆಗೆ ಜಯವಾಗಲೆಂದೂ
ಇಂಕ್ವಿಲಾಬ್ ಜಿನ್ದಾಬಾದ್ ಎಂದು
ಮುಗಿಲು ಮುಟ್ಟುವ ಹಾಗೆ ಘೋಷಿಸಿದರು
ನೇಣು ಹಗ್ಗಕ್ಕೆ ಮುತ್ತಿಟ್ಟರು
ಭಾರತ ಮಾತೆಯ ನೆನೆದರು
ಯುವಕರಿಗೆ ಮಾದರಿಯಾದರು
ಭಾರತೀಯರ ಮನೆ ಮನಗಳಲಿ ಚಿರವಾದರು.

4 comments: