Saturday, November 12, 2011

ನೀ ಬರಲೆಂದು, ಬೆಳಕ ತರಲೆಂದು ಬೇಡುವೆ



ಮನದ ಕೋರಿಕೆಯು ಕೇಳಿಸದೇನೋ ಇನಿಯ?
ಬಂದೇಕೆ ಒಪ್ಪಲಾಗದು ನನ್ನ ಬಯಕೆಯ?
ನೀ ಹೇಳಿದಂತೆ ಇರುವುದು ದೀಪಾವಳಿಗೆ ಅಗಾಧ ಅರ್ಥ
ಪ್ರಣತಿಯಾಗಿ ಬರಲಿಚ್ಛಿಸುವೆ ನೀ ಅದ ತಿಳಿಯಲಾರೆಯ?

ಕರಾಳ ರಾತ್ರಿಯಲಿ ಬೆಚ್ಚುವೆ ನಾ ಒಬ್ಬಳೆ,
ನೀ ಬರಲೆಂದು, ಬೆಳಕ ತರಲೆಂದು ಬೇಡುವೆ
ಸಂಜೆಯ ತಂಪೊತ್ತಿನಲ್ಲಿ ಒಂಟಿಯಾಗಿ ಸಾಗುವ ವೇಳೆಗೆ,
ನೆನೆಯುವೆ, ತಡವರಿಸುವೆ ನಿನ್ನ ಒಲವಿನ ಕೂಗಿಗೆ

ಅಸ್ತು ಎಂದು ಹೇಳೋ ಹೃದಯೇಶ್ವರ,
ಓಡೋಡಿ ಬರುವೆ, ಬಂದೊಮ್ಮೆ ಅಪ್ಪುವೆ.
ಆನಂದದ ಭಾಷ್ಪದಲಿ ಹೃದಯವ ಮೀಯಿಸುವೆ,
ಮತ್ತೆಂದು ನಿನ್ನ ಬಿಡೆನು, ನಾ ಭಾಷೆ ಕೊಡುವೆ. . . 

Monday, October 10, 2011

ಹಾಗೆ ಸುಮ್ಮನೆ. . . :)

"ಸೊ ನಿಮ್ ಪ್ರೀತಿ ಬಗ್ಗೆ, ಪ್ರೀತಿಸುತಿರುವರ ಬಗ್ಗೆ ಹೇಳ್ಬೇಕು ಅನ್ನಿಸಿದರೆ, ಯಾರಿಗಾದ್ರು song dedicate ಮಾಡ್ಬೇಕು ಅಂದ್ರೆ ಕಾಲ್ ಮಾಡಿ 3927972ಗೆ.......... ಕೇಳಿ ಕೇಳಿಸಿ life ನಿಮ್ಮದಾಗಿಸಿ....."


"ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ, ತೊದಲುತಿದೆ ಹೃದಯವಿದು ಒಳಗೊಳಗೇ.."


ಹ್ಮ್ಮ್ಮ್....ಸಂಜೆ ೫ರ ಸಮಯ...ಮೊಬೈಲ್ ಗೆ head set ಹಾಕಿಕೊಂಡ, ಕಿಟಕಿ ಪಕ್ಕ ಕೂತ್ಕೊಂಡು ಕಣ್ಣು ಮುಚ್ಚಿ FM ಕೇಳ್ತಾ ಇದ್ಳು. ಮೇಲೆ ತಿಳಿಸಿದ ಹಾಡು ಬಂದ ಕೂಡಲೆ ಮುಗುಳ್ನಕ್ಕಳು.ಕಾರಣ ಅದು ಅವಳ favorite ಹಾಡು. ಅವಳ favorite song! ಕಾರಣ ಅದು ಅವನ favorite ಹಾಡು. ಹ್ಹಾ.. ಅವನು ಅವಳ ಅಚ್ಚು ಮೆಚ್ಚು...

ಅವರಿಬ್ಬರು ಎರಡು ವರುಷದಿಂದ love ಮಾಡ್ತಿದ್ದಾರೆ! ಆದ್ರೆ ಎಲ್ಲಾ lovers ಥರ ಅಲ್ಲ ಇವರು.....ಎಲ್ಲ lovers ದಿನಾ ಗಂಟೆಗಟ್ಟಲೆ ಮಾತನಾಡಿ, ಊರೆಲ್ಲ ಸುತ್ತಾಡ್ತಾರೆ., ಆದ್ರೆ ಇವರು ಹಾಗಲ್ಲ...ಒಟ್ಟಿಗೆ ಗಂಟೆಗಟ್ಟಲೆ ಮಾತಾಡುವುದಿಲ್ಲ....ಬರಿ ರಾತ್ರಿ ಮಾತ್ರ ಅವರ ಮಾತು....ಆದ್ರೆ ದಿನ message ಮಾಡ್ತಿರುತ್ತಾರೆ...ಆದ್ರೆ ದಿನ ಪೂರ್ತಿ ಅಲ್ಲ...total ಆಗಿ ಒನ್ದ್ ಎರಡು ಗಂಟೆ ಮೆಸೆಜ್ ಮಾಡಿರುತ್ತಾರಷ್ಟೆ...ಅದರಲ್ಲಿ ಮೂರು ಮೆಸೆಜ್ ಅಂತು forward love message ಆಗಿರುತ್ತೆ...

ಹ್ಮ್ಮ್.........ಹಿಂದಿನ ದಿನ ರಾತ್ರಿ ಮಾತಾಡ್ಬೇಕಾದ್ರೆ, ಅವನು ಏನೋ ಅಂದ ಅಂತ, ಇವಳು response ಮಾಡ್ದೆ call cut ಮಾಡ್ಬಿಟ್ಟಿದ್ಳು. ಆದ್ರೆ ಅದು seriousಇಂದ ಅಲ್ಲ... but ಅವನು, ಅವಳ responseಗೆ ತುಂಬಾನೇ ಬೇಜಾರು ಮಾಡ್ಕೊಂಡಿದ್ದ. ಹಾಗೆ ಕೋಪ ಕೂಡ ಬಂದಿತ್ತು. ಕಾರಣ ಅವನು ಮತ್ತೆ ಕಾಲ್ ಮಾಡೊ ಪ್ರಯತ್ನ ಮಾಡಲಿಲ್ಲ...ಆದರೆ ಅವಳು, ಅವನು ಮಾಡ್ತಾನೆ ಅಂತ ಕಾಯ್ತಾನೇ ಇದ್ಳು. ಗಂಟೆ ರಾತ್ರಿ ೩ ರಾದರು ಅವನು ಕಾಲ್ ಇರ್ಲಿ, ಮೆಸ್ಸೆಜ್ ಕೂಡ ಮಾಡ್ಲಿಲ್ಲ...ಅವಳಿಗೆನೊ ಮಾಡ್ಬೇಕು ಅನ್ನಿಸಿತು. ಆದ್ರೆ ego ತಡಿದ್ದಿತ್ತು..ಆದರೆ ಅವನ ನೆಚ್ಚಿನ ಹಾಡು ಕೇಳಿದಾಕ್ಷಣ, ego ಎಲ್ಲ ಮರೆತು ಅವನ ಜೊತೆ ಮಾತಾಡಿ, convince ಆಗಬೇಕು ಎಂದನ್ನಿಸಿ, ಅವನಿಗೆ call ಮಾಡಲು ಮುಂದಾದಳು 974….78 ಒತ್ತಿ call button press ಮಾಡಿದ್ಳು..

"Even in my heart I see,
You’re not being true to me
Deep within my soul I feel
Nothing’s like it used to be.
Sometimes I wish I could turn back time
Impossible as it may seem
But I wish I could so bad baby
Quit playing games with my heart. . ."

ಅವನು ಈ ಹಾಡನ್ನ ತನ್ನ caller tune ಆಗಿ ಯಾಕೆ ಹಾಕಿಸಿಕೊಂಡಿದ್ದಾನೆ!? ತನ್ನ moodಗೆ ತಕ್ಕಂತೆ, situationಗೆ ತಕ್ಕಂತೆ ಅವನು ತನ್ನ caller tune set ಮಾಡ್ಕೊತಾನೆ...ಇಷ್ಟು ದಿನ "ಉಡಿಸಲೆ ಬೆಳಕಿನ ಸೀರೆಯ" ಇದ್ದ ಹಾಡು ಈ ಹಾಡಿಗೆ ಏಕೆ change ಆಯ್ತು!? ಇವನು ಬೇಸರದಲ್ಲಿದ್ದಾನ? ನನ್ನಿಂದ ಬೇಸರವಾಗಿದ್ದೀಯ ಇವನಿಗೆ? ನಿನ್ನೆ ವಿಷಯಕ್ಕ? ಛೆ! ತಪ್ಪು ಮಾಡಿದ್ನ ನಾನು? ಅವಳು ತನ್ನಲ್ಲೇ ಹೇಳ್ಕೊತಾ ಇದ್ಳು. ಎಷ್ಟೆ ಸರತಿ call ಮಾಡ್ತಿದ್ರು ಅವನು receive ಮಾಡ್ತಿರಲಿಲ್ಲ...

ಅವಳು ಸಂಜೆ ಇಂದ ರಾತ್ರಿವರೆಗೂ call ಮಾಡ್ತಾನೆ ಇದ್ಳು. ಆದ್ರೆ ಅವನು ತನ್ನ ಹಠ/ಕೋಪ ಬಿಡಲಿಲ್ಲ. ಅವಳಿಗೆ ಊಟ ಮಾಡ್ಬೇಕೆಂದೂ ಅನಿಸಲಿಲ್ಲ.ಅಮ್ಮನಿಗೆ ಹಸಿವಿಲ್ಲ, ಓದ್ಕೊಬೇಕು, ಯಾರೂ disturb ಮಾಡ್ಬೇಡಿ ಅಂತ ಹೇಳಿ ರೂಮ್ ಒಳಗೆ ಹೋದಳು. ಆ ಕಡೆ ಅವನು ಕೂಡ ಊಟ ಮಾಡಿರಲಿಲ್ಲ. ಅವನಿಗೂ ತಡಿಯಲಾಗಲಿಲ್ಲ. ದಿನಕ್ಕೆ ಒಂದು ಸರತಿಯಾದರು ಅವಳ voice ಕೇಳದಿದ್ದರೆ ಅವತ್ತು ಅವನಿಗೆ ನಿದ್ದೇಯೇ ಬರುತಿರಲಿಲ್ಲ.

ಅವಳು ಇತ್ತ ಕಡೆಯಿಂದ "i'm sorry kano.... i love you...." ಎಂದು message ಕಳುಹಿಸಿದಳು. ಅದೆ ಸಮಯಕ್ಕೆ ಅತ್ತ ಕಡೆಯಿಂದ "i'm sorry kane....love u pa...missing u a lot..." ಅಂತ ಅವನೂ message ಕಳುಹಿಸಿದ್ದ...ಅಲ್ಲಿ ಅವನು, ಅವಳ message ನೋಡಿ call ಮಾಡಿದ. ಇತ್ತ ಕಡೆ ಅವಳು ಕೂಡ. "the number you are trying to call is currently busy. try again later" ಅಂತ ಇಬ್ಬರಿಗು ಬಂತು. ಆಗ ತಿಳಿಯಿತು ಇಬ್ಬರು ಒಬ್ಬರಿಗೊಬ್ಬರಿಗೆ call ಮಾಡ್ತಿದ್ದಾರೆಂದು. ಆಗಾಗಿ ಅವಳು ಮತ್ತೆ ಮಾಡಲಿಲ್ಲ. ಅವನೇ ಕಾಲ್ ಮಾಡಿದ. ಅಷ್ಟರಲ್ಲಾಗಲೆ ಇಬ್ಬರ ಕಣ್ಣು ಒದ್ದೆಯಾಗಿತ್ತು...

"da sorry ಕಣೊ...ನಾನು ತಮಾಷೆಗೆ ಹಾಗೆ ಹೇಳಿದ್ದು. ಆದ್ರೆ ಕೋತಿ, ನೀನು serious ಆಗಿ ತಗೊಂಡು call cut ಮಾಡ್ಬಿಟ್ಟೆ....!"

"ಅಲ್ಲೊ, ನಾನು ಎಷ್ಟು ಸರತಿ ಹೀಗೆ ಮಾಡಿಲ್ಲ ಹೇಳು? ಮೊದ್ಲೆಲ್ಲ ಮತ್ತೆ ಕಾಲ್ ಮಾಡ್ತಿದ್ದವ್ನು ನಿನ್ನೆ ಯಾಕೆ ಮಾಡ್ಲಿಲ್ಲ???? ಕೊಬ್ಬ loafer?

"ಹ್ಹಾ ಏನ್ ಕೊಬ್ಬು? ಯಾವಾಗ್ಲು ನಾನೇ convince ಆಗ್ಬೇಕ? ನೀನೆ ಮಾಡ್ಬಹುದಿತ್ತಲ್ಲ?"

"ನಿನ್ಗೆ ಎಷ್ಟು egoನೊ ನನ್ಗು ಅಷ್ಟೆ ಇದೆ ಸ್ವಾಮಿ. ಅರ್ಥ ಮಾಡ್ಕೊಳಿ.."

"ಆಯ್ತ್ ಬಿಡಮ್ಮ. ಹುಡ್ಗಿರ್ಗೆ ನಾವ್ ಹುಡುಗ್ರು ಬಗ್ಗದೆ ಇರಕ್ಕಾಗುತ್ತ?"

"ಲೊ ಏನು ಯಾವಾಗ್ಲು ನೀನೇ convince ಆಗೊ ಹಾಗೆ ಮಾತಾಡ್ತಿದ್ದೀಯಲ್ಲ..!!?"

"ಅಯ್ಯೋ! ಇಲ್ವೇ! ಬಿಡೆ ಆ ವಿಷಯ convince ಆಗೋಕೆ ಕಾಲ್ ಮಾಡಿದ್ರೆ, ಮತ್ತೆ ಜಗಳ ತೆಗಿತಿಯಲ್ಲ!!"

"ಹ್ಮ್  chorry"

"ಲೇ ಹೊಟ್ಟೆ ಹಸಿತಿದೆ ಕಣೆ!"

"ನನ್ಗೂ ಕಣೊ"

"ಹೆಯ್ ಇನ್ನ ಊಟ ಮಾಡಿಲ್ವೆನೆ?"

"ಇಲ್ಲೊ...ನೀನ್ ಮಾತಾಡ್ಲಿವಲ್ಲ so ಮಾಡಕ್ಕೆ ಮನಸ್ಸಾಗ್ಲಿಲ್ಲ... ನೀನ್ ಮಾಡ್ದ? ಹೊಟ್ಟೆ ಹಸಿತಿದೆ ಅಂದೆ!?"

"same here ಪುಟ್ಟ. ನನ್ wife voice ಕೇಳಿಲ್ಲ ಅಲ್ವ, ಅದಕ್ಕೆ ನನ್ಗೆ ಇವತ್ತು no mood on anything.."

"ಅಚ್ಚೋ!!! ಏನ್ husby ಸಾಬ್ ಅಷ್ಟು love ಮಾಡ್ತಿರೊ ನನ್ನನ್ನ?"

"ಲೇ ಕತ್ತೆ ಮುಚ್ಚು! ಏನು ಗೊತ್ತಿಲ್ದೆ ಇರೋರ ಥರ ಆಡ್ಬೇಡ"

"ಹಹ್ಹಹ್ಹ....ಸರಿ... ಅಪ್ಪಿ ಹೋಗೊ ಏನಾದ್ರು ತಿನ್ನು ಮೊದ್ಲು."

"ಇಲ್ಲೊ ನೀನ್ ತಿನ್ನು ಮೊದ್ಲು. ನಾನು ಆಮೆಲೆ ತಿನ್ತೀನಿ"

"ಇಲ್ಲ ನೀನ್ ತಿನ್ನು ಮೊದ್ಲು"

"ನೀನು"

"ನೀನು"

"ಹೆಯ್ ನೀನು"

"ಅಬ್ಬಬ್ಬಾ...ಇಬ್ರು ತಿನ್ನೋಣ ಒಕೆ?

"ಹ್ಮ್ಮ್ಮ್ so ready... ನೀನು ತಿನ್ನು ನಾನು ತಿನ್ತೀನಿ.."

ಅವಳು ಅವನಿಗೆ ಇಷ್ಟವಾದ sunfeast dark fantasy biscuit ಹಾಗೂ kitkat chocolate ತಿಂದ್ಳು, ಅವನು ಅವಳಿಗೆ ಇಷ್ಟವಾದ dairy milk fruit and nut ಹಾಗು hide and seek biscuit ತಿಂದ.

ಒಂದು ದಿನ ಹೀಗೆ ಜಗಳ ಆಡಿ ಊಟ ಮಾಡದೆ ಇದ್ದಾಗ ಅವಳು ಕೊಟ್ಟ ಪ್ಲಾನ್ ಇದು. ಇಬ್ಬರ ಹತ್ತಿರವು ಅವರಿಷ್ಟ ಪಡುವ biscuit ಹಾಗು chocolate ಇರ್ಬೇಕು. ಜಗಳ ಆಡಿ convince ಆದ್ಮೇಲೆ ತಿನ್ಬೇಕು ಅಂತ!

ತಿಂದಾದ್ಮೇಲೆ ಮತ್ತೆ ಮಾತು ಶುರುವಾಯ್ತು. ಅದೇ same ತುಂಟತನದ, ಪ್ರೀತಿಯ, ಕೋಪದ ಮಾತುಗಳು. ರಾತ್ರಿ ಎರಡು ಗಂಟೆ ತನಕ ಮಾತಾಡ್ತಾನೆ ಇದ್ರು. ಅಷ್ಟರಲ್ಲಿ ಅವಳಿಗೆ ನಿದ್ದೆ ಬರ್ತಾ ಇದೆ ಅಂತ ತಿಳಿದ ಅವನು,

"ನಿದ್ದೆ ಬರ್ತಿದ್ದ್ಯೇನೆ ಪುಟ್ಟ? ಮಲ್ಕೊತ್ಯ?"

" ಹ್ಮ್ ಅಪ್ಪಿ"

"ಸರಿ ಮಲ್ಕೊ ಪಾಪು good night"

"good night"

"sweet dreams"

"sweet dreams"

"ನನ್ ಹೆಂಡ್ತಿ ಚೆನ್ನಾಗಿ ನಿದ್ದೆ ಮಾಡ್ಲಪ್ಪ ದೇವ್ರೆ"

"ನನ್ ಗಂಡ ಕೂಡ!"

"ಸರಿ ಕಣೊ see you"

"ಹ್ಮ್ಮ್ಮ್ call cut ಮಾಡೊ...ಬಿಟ್ರೆ ಮಾತಾಡ್ತಾನೆ ಇರ್ತ್ಯ...ನಾನ್ ಮಲ್ಕೊಬಾರ್ದ?"

"ಹ್ಹಾ ಸರಿ ಪುಟ್ಟ love you...see ya"

Wednesday, October 5, 2011

ಹೀಗೆ ಕೆಲವೊಮ್ಮೆ. . .

    ಒಂಟಿ ರಸ್ತೆಯಲಿ, ತಲೆ ತಗ್ಗಿಸಿ ಏಕಾಂತವಾಗಿ ನಡೆಯುತ್ತಿದ್ದಳು "ಅವಳು". ಮನಕ್ಕಾದ ನೋವು ಉತ್ತುಂಗಕ್ಕೇರಿತ್ತು. ಅರಿವಿಲ್ಲದೆಯೋ, ಮನಸ್ಸ ಇಚ್ಛೆ ಕೇಳಿಯೋ ಏನೋ ಹೊರಕ್ಕೆ ಜಿಗಿಯಿತು ಒಂದು ಹನಿ ಕಣ್ಣಿನಿಂದ. ಪ್ರೀತಿಯು ಬರುಡಾಗಿದೆ, ಕಣ್ಣೀರಿನ ಕೋಡಿ ಹರಿಸಿಯಾದರೂ ಜೀವ ತುಂಬುವ ಆಸೆಯೋ ಏನೊ ಒಂದೊಂದೆ ಹನಿಯನೂ ಹೊರ ದಬ್ಬಲು ಆರಂಭಿಸಿದಳು. ನಡುವೆ ಎಲ್ಲಿಂದಲೊ ಕೇಳಿಸಿದ ಯಾರದೋ ಧನಿಯಿಂದ ಎಚ್ಚರಗೊಂಡು, ನಾನು ಜನರ ನಡುವೆ ಇದ್ದೇನೆ, ಇದು ನನ್ನ ಕತ್ತಲೆಯ ಕೋಣೆಯಲ್ಲ ಎಂದುಕೊಂಡು ಕಣ್ಣೀರು ಕಣ್ಣಿನಿಂದ ಹೊರಬರದಂತೆ ನೋಡಿಕೊಂಡಳು. ಆದರೆ ಮನಸ್ಸು ಬಿಕ್ಕಿ ಬಿಕ್ಕಿ ಅಳುತಿತ್ತು. ಯಾರನ್ನೋ ನೆನೆಯುತ್ತಿತ್ತು, ಯಾರಿಗೋ ಕಾಯುತಿತ್ತು, ಯಾರೊಂದಿಗೋ ಸಂಭಾಷಿಸುತಿತ್ತು. ಮತ್ಯಾರಿಗೋ ಶಪಿಸುತಿತ್ತು. ಹೀಗೆ ತಲುಪಿದಳು ತನ್ನ ಸೂರಿಗೆ. ಮನ ಅವಳ ಕೋಣೆಯ ಒಂದು ಮೂಲೆಯನು ಬಯಸುತಿತ್ತು. ಧಾವಿಸಿದಳು ತನ್ನ ಕೋಣೆಗೆ, ಬಾಗಿಲನು ಬಿಗಿಯಾಗಿ ಹಾಕಿ ಅಲ್ಲೇ ಕುಸಿದಳು. ಕಣ್ಣನ್ನು ಕೈಯಲ್ಲಿ ಮುಚ್ಚಿ ಬಿಕ್ಕಿ ಬಿಕ್ಕಿ ಅಳತೊಡಗಿದಳು! ಏನೋ ಹೇಳಬೇಕು, ಯಾರೊಂದಿಗಾದರು ತನ್ನ ದುಃಖವ ಹಂಚಿಕೊಳ್ಳಬೇಕು ಎಂದು ಮನಸ್ಸು ಆಶಿಸುತಿತ್ತು. ಆದರೆ ಅವಳಿಗೆ ಇದ್ದವರಾದರು ಯಾರು? ಒಂಟಿ ಹುಡುಗಿ.., ಮನಸ್ಸೇ ಅವಳಿಗೆ ಎಲ್ಲಾ. ಯಾರ ಜೊತೆ ಮಾತನಾಡಬೇಕು ಎಂದನಿಸಿದರೆ ಹಾಗೇ ಮಾತಾಡುವಳು, ನೋವ ಹೊರಹಾಕುವಳು ಕಣ್ಣೀರಿಡುತ್ತ. ಎಲ್ಲ ಕೇಳಿಸಿಕೊಳ್ಳುತಿದ್ದ ಆ ಗಾಳಿಯು ಅವಳ ಮೊಗವ ಒಮ್ಮೆ ಸವರಿ, ಕಣ್ಣೀರಾರಿಸಿ ಹೋಗುತಿದ್ದವು. ಅವುಗಳಿಂದಲೇ ಅವಳಿಗೆ ಸಮಾಧಾನ! ದಿನವೂ ನಾಲ್ಕು ಮೂಲೆಯ ಆ ಕತ್ತಲೆ ಕೋಣೆ, ಸಂಜೆಯ ಆ ಆಗಸ ಹಾಗೂ ತಂಗಾಳಿ, ನೆಚ್ಚಿನ ಭಾವಗೀತೆ, ನೊಂದ ಮನಸ್ಸೇ ಅವಳಿಗೆ ಜಂಟಿಯಾಗಿ ಬರುತಿದ್ದರು. ಹೀಗೆ ಅವಳು ತನ್ನ ತಪ್ಪೆ, ತನ್ನ ನಲ್ಲನ ತಪ್ಪೆ, ಅಥವಾ ಮನಸ್ಸಿನದೊ ಇಲ್ಲ ವಯಸ್ಸಿನದೋ ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಕೂರುತಿದ್ದಳು.


    ಅಗಾಧವಾಗಿ ಅವನನ್ನು ಹಚ್ಚಿಕೊಂಡಿದ್ದವಳು, ಇಂದು ಅವನು ಬೇಡವೆಂಬ ನಿರ್ಧಾರಕ್ಕೆ ಬಂದಿದ್ದಾಳೆ. ಕಾರಣ ಅವನು ತನ್ನ ಜೊತೆಗೆ ಹೆಚ್ಚಿನ ಸಮಯ ಇರುವುದಿಲ್ಲ ಎಂಬುದು..! ಹಾಗೂ ಆ ಯೋಚನೆಗೆ ಈಗ ಅವನು ಮೊದಲಿನಂತೆ ಇಲ್ಲವೆಂದೂ, ಮೊದಲಿನಂತೆ ಪ್ರೀತಿ ತೋರುತಿಲ್ಲವೆಂದು ಹಾಗೂ ಅವಳನ್ನು ನಿರ್ಲಕ್ಷಿಸುತಿರುವನು ಎಂದೂ ಹೇಳಲು ಶುರು ಮಾಡಿದೆ ಮನವು.!


    ಹುಡುಗೀರ ಮನಸ್ಸೇ ಹೀಗೆ! ತಾವು ಅಚ್ಚಿಕೊಂಡವರು, ಆಪ್ತರಾದವರು ಯಾವಾಗಲೂ ತಮ್ಮೊಟ್ಟಿಗೆಯೇ ಇರಬೇಕೆಂಬ ಬಯಕೆ. ಮನಸ್ಸಲ್ಲಿ ಯಾರದರು ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದರೆ, ಆ ಸ್ಥಾನದಲ್ಲಿ ಕೇವಲ ಅವರಿಗೆ ಮಾತ್ರ ಜಾಗ. ಅವರು ಎದ್ದು ಹೋದರೂ ಅವರದೇ ಚಿಂತೆ. ಅವರೇ ಆ ಜಾಗ ತುಂಬ ಬೇಕೆಂಬ ಬಯಕೆ. ತಮ್ಮ ಸುಖ ದುಃಖಗಳಿಗೆ ಕಿವಿಯಾಗುತಿದ್ದವರು, ಸಂತೋಷ-ಉತ್ಸಾಹ ನೀಡುತಿದ್ದವರು ದೂರವಾದರೆ, ಜೊತೆಗೆ ಯಾರೂ ಇಲ್ಲವಾಗಿ ಒಂಟಿಯಾದರೆ ಹೆಣ್ಣು ಮಕ್ಕಳ ಸುತ್ತ ಸುತ್ತುವರೆದು ನಿಲ್ಲುವುದು ಕೇವಲ ನೆನಪು! ಆ ನೆನಪುಗಳ ನೆನೆದು ಅವನೆಲ್ಲ ಮತ್ತೊಬ್ಬರ ಜೊತೆಗೆ ಅಂಚಿಕೊಳ್ಳಬೇಕೆಂಬ ಬಯಕೆ ಉಂಟಾದಾಗ ಜೊತೆಯಾಗುವುದು ಆ ಕೆಂಪೇರಿದ ಮೋಡ, ಇಲ್ಲವೆ ಕೆಂಪು ಸೂರ್ಯನನ್ನು ತೆರೆಯ ಹಿಂದೆ ಸರಿಸಿ, ಕಾರ್ಮೋಡದ ನಡುವೆ ಬಂದ ತಿಂಗಳು, ಅದರ ಸುತ್ತ ಮುತ್ತ ಪಳ ಪಳನೆ ಹೊಳೆಯುವ ನಕ್ಷತ್ರಗಳು, ತಂಪಾಗಿ ಎಲ್ಲಿಂದಲೋ ಬೀಸಿ ಬರುವ ತಂಗಾಳಿ, ಇಲ್ಲದಿದ್ದರೆ ತನ್ನ ಕೋಣೆಯು, ಅದರೊಳಗೆ ಇನ್ನೂ ಅವಳ ನಿಟ್ಟುಸಿರ ಬಿಸಿ ಆರದ ಕಾವು, ಇಲ್ಲವೆ
                                    "ಬಾನಿನಲ್ಲಿ ಒಂಟಿ ತಾರೆ, ಸೋನೆ ಸುರುವ ಇರುಳ ಮೋರೆ,
                                    ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೊ ನೀರೆ"
ಎಂಬ ಮೆಚ್ಚಿನ ಭಾವಗೀತೆಯ ನೆಚ್ಚಿನ ಸಾಲುಗಳು ಜೊತೆಯಾಗಿ ಅವಳ ಜೊತೆ ದುಃಖಿಸುತವೆ!


    ಹಾಗೇ ಆಗಿದ್ದು "ಅವಳ"ಲ್ಲಿಯೂ. ಅಚ್ಚಿಕೊಂಡ ನಲ್ಲನನ್ನು ದೂರಮಾಡಿದ್ದಾಳೆ. ಅಚ್ಚಿಕೊಂಡ ತಪ್ಪಿಗೆ, ದೂರ ಮಾಡಿದ ತಪ್ಪಿಗೆ ಕೊರಗುತಿದ್ದಾಳೆ! ನರಳುತಿದ್ದಾಳೆ! ಬಿಕ್ಕುತಿದ್ದಾಳೆ!


    ಯಾರ ತಪ್ಪು ಇಲ್ಲಿ? ಅವನನ್ನು ಅಚ್ಚಿಕೊಂಡ ಇವಳ ತಪ್ಪೆ? ನೆಚ್ಚಿನ ನಲ್ಲ ಎಂದಿಗೂ ನನ್ನೊಂದಿಗೇ ಇರಬೇಕೆಂಬ ಹುಚ್ಚು ಮನಸ್ಸಿನ ತಪ್ಪೆ? ಅವಳ ಜೊತೆ ಇರಬೇಕು ಎಂದು ಬಯಸುತಿದ್ದರೂ, ಆ ರೀತಿ ಆಗುತಿಲ್ಲ ಎಂಬ ಅವನ ತಪ್ಪೆ? ಮೊದಮೊದಲು ಜೊತೆಗೇ ಇದ್ದ, ಹಲವು ಬಾರಿ ಪ್ರೀತಿ ಹೇಳುತಿದ್ದ, ನಲಿವಿನಲ್ಲೇ ಮುಳುಗೇಳಿಸುತಿದ್ದ ಅವನ ಮಾತಿನ ತಪ್ಪೆ? ಭವಿಷ್ಯ ಮುಖ್ಯ ಎನ್ನುವ ಅವನ ಪ್ರಭುದ್ದತೆಯ ತಪ್ಪೆ? ವರ್ತಮಾನದ ಸೊಬಗ ಬಯಸುವ ಅವಳ ತಪ್ಪೆ? ಇಲ್ಲವೆ ಅವಳ ಗುಣವು ಹೀಗಿದ್ದರೂ, ಅವನ ಗುಣ ಹಾಗಿದ್ದರೂ, ಇವರಿಬ್ಬರ ನಡುವೆ ಪ್ರೀತಿ ಎಂಬ ಬಲೆ ಬೀಸಿ ಮೇಲೆ ಇರುವ (!?) ಆ ದೇವರ ತಪ್ಪೆ?


                                    ಕಾಲವು ಅದೆಂತಹ ಕೀಚಕನು
                                    ಪ್ರೀಮಿಗಳ ದೂರ ಮಾಡಿಹನು
                                    ದೇವನಾಗಿರುವನು ಖಳನಾಯಕ
                                    ಪ್ರೀತಿ ಆಗುವುದೆ ನಿರರ್ಥಕ!?

Saturday, October 1, 2011

ಶೃತಿಯ ಮರೆತಿಹನು, ಒಲವ ಮರೆತಿಹನು


ಪ್ರೀತಿಯ ಮೆರವಣಿಗೆ ಮುಗಿದ ಮೇಲೆ
ಖಾಲಿ ಖಾಲಿಯು ಈ ಹಾದಿಯು
ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
ಮಸಣದ ಗೂಬೆಯ ಕೂಗೇ ಎಲ್ಲವು. . !

ಒಲವಿಲ್ಲದ ನಾನು
ಶಪಿಸುತ್ತಿರುವೆನು ಈ ಘಳಿಗೆ
ನಲ್ಲನಾಶ್ರಯದಲಿ ಲೋಕ ಮರೆತಿರುವ
ನಲ್ಲೆಯ ಕಂಡು ಒಳಗೇ. . .

ಅನುರಾಗದ ಸ್ವರ ಮೂಡದ
ಮುರಳಿಯ ಹಿಡಿದಿಹನು ನಲ್ಲ
ಶೃತಿಯ ಮರೆತಿಹನು, ಒಲವ ಮರೆತಿಹನು
ಉಸಿರು ಬಾರದು ಹೊರಗೆ,
ನನ್ನ ಮೇಲೆ ಮನಸ್ಸಿಲ್ಲದಾಗಿ ಅವನಿಗೆ. . !

Thursday, September 15, 2011

ಇನ್ನೂರನೆ ಕವನ

ಜೊತೆಗೆಯೇ ಬಂದಿರುವೆ ಓ
ನಲುಮೆಯ ಶ್ವೇತ ಕಾಗದವೆ
ಒಲುಮೆಯ ಕಪ್ಪು ಶಾಯಿಯೆ,
ಧನ್ಯವಾದಗಳು ನಿಮಗೆ. . .

ಮನಸ್ಸಿನ ಭಾವನೆಗಳ ಹೋರ
ಹಾಕಲು ನೀಡಿದಿರಿ ಸಹಾಯ ಹಸ್ತ
ಸಂತೋಷವ ಹೆಚ್ಚಿಸಿರುವಿರಿ
ದುಗುಡವ ನಿಯಂತ್ರಿಸಿರುವಿರಿ
ಏನೆಂದು ಹೇಳಲಿ, ಹೇಗೆಂದು
ಕೃತಜ್ಙತೆ ಸಲ್ಲಿಸಲಿ?

ವೀರ ಯೋಧರ ಬಗೆಗೆ
ಮತ್ತಷ್ಟು ಹೆಚ್ಚಿಸಿದಿರಿ ಅಭಿಮಾನ
ತಾಯಿ ಭಾರತಾಂಬೆಗೆ ಸಲ್ಲಿಸಿಸಿರುವಿರಿ
ಭಕ್ತಿ ತುಂಬಿದ ನಮನ. . .

ಹೆತ್ತಮ್ಮನಿಗೆ ನನ್ನಲ್ಲಿ,
ಅಡಗಿ ಕುಳಿತಿರುವ ಪ್ರೀತಿಯ
ಹೊರ ಹೊಮ್ಮಿಸಿದಿರಿ
ಅವಳಿಗೆ ನಾ ಜನುಮ
ಜನುಮದ ಋಣಿಯಾಗಿರುವೆ
ಎಂಬುದ ತಿಳಿಸಲು ಸಹಕರಿಸಿದಿರಿ. . .

ಕಾಲೇಜಿನ ಆಟ ಪಾಠಗಳು
ಮೋಜು-ಮಸ್ತಿಗಳು,
ಹಾರೈಸುವ ಗುರುವೃಂದದವರು
ಎಲ್ಲರೂ ನಿಮ್ಮ ಕಪ್ಪು-ಬಿಳಿಪಿನ
ನಡುವೆ ಬಂದು ಹೋಗಿಹರು. . .

ನಲ್ಲನ ಮೇಲಿರುವ ಪ್ರೀತಿ,
ಹಾಗೊಮ್ಮೆ ಹೀಗೊಮ್ಮೆ ಮೂಡುವ
ಹುಸಿ ಮಿನಿಸು, ನಸು ನಾಚಿಕೆ,
ಇವ ತೋರಲು, ತಿಳಿ ಹೇಳಲು
ಜೊತೆಗೆ ಬಂದಿದ್ದೀರಿ. . .

ಇನ್ನೂರನೆಯ ಈ ಕವನದಲ್ಲಿ
ನಿಮಗಿದೋ ನನ್ನ ಕೋಟಿ
ಕೋಟಿ ವಂದನೆಗಳು
ಹೀಗೇ ಜೊತೆಗೆ ಇರಿ ಎಂದಿಗೂ
ನನ್ನ ಭಾವನೆ ವ್ಯಕ್ತವಾಗಲಿ
ನಿಮ್ಮ ಮೂಲಕವೆ,
ಅರಿಯಲಿ ಈ ಜಗವು
ನಾನು ನೀವು ಆತ್ಮೀಯ ಸ್ನೇಹಿತರೆಂದೇ. . .

Monday, September 5, 2011

ಹೀಗಿರಬೇಕು ನನ್ನ ನಲ್ಲ

ಹೀಗೆ friends ಎಲ್ಲಾ ಒಟ್ಟಿಗೆ ಕುಳಿತಿದ್ದು ಏನೂ ಮತಾಡಲಿಕ್ಕೆ ಇರಲಿಲ್ಲ ಅಂದ್ರೆ ಬರೊ ವಿಷಯ "ನಿನ್ನ ನಲ್ಲ ಹೇಗಿರಬೇಕು?" "ಹೇಗೆ ನೋಡ್ಕೊಬೇಕು?" ಅನ್ನೋದು... ಬರಿ ಇಲ್ಲೆ ಅಲ್ಲ... ಎಲ್ಲಿ ಹೋದ್ರು ಇದೇ ಪ್ರಶ್ನೆ ಬರೊದು ಯಾವ ವಿಷಯವು ಇಲ್ಲ ಅಂದ್ರೆ... ಈ gmail, facebook, orkutನಲ್ಲು ಇವೇ ಅಂತೆ... ಇನ್ನು ಆ ಪ್ರಶ್ನೆಗೆ ಆಗ ಒಂದೆರಡು lineನಲ್ಲಿ ಹೇಳ್ತಾರೆ ಇಲ್ಲ ಅಂದ್ರೆ ಅದರ ಬಗ್ಗೆ ಇನ್ನ ಯೋಚಿಸಿಲ್ಲ (ಆದ ಹೇಳೋಕೆ ಆಗಲ್ಲ ಅಂತ ಹೀಗೆ ಹೇಳ್ತಾರೆ) ಅಂತ ಉತ್ತರ ಬರುತ್ತೆ.. ಇಷ್ಟಾದ್ರು ಕೆಲವರು ಆ ಪ್ರಶ್ನೆ ಕೇಳೋದು ನಿಲ್ಲಿಸೊದೇ ಇಲ್ಲ... ಹೀಗೆ ನನಗೂ ಯಾರದ್ರು ಕೇಳ್ಬಹುದೆನೋ..ಅದಕ್ಕೆ ನಾನು ಯೋಚಿಸಿ ಎಲ್ಲರಿಗೂ ಒಂದೊಂದು ಸರತಿ ಹೇಳಿ, ಕೆಲವೊಂದನ್ನು miss ಮಾಡೊದು ಯಾಕೆ ಅಂತ ಇಲ್ಲೆ ಒಟ್ಟಿಗೆ ತುಂಬಾ ಮುಖ್ಯವಾಗಿರೊದನ್ನ ಹೇಳ್ತೀನಿ....:P

    ಎಲ್ಲರಿಗೂ.., ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮದೇ ಆದ ಆಸೆ, ಆಕಾಂಕ್ಷೆಗಳಿರುತ್ತದೆ. ಅದು ಯಾವ ವಿಷಯದಲ್ಲೇ ಆಗಿರಬಹುದು.. ಆ ವಿಷಯಗಳಲ್ಲಿ ಒಂದಾದುದು "ತನ್ನ ನಲ್ಲ ಹೀಗೆಲ್ಲಾ ಇರಬೇಕು" ಎಂಬುದು. ಹಾಗೇ ನನಗೂ ಕೂಡಾ ಆ "ನನ್ನ ನಲ್ಲ" ಹೀಗೆಲ್ಲಾ ಇರಬೇಕು, ಹೀಗೆ ನೋಡಿಕೊಳ್ಳಬೇಕು, ಅದು ಕೊಡಿಸಬೇಕು, ಇದು ಮಾಡ್ಬೇಕು ಹಾಗೇ ಹೀಗೆ ಅಂತ ಕೆಲವೊಂದು ಆಸೆಗಳುಂಟು.

    ಹ್ಮ್.. ಎಲ್ಲಾ ಹುಡುಗಿ ಇಷ್ಟಪಡೋ ಹಾಗೆ ನನಗೂ ಎತ್ತರದ ಹುಡುಗ ಬೇಕು. ನನಗಿಂತ ಎರಡು-ಮೂರು ಇಂಚು ಉದ್ದ ಇರಬೇಕು. ನಾ ಅವನನ್ನ ತಬ್ಬಿಕೊಂಡಾಗಲೆಲ್ಲಾ ಅವನ ಎದೆ ಬಡಿತ ಕೇಳಿಸ್ಬೇಕು. ಇನ್ನು ಅವನು ನನ್ನ ಮಗು ಥರ ನೋಡಿಕೊಳ್ಬೇಕು.(over ಆಯಿತು ಅಲ? :P ) ನಾನು ಮೊದ್ಲೇ ಒಂದ್ ಥರ ಭಾವಜೀವಿ. ಬೇಗ ಎಲ್ಲಾನು ಮನಸ್ಸಿಗಚ್ಚಿಕೊಂಡುಬಿಡ್ತೀನಿ. so ನನಗೆ ಖುಷಿಯಾದಾಗೆಲ್ಲ. ಇಲ್ಲ ದುಃಖ ಆದಾಗ ಸ್ವಲ್ಪ over ಆಗಿ react ಮಾಡ್ತೀನಿ. ಅದಕ್ಕೆ ನಾನು ಸಂತೋಷದಲ್ಲಿದ್ದಾಗ ಅವನೂ ಕೂಡಾ ನನ್ನ ಜೊತೆ ಬೆರೆತು ನನ್ನ ಖುಷಿ ಹೆಚ್ಚಿಸ್ಬೇಕು. ಇನ್ನು ನಾ ದುಃಖಿಸುತ್ತಾ, ಅಳುತ್ತಾ ಇದ್ರೆ ಕಣ್ಣೀರು ಒರೆಸಿ, ಮಗುವಿಗೆ ಸಮಾಧಾನ ಮಾಡೋ ಹಾಗೆ ಮಡ್ಬೇಕು..

    ನನ್ಗೆ ಇಷ್ಟ ಆಗೋದನ್ನೇಲ್ಲಾ ಕೊಡಿಸ್ಬೇಕು. ನನ್ನ ಲಿಸ್ಟ್ ಎಣು ದೊಡ್ಡದಲ್ಲ. ದೊಡ್ಡದ್ದೆ but costlyದಲ್ಲ. ಈ key chains, finger ring, cartoon stickers, ಮಣಿಸರ, ಬಳೆ, ಬಿಂದಿ, ರಿಬ್ಬನ್, nail polish ಹೀಗೆ ಎಲ್ಲವೂ :P  ಅದು ಬಿಟ್ರೆ ನನ್ಗೆ ತಿಂಡಿಗಳಂದ್ರೆ ತುಂಬಾ ಇಷ್ಟ.. so ನನ್ಗೆ ಇಷ್ಟ ಆಗೊ ತಿಂಡಿನೆಲ್ಲ ಅವನೇ ಮಾಡಿ ನನಗೆ ತುತ್ತು ತಿನ್ನಿಸ್ಬೇಕು. ಏನು ಬರಲಿಲ್ಲ ಅಂದ್ರು ಚಿತ್ರನ್ನ ಮಾತ್ರ must and should ಅದು ಬಿಟ್ರೆ ಬಿಸಿಬೇಳೆ ಬಾತ್, ಕಾರಟ್ ಪಲ್ಯ, ದೋಸೆ, and so on ಮತ್ತೆ ವಾರದ ಕೊನೆಯಲ್ಲಿ ಅಂವ ಸಂಜೆ ನನ್ನ ಈಚೆ ಕರೆದುಕೊಂಡು ಹೋಗಿ ಗೋಲ್ಗಪ್ಪ ಕೋಡಿಸ್ಬೇಕು...,ನಾನು ಸಾಕು ಅನ್ನೋ ತನಕ. . . ಹಾಗೆ ice cream ಕೂಡ. ಈ ice cream ವಿಷಯ ಬರೋದು ಜಾಸ್ತಿ ಮಳೆಗಾಲ ಹಾಗೂ ಚಳಿಗಾಲದಲ್ಲಿ. ಸೋನೆಮಳೆಲೇ ಆಗ್ಲಿ, ಸುಯ್ ಅಂತ ಸುರಿಯೊ ಜಡಿಮಳೇಲೇ ಆಗ್ಲಿ ನನಗೆ ice cream ಕೊಡಿಸ್ಲೇಬೇಕು. ಶೀತ ಆಗುತ್ತೆ ಅದು ಇದು ಅನ್ನೊ explanation ಇರಕೂಡದು.

    ನನ್ನ ಹುಡುಗ ನನ್ನ ತುಂಬ ತುಂಬ ತುಂಬಾ ಪ್ರೀತಿಮಾಡ್ಬೇಕು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಮುತ್ತು ಕೊಡದೆ ಪ್ರೀತಿ ಮಾಡ್ಬೇಕು, ಮುತ್ತು ಕೊಡದೆ ಮುದ್ದು ಮಾಡ್ಬೇಕು. ಅವನಿಗೆ ಎಷ್ಟು ಸಾಧ್ಯವೋ ಅಷ್ಟೂ ಕಾಲ ನನಗಾಗೇ ಮೀಸಲಾಗಿರಬೇಕು... (selfish  ನಾನು) ನನಗೆ ಅಪ್ಪ ಅಮ್ಮ ಅಣ್ಣ ತಂಗಿ friend ಎಲ್ಲವೂ ಆಗಿರಬೇಕು. ರಾತ್ರಿಯಿಡೀ ನಾನು ಅವನು ಮಾತಾಡ್ತಾನೇ ಇರಬೇಕು. ನಾನು ಅವನ ಹೆಗಲ ಒರಗಿ ಅವನ ಅಂಗೈ ಹಿಡಿದು ಏನೇನನೋ ಗೀಚ್ಚುತ್ತಾ ಮಾತಾಡ್ತಿರಬೇಕು. ಅನಿವಾರ್ಯದಿಂದ ದೂರಾದಗಲೂ ಅಷ್ಟೆ, call ಮಾಡಿ ಅವನು ನನ್ನ ತುಂಬಾ ಪ್ರೀತಿಸ್ತಿದ್ದಾನೆ ಹಾಗೆ ನನ್ನ  miss ಮಾಡ್ಕೊತಿದ್ದಾನೆ ಅಂತ ಹೇಳ್ಬೇಕು. ಹುಡುಗೀರ ಜೊತೆ ಹಾಗಿರಲಿ ಹುಡುಗರ ಜೊತೆಯೂ ಜಾಸ್ತಿ ಮಾತಾಡ್ಬಾರ್ದು. ಅವನು friends ಜೊತೆ ಇದ್ರೆ ನನ್ನ ಕೆಲ ಕಾಲ ಮರೆತು ಬಿಡ್ತಾನಲ್ಲ ಅಂತ ನನಗೆ ಭಯ ಅಷ್ಟೆ...

    ನನಗೆ ಸ್ವಲ್ಪ ಜಾಸ್ತಿನೇ ಮುಂಗೋಪ. ಬೇಗ ಕೋಪ ಬರುತ್ತೆ. ನನ್ನ ಆ ಕೋಪದಿಂದ ಬಂದ ಮಾತನ್ನು ಅವನು ತಲೆಗಾಕಿಕೊಳ್ಳದೆ, ನನ್ನ ಆ ಮಾತಿಗೆ ನಕ್ಕು, ತಲೆಗೆ ಮೊಟಕಿ, ಬಿಗಿದಪ್ಪಿ, "ಅಯ್ಯೋ ಕಂದ" ಅಂತ ಪ್ರೀತಿಲಿ ಹೇಳಿ ನನ್ನ ಸಮಾಧಾನ ಮಾಡ್ಬೇಕು. ಬದಲಾಗಿ ಅವನಿಗೇ ಕೋಪ ಜಾಸ್ತಿ ಅಂದ್ರೆ no use....

    ಇನ್ನು ನಾವೇಲ್ಲೇ ಹೊರಗಡೆ ಹೋದ್ರು ಕೈ ಹಿಡಿದೇ ಹೋಗ್ಬೇಕು. ಹೆಚ್ಚಾಗಿ ನಮ್ಮ ಪಯಣ ಕಾಲ್ನಡಿಗೆಯಲ್ಲೇ ಇರಬೇಕು. ತುಂಬು ಹುಣ್ಣಿಮೆಯ ದಿನದಂದು ಎಷ್ತೇ ಕಷ್ಟವಾದ್ರೂ ಚಂದಿರನ ಬೇಲಕ್ಕಲ್ಲಿ ನಾವಿಬ್ರು ನಡಿಲೇ ಬೇಕು ಅವನ ಕೈ ಹಿಡಿದು...

    ಇನ್ನು ಅವನಿಗಾಗೆ ನಾ ಬರೆಯೊ ಪತ್ರ, ಕವನ ಎಲ್ಲವನ್ನೂ ಅವನು ಓದ್ಬೇಕು. bore ಆಗ್ತಿದೆ ಅಂತ ಹೇಳ್ಬಾರ್ದು... ಇಲ್ಲ ಅಂದ್ರೆ ನನ್ಗೆ ಕೋಪ ಬರುತ್ತೆ.. ಇನ್ನೊಂದು main thing ಅಂದ್ರೆ ನಾವು ಅವಗವಾಗ ಜಗಳ ಆಡ್ತಿರ್ಬೇಕು. serious ಆಗಿ ಅಲ್ಲ... "ಹುಸಿ ಕೋಪ" ಹುಸಿ ಜಗಳ" ಅಂತ್ತಾರಲ್ಲ ಹಾಗೆ....

ದಿನಾ ಕನಸ್ಸಲ್ಲಿ ಎಷ್ಟು ಹತ್ತಿರ ಇರ್ತಾನೋ ಅಷ್ಟೇ ಹತ್ತಿರವಾಗಿರಬೇಕು ಯಾವಾಗ್ಲು... "busy" ಅನ್ನೊ ಪದಾನೇ ಗೊತ್ತಿರಬಾರ್ದು. ಹೇಳಿದ್ದೀನಿ ನಾನು ತುಂಬ selfish. ನನಗೆ ಇಷ್ಟವಾದವರು ನನ್ನ ಜೊತೆಯಲ್ಲೇ ಯಾವಾಗಲು ಇರ್ಬೇಕು ಅನ್ನೊದು ನನ್ನ ಒಂದು ಸಣ್ಣ ಸ್ವರ್ಥ ಆಸೆ... ಇನ್ನು ಮಾತಿಲ್ಲದ ಸಂಜೆ ಅವನ ಎದೆಗೆ ಒರಗಿ ಅಂಗೈ ಹಿಡಿದು ಹಾಗೇ ಜಗತ್ತನ್ನೇ ಮರಿಬೇಕು, ಇನ್ನು ರಾತ್ರಿ ಮಾತಲ್ಲಿ ತುಂಟಾಟ, ಪ್ರೀತಿ, ಹುಸಿ ಕೋಪ ಎಲ್ಲಾ ಇರ್ಬೇಕು. "ನಿದ್ದೆ ಬರ್ತಿದೆ ಆಮೇಲೆ ಮಾತಾಡೋಣ" ಇವೆಲ್ಲ ಇರ್ಲೆಕೂಡದು. ರಾತ್ರಿ ಎರಡಾದ್ರು ನಾವು ಹಾಗೇ ಸುಮ್ನೇ ಏನೋ ಮಾತಾಡ್ತಾ, ಕೋಪಮಾಡ್ಕೊಳ್ತಾ, ನಗ್ತಾ, ಅಳ್ತಾ ಹಾಗೇ ರಾತ್ರಿ ಕಳಿಬೇಕು.

    "ನೀ ಅಳಬಾರದು" ಅನ್ನೊ ಹುಡುಗ ನನಗೆ ಇಷ್ಟವಾಗಲ್ಲ.. ನಾ ಅಳೋದು, ಬೇಜಾರು ಮಾಡ್ಕೊಳೊದು, ಕೋಪ ಮಾಡ್ಕೊಳೋದು ಎಲ್ಲ ಅವನ ಪ್ರೀತಿಗಾಗೇ.. ಹೀಗೆಲ್ಲ ಇರ್ಬೇಕಾದ್ರೆ ಅವನು ಹೇಗೆಲ್ಲ ಸಮಾಧಾನ ಮಾಡ್ತಾನೆ ಅನ್ನೊದು ನಾನ್ ನೋಡ್ಬೇಕು ನೋಡಿ ಖುಷಿಪಡ್ಬೇಕು.

ಹ್ಮ್... ಇಷ್ಟೇಲ್ಲಾ Qualities ನಿಮ್ಮಲ್ಲಿ ಇದೆ ಅಂದ್ರೆ... ಅರ್ಜಿ ಹಾಕ್ರಿ ನೋಡುವ.... :P

Saturday, August 27, 2011

ಮೂರು ಮಾಸವೂ ತುಂಬದ ಪ್ರೀತಿ


ಹೇಳಬೇಕೋ, ಬೇಡವೋ ತಿಳಿಯದು,
ಆದರೂ ಹೇಳಿಯೇ ಬಿಡುತ್ತೇನೆ ಕೇಳು,
ಶುಭಾಷಯಗಳು ನಲ್ಲ, ಇಂದಿಗೆ
ನಮ್ಮ ಪ್ರೀತಿಗೆ, ಮೂರು ಮಾಸದ ಬೆಳವಣಿಗೆ. . .

ನಾ ನಗುವುದೋ, ಅಳುವುದೋ ತಿಳಿಯನು,

ಅಲ್ಲದೆ ಈ ದಿನ ನಿನಗೆ ನೆನಪಿದೆ ಎಂದೂ ನಾ ನಂಬೆನು.
ಏಕಿಷ್ಟು ಅಂತರ ನಮ್ಮಿಬ್ಬರ ನಡುವೆ?
ಪ್ರೀತಿಯಲ್ಲಿ ಈ ವಿರಹದ ವೇದನೆ ಸರಿಯೇ?

ಮೂರು ಮಾಸವೂ ತುಂಬಲಿಲ್ಲ ನಮ್ಮ ಪ್ರೀತಿ,

ಆಗಲೇ ದೂರವಾದೆವು ನಾವು,
ಇಷ್ಟೆಲ್ಲಾ ಆದಮೇಲು ನನಗೆ ಕಾಡುವುದು ಒಂದೆ,
ಅದು ನಿಜವಾಗಿಯು ಪ್ರೀತಿ ಎಂಬ ಪ್ರೀತಿನೇನಾ ಎಂದು. . .

ಸುಳ್ಳಾದರೆ ಆ ಪ್ರೀತಿ ಹೇಳದಿರು ನನಗೆ ನಿನ್ನ

ಪ್ರೀತಿಯ ಪಡೆವ ಯೋಗ್ಯತೆ ಇಲ್ಲವೆಂದು ಸುಮ್ಮನಾಗುವೆ,
ನಿಜವೇ ಆದರೆ ಒಮ್ಮೆ ಹೇಳಿಬಿಡು ನಿನ್ನನೆಂದೂ
ದೂರ ಹೋಗಲು ಬಿಡದೆ ಜೊತೆಗೇ ಬರುವೆ ನೆರಳಿನಂತೆ. . . 

Tuesday, August 9, 2011

ವಿಧಿಯಾಟವೇ ಹೀಗೆ


ಕಿಟಕಿಯಾಚೆ ತುಂತುರು ಮಳೆ,
ಎಂದಿನಂತೆ ನನ್ನ ಕಣಲ್ಲಿ ಸೋನೆಮಳೆ

ವಿಧಿಯಾಟವೇ ಹೀಗೆ,
ಕರೆದೊಯ್ಯುವುದು ಎಲ್ಲಿಂದ ಎಲ್ಲಿಗೋ
ಜೊತೆ ಕೊಡುವುದು ಏಕಾಂಗಿಯ ನೋವೊ
ಇಲ್ಲವೆ ವಿರಹದ ಸಾವೋ

ನಮ್ಮವರು ಎಂದು ನಮ್ಮವರಲ್ಲ
ಜೊತೆಗಿರುವವರು ಎಂದೂ ಜೊತೆಯಾಗರಲ್ಲ
ಏಕೆ ಈ ಬದುಕು ಹೀಗೆ? ವಿಧಿಯ
ಪರೀಕ್ಷೆಗೊಳಗೂಡಿಸಿ ಪಾಠ ಕಲಿಸುತ್ತಲೇ ಇರುವುದು?

ಮನಸ್ಸಿಗೆ ಇಲ್ಲ ಸಲ್ಲದ ಸ್ಥಿತಿಗತಿಯ ನೀಡಿ,
ವಿಧಿಯಾಟದಿ ಸೆಣಸಾಡಿಸಿ
ನಗುವೆನೆಂಬುದ ಮರೆಯುವಂತೆ ಮಾಡಿ
ಕೊನೆಗೆ ಬಿಟ್ಟೋಗುವುದು ಒಳ್ಳೆಯ ಪಾಠ ಕಲಿಸಿ....

Sunday, August 7, 2011

ಸಾಯುವ ಮನಕ್ಕೆ ಜೀವ ತುಂಬುವ ಗೆಳತಿ

ಗೆಳತಿ ಏನೆಂದು ಹೇಳಲಿ ನಿನ್ನ ಸ್ನೇಹವ
ಯಾವ ರೀತಿಯಲಿ ತೀರಿಸಲಿ ಈ ಋಣವ?

ಜೊತೆಗೆ ಕೂಡಿ ಬರೆದ ಕವನ, ಹಂಚಿ ತಿಂದ ತುತ್ತು
ಸಮಯದ ಅರಿವೇ ಇಲ್ಲದೆ ನಡೆದ ಹಾದಿ,
ಮಳೆಯಲಿ ಬಿಸಿ ಬಾದಾಮಿ ಹಾಲಿನ ಬೆಸುಗೆ
ಎಲ್ಲ ಸಂತೋಷವು ನೀ ಕೊಟ್ಟ ಉಡುಗೊರೆ

ಜಡಿ ಮಳೆಯಲಿ ನೆನೆದು ನಡೆದು
ಹಳೆಯ ನೆನಪಿಗೆ ಮೈ-ಮನ ಹಸಿಯಾಗಿಸಿ
ಮೌನ ಮನೆಮಾಡಿ ಕೂತಾಗ
ಪ್ರೀತಿಯ ನಗೆ ಬೀರಿ ಸ್ವರ್ಗ ತೋರಿಸಿದವಳು ನಿ. . .

ಮನಸ್ಸಿಗೆ ಕಾಯಿಲೆ ಬಿದ್ದಾಗ ಮದ್ದಾಗುವೆ 

ಕಣ್ಣೀರಿನ ಕೋಡಿ ಹರಿಸುವಾಗ ಮನ ಬಯಸುವುದೂ
ನಿನ್ನ ತೋಳನು, ನಿನ್ನ ಸಾಂತ್ವನವನ್ನೇ!
ನೋವಿನ ಕಾವ ಆರಿಸುವ ತಂಪು ನೀನು. . .

ಸಾಯುವ ಮನಕ್ಕೆ ಜೀವ ತುಂಬುವ ಗೆಳತಿ 

ನನ್ನ ಬಾಳಿನ ಧ್ರುವ ತಾರೆ ನೀ
ಅಮ್ಮನೊಲವ ತೋರುವ ನಲುಮೆಯ ಮೈತ್ರಿ ನಿನ್ನದು
ನೀನಿದ್ದರೆ ಪ್ರತಿ ಜನುಮದಲು ನಾ ಸುಖಿ. . .

Monday, August 1, 2011

ನೊಂದ ಹುಡುಗಿಯ ಡೈರಿಯಿಂದ

ದೇವರೆ,
    ಇದೊ ನಿನಗೊಂದು ಪತ್ರ. ಏನು ಈ ಹುಚ್ಚು ಹುಡುಗಿ ನನಗೆ ಪತ್ರ ಬರೆಯುತ್ತಿದ್ದಾಳೆ ಎಂದುಕೊಳ್ಳುತ್ತಿದ್ದೀಯ? ಏನು ಮಾಡಲಿ, ನಿನ್ನ ಜೊತೆ ಯಾವಗಲೊ ಒಂದು ಸರತಿ ಸಂಪರ್ಕಿಸುವ ನಾನು, ಒಂದೇ ಕ್ಷಣದಿ ಎಲ್ಲಾ ಹೇಳಲು ಹೇಗೆ ಸಾಧ್ಯ? ಅದು ಅಲ್ಲದೆ ನಿನಗೆ ಎಲ್ಲಾ ಕೇಳುವ ತಾಳ್ಮೆಯಾದರು ಎಲ್ಲಿದೆ? ಎಷ್ಟೋ ಜನರ ಕೋರಿಕೆಗಳನ್ನ ನೋಡ್ಕೊಬೇಕು ನೀನು.., ಅಂತಹದರಲ್ಲಿ ನನ್ನ ನಿಧಾನಗತಿಯಲ್ಲಿ ಹೇಳುವ ಮಾತುಗಳ ಕೇಳಿಸಿಕೊಳ್ಳಲು ಸಧ್ಯವೆ ನಿನಗೆ? ಕಂಡಿತಾ ಇಲ್ಲ. ಇನ್ನು ನೀನು ಈ ಪತ್ರವನ್ನೂ ಓದ್ತಿಯಾ ಅಂತ ನಾ ಅಂದುಕೊಂಡಿಲ್ಲ...ಹಾಗೆ ಅಂದುಕೊಳ್ಳುವುದು ಮೂರ್ಖತನ ಅಂತಲೂ ಗೊತ್ತು. ಆದ್ರೇನು ಮಾಡ್ಲಿ, ಹೇಗಾದರು ನಿನಗೆ ಕನಿಕರ ಬಂದೋ ಏನೊ ಒಮ್ಮೆ ಈ ಪತ್ರ ಓದಿ ನನ್ನ ಮನಸ್ಥಿತಿ ತಿಳಿದಿಕೊಳ್ತಿಯೇನೋ ಅನ್ನೊ ಒಂದು ಚೂರು ನಂಬಿಕೆ..., ಅದಕ್ಕೆ ನಿನಗೆ ಪತ್ರ ಬರೆಯುತಿರುವುದು...


    ನಿನಗೆ ತಿಳಿದಿದೆ ಅಲ್ವ ದೇವ್ರೆ, ನಾನು ನಿನ್ನನ್ನು ಜಾಸ್ತಿ ಏನೂ ಕೇಳಿಕೊಳ್ಳುವುದಿಲ್ಲ. ಅಲ್ಲದೆ ನಿನ್ನ ಬಳಿ ಬರುವುದು ನಾನು ಎಂದೊ ಒಂದು ದಿನ, ಯಾವುದೋ ಹಬ್ಬದಂದು. ಆಗ "ಎಲ್ಲರನ್ನು ಚೆನ್ನಾಗಿ ಇಡು" ಅಥವಾ ಪರೀಕ್ಷೆಗಳು ಹತ್ತಿರ ಬರುತಿದ್ದರೆ "ಓದು ಚೆನ್ನಾಗಿ ಆಗಲಿ, ಪರೀಕ್ಷೆ ಸುಲಭವಾಗಿ ಇರಲಿ" ಎಂದು ಕೇಳಿಕೊಳ್ಳುತೀನಿ. ಅದು ಬಿಟ್ಟು ಬೇರೆ ಏನಾದರು ಕೇಳಿರುವೆನೇನು? ಬೆಳಗೆ ಎದ್ದಾಗ ಒಮ್ಮೆ ನಿನ್ನ ಆ ಫೋಟೊ ನೋಡಿದರೆ ಮತ್ತೆ ನಿನ್ನ ನೋಡುವುದು ಮಾರನೆ ದಿನವೇ! ಇದೇ ನಿನಗೆ ಕೋಪವನ್ನುಂಟು ಮಾಡುತಿದೇಯ? ಮನಸ್ಸಿನಲ್ಲಿರುವ ಭಕ್ತಿ ಸಾಲದೆ? ಬೂಟಾಟಿಕೆಗಾಗಿ ನಡೆಸುವವರ ಭಕ್ತಿಯೇ ನಿನಗೆ ಮೆಚ್ಚೆ?


    ಮಧ್ಯಮ ವರ್ಗದಲ್ಲಿದ್ದರೂ ನಿನ್ನ ಎಂದೂ ಇಶ್ವರ್ಯಕ್ಕಾಗಿ ಕೇಳಿಲ್ಲ. ನನ್ನನ್ನು ಸಿರಿಯುಳ್ಳವರ ಮನೆಯಲ್ಲಿ ಹುಟ್ಟಿಸಲಿಲ್ಲವಲ್ಲ ಎಂದು ದೂಡಿಲ್ಲ.., ಅಂತಹದರಲ್ಲಿ ಇದ್ದ ಅಲ್ಪ ಸ್ವಲ್ಪ ಖುಷಿಗೂ ಕಲ್ಲೊಡೆಯುವುದೆ ನೀನು? ಸಂತೊಷವ ಬಯಸಲೇ ಬಾರದೆ ನಾನು? ಬಯಸಬಾರದಂತಾದರೆ ನಾನು ಮಾಡಿರುವ ತಪ್ಪಾದರೂ ಏನು? 


    ಚಿಕ್ಕಂದಿನಿಂದಲೂ ಒಂದು ಥರ ಭಾವಜೀವಿ ನಾನು. ಮೃಧು ಮನಸ್ಸುಳ್ಳವಳು. ಚಿಕ್ಕ ಸಂಗತಿಯನ್ನೂ ಮನಸ್ಸಿಗಚ್ಚಿಕೊಳ್ಳುವವಳು. ಸ್ನೇಹ ಬಳಗಕ್ಕಾಗಿ ಚಡಪಡಿಸುತ್ತಿದ್ದವಳು. ಸ್ನೇಹಿತರೇ ಹಿತೈಶಿಗಳು ಎಂದು ನಂಬಿದ್ದವಳು. ಆದರೆ ಏಕೆ ನನಗೆ ಆ ರೀತಿಯ ಹಿಂಸೆ? ಎಲ್ಲರೂ ನನ್ನ ಕಡೆಗಣಿಸುವಂತೇಕೆ ಮಾಡಿದೆ?ಮರದ ಕೆಳಗಿದ್ದ ಜಾರುಗುಪ್ಪೆಯ ಮೇಲೆ ಹರಿಯುತ್ತಿದ್ದ ಆ ಕಪ್ಪಿರುವೆಯ ಮರಕ್ಕೆ ಬಿಟ್ಟವಳನ್ನು ಆಡಿ ಹೀಯಾಳಿಸಿದ್ದರಲ್ಲ.. ಎಷ್ಟು ನೋವಾಗಿತ್ತು ನನಗೆ ಅಂದು ಗೊತ್ತ ನಿನಗೆ? ಎಲ್ಲಿ ಹೋಗಿ ಅತ್ತಿದ್ದೆ ಅಂತ ಗೊತ್ತ ನಿನಗೆ? ನಿನಗೆಲ್ಲಿ ತಿಳಿದೀತು.., ತಿಳಿದಿದ್ದರೆ ಮುಂದೇಂದೂ ಹಾಗಾಗದಂತೆ ನೋಡಿಕೊಳ್ಳುತಿದ್ದೆ. ಈ ರೀತಿ ಸುಮ್ಮನ್ನಿರುತಿರಲಿಲ್ಲ. ಮುಂದಿನ ತರಗತಿಗಳಲ್ಲಿ ಹೇಗೋ ಚೆನ್ನಾದ ಸ್ನೇಹ ಬಳಗದಲಿ ಎಲ್ಲರಿಗೂ ದೊರೆಯುತ್ತಿದ್ದ ಗೌರವ, ಪ್ರೀತಿ ನನಗೂ ದೊರೆಯುತಿದೆ ಅಂದುಕೊಂಡಿದ್ದೆ...ಆದರೇನು ಮಾಡುವುದು ಎಳೆ ಮನಸ್ಸು ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬಿದ್ದೆ. ಆದರೆ ತಿಳಿತಿದೆ ಎಲ್ಲಾವು ಬರೀ ಡೊಳ್ಳು ಎಂದು. ಇನ್ನು ಮುಂದಿನ  ದಿನಗಳಲಂತು ನಾ ಪಟ್ಟ ಪಾಡು ಯಾರಿಗೂ ಬೇಡ... 


    use and throw ಆಗಿಬಿಟ್ಟಿದ್ದೆ ನಾನು. ಸ್ನೇಹಕ್ಕೆ ಬೆಲೆ ಇಲ್ಲದವರ, ಸ್ನೇಹ ಅಂದರೇನೆಂದು ಅರಿಯದವರ ಬಳಿ ಸೇರಿಬಿಟ್ಟಿದ್ದೆ. ಆದರೆ ಅವರದ್ದೇನು ತಪ್ಪಿಲ್ಲ ಬಿಡು..ಅವರಿಗೆ ಬೇಕಾದಂತವರು ಅವರಂತಿದ್ದವರು, ಆದರೆ ನಾನು ಅವರಂತಿರಲಿಲ್ಲವಲ್ಲ, ಅವರಂತೆ ನೀ ನನ್ನ ಹುಟ್ಟಿಸಲಿಲ್ಲವಲ್ಲ. ಅದಕ್ಕಾಗಿ ಅವರನ್ನ ದೂಡಲಾರದು. ಅವರ ಪಾಡಿಗೆ ಅವರ ಬಿಟ್ಟು ಸ್ನೇಹ ಶೋಧನೆಗೆ ನಾನು ಸಿದ್ಧಳಾದೆ. ಮತ್ತೆ ದೊರೆತವರು ಒಂದು ರೀತಿ ನನ್ನಂತವೆ ಆದರೆ ಅಲ್ಲೂ ಏನೂ ಸ್ನೇಹಕ್ಕೆ ಗೌರವ ಇರಲಿಲ್ಲ. ತಮಗೆ ನೋವಾದಾಗ ಮಾತ್ರ ಬಂದು ಅತ್ತುಕರೆದು ಸಮಾಧಾನ ಮಾಡಿಸಿಕೊಂಡು ಒಂದು thanks ಹೇಳಿ ನೀನ್ ನನ್ನ best friend ನೀನೇ ನನ್ನ ಎಲ್ಲಾ ದುಃಖಕ್ಕೂ ಸಮಾಧಾನ ಮಾಡೋಳು. thank you so much ಎಂದು ಹೇಳುತಿದ್ದರು. ಆದರೆ ನನಗೂ ದುಃಖಗಳಿರುತ್ತದೆ ನನಗೂ ಸಮಾಧಾನ ಮಾಡಬೇಕೆಂಬುದ ಮರೆತರು. ಹೀಗಲೂ ಕರೆ ಮಾಡುತ್ತಾರೆ ನಿನ್ನ ಹತ್ತಿರ ಏನೋ ಹೇಳ್ಕೊಬೇಕು ಒಂದು ದಿನ ಸಿಗು, ಇಲ್ಲ ಮನೆಗೆ ಬಾ ಎಂದು ಕರೆಯುತ್ತಾರೆ. ಆದರೆ "ಚೆನ್ನಾಗಿದ್ದೀಯ? ಎಲ್ಲವೂ ಕ್ಷೇಮವ? .....ನಲ್ಲಿ ಎಲ್ಲಾ ಸರಿ ಇದೆಯ? ಎಂದು ಕೇಳರು. ತಮ್ಮ ದುಖಃಕ್ಕಾಗಿ ನನ್ನ ನೆನಪಿಸಿಕೊಳ್ಳುವವರೋ ಹೊರತಾಗಿ ಬೆರ್ಯಾವುದಕ್ಕೂ ಅಲ್ಲ.tissue paper ಆಗಿ ಹೋಗಿದ್ದೀನಿ.., ಮನಸ್ಸಿಗೆ ದುಃಖವಾದಾಗ ಆದ ಕಲೆ ಹೊರೆಸಲು ಬೇಕು ನಾನು, ಹೊರೆಸಿದ ನಂತರ ಬಿಸಾಡಿಬಿಡುತ್ತಾರೆ...!!


    collegeನಲ್ಲಿಯಾದರು ಒಂದೊಳ್ಳೆ ಬಳಗ ಸಿಗುವುದೆಂದುಕೊಂಡೆ..ಸಿಕ್ಕೂ ಇದೆ..ಆದರೆ ನೆಮ್ಮದಿಯೇ ಇಲ್ಲ! ನಿನಗೆ ತಿಳಿದಿದೆ ನನಗೆ ಪಾಠ ತಲೆಗತ್ತುವುದಿಲ್ಲ...ನಾನು ಓದುವುದರಲ್ಲಿ ಹಿಂದು ಅಂತ. ಅಷ್ಟು ಗೊತ್ತಿದ್ದರೂ ಇಂತಹ ಬಳಗ ನೀಡುವುದೆ? ಗೆಳತಿಯರೆಲ್ಲ ಓದುವುದರಲ್ಲಿ ಮುಂದು. ನಾನೊಬ್ಬಳೇ ಹಿಂದೆ ಎಂತಾದರೆ ನನಗಲ್ಲಿ ಗೌರವ ಸಿಗುವುದೆ? ತಿಳಿಕೋ ದೇವರೆ ಈ ಜಗದಲ್ಲಿ ಓದುವವರಿಗೆ ಮಾತ್ರ ಗೌರವ, ಪ್ರೀತಿ ದೊರಕುವುದು. ಮನೆಯಲ್ಲಾಗಲಿ, ಹೊರಗಲ್ಲಾಗಲಿ ನಮ್ಮಂತ ಭಾವುಕರಿಗೆ ಸಿಗುವುದು ಕೇವಲ ದುಃಖ...ಆದರಿಂದ ನಾವೂ ಚೆನ್ನಾಗಿ ಓದಬೇಕೆಂದು ಹೋದರೂ ಹಾಳಾದ ಮನಸ್ಸು ಆ ನೋವಲ್ಲೆ ಕೊರಗಿ ಕೊರಗಿ ಓದುವುದನ್ನೂ ನಿಲ್ಲಿಸಿಬಿಡುತ್ತದೆ..!


    ಎಲ್ಲರಿಂದಲೂ ದೂರವಾಗುತಿರುವವಳು ನಾನು. ಹೆತ್ತಮ್ಮನಿಗೆ ಇದು ತಿಳಿಯಲಾಗುತಿಲ್ಲ. ನನ್ನ ಆ ಹುರುಳಿಲ್ಲದ ನಗುವನ್ನೇ ನಂಬಿಕುಳಿತಿದ್ದಾಳೆ. ಅದೇ ನನಗೂ ಬೇಕಾಗಿರುವುದು ನನ್ನಿಂದ ಅವಳು ದುಃಖಿಸುವುದು ನನಗಿಷ್ಟವಿಲ್ಲ ಬಿಡು. ನನಗಾಗಿ ಅವಳು ಯಾಕೆ ದುಃಖಿಸಬೇಕು? ಅದು ಈ ಪಾಪಿಗಾಗಿ?


    ಏನೇ ಆದರು ನೀ ಮಾಡಿದ್ದು ತಪ್ಪು ದೆವರೆ. ಎಷ್ಟೇ ಹೀಯಳಿಕೆಗೆ, ನೋವಿಗೆ ಒಳಗಾಗಿದ್ದರೂ ಎಂದೂ ಈ ರೀತಿ ದುಃಖಿಸಿದವಳಲ್ಲ ನಾನು. ಆದರೆ ಇಂದು ಸುಮ್ಮನ್ನಿದ್ದರೂ ಕಣ್ಣು ಸೋರುತಿರುವುದು, ಒಂತಿ ರಸ್ತೆಯಲ್ಲಿ ಹೋಗುತಿದ್ದರೆ ಬಿಕ್ಕಳಿಸುತಿರುವೆ.. ಎಲ್ಲರಿಂದಲೂ ದೂರವಾಗುತ್ತಿರುವೆ. ನನ್ನಲ್ಲಿದ್ದ ಆ ನಲಿವು, ವಿನೋದ ಎಲ್ಲವನ್ನೂ ಯಾರೋ ದೋಚಿಕೊಂಡು ಹೋಗಿದ್ದಾರೆ. ಖುಷಿಯಿಂದ ಇದ್ದ ನನ್ನನ್ನು ನಾನೇ "yet happiest girl in the world" ಎಂದು ಹೇಳಿಕೊಳ್ಳಿತ್ತಿದ್ದವಳು, ಇಂದು ಅವೆಲ್ಲ ಜಂಬದ ಮಾತು, ಸೋಲು ಒಪ್ಪಿಕೊಳ್ಳಲಾಗದೆ ಅಹಂಕಾರದಲ್ಲಿ ಹೇಳುತ್ತಿದ್ದ ಮಾತು ಎಂದು ಅನ್ನಿಸುತಿರುವುದು.


    ಇಷ್ಟೊಂದು ನೋವು ನನಗೆ ಕೊಡಬೇಕೆಂದು ನಿನಗೆ ಹೇಗೆ ಅನ್ನಿಸಿತು? ನಾನಷ್ಟು ಪಾಪಿನ? ಇಲ್ಲ ನನ್ನ ಮೇಲೆ ನಿನಗೆ ಕರುಣೆಯೇ ಇಲ್ಲವ? ಒಂದು ದಿನ ನನ್ನ ಜಾಗದಲ್ಲಿ ಬಂದು ನೋಡು ನಾನೇಷ್ಟು ದುಃಖಿಸುತಿರುವೆನೆಂದು ತಿಳಿಯುತ್ತೆ  ನಿನಗೆ. ದೂರ ಮಾಡಿಸಿರುವೆ...ಸ್ನೇಹಿತರಿಂದ..ಗೆಳೆಯನಿಂದ...ಸಂತೋಷದಿಂದ...ಭಾವದಿಂದ ಎಲ್ಲದರಿಂದಲೂ..!!!! ಈಗ ನಾನು ಕೇವಲ ಉಸಿರಾಡುತಿರುವ ಶವ! ಹುಟ್ಟಿಸಿದ್ದಿಯಲ್ಲ ನೀನು, ಅದಕ್ಕೆ ಬದುಕಬೇಕಲ್ಲ ಎಂದು ಬದುಕಿದ್ದೀನಿ. ಆತ್ಮಹತ್ಯೆ ಮಾಡಿಕೊಂಡರೆ ನನ್ನ ನಾ ಗೌರವಿಸುತಿರುವುದು ಕೂಡ ನಾಟಕವೇನೊ ಅನ್ನಿಸಿಬಿಡುತ್ತದೆ. ಅದಕ್ಕಾದರು..,ನನ್ನಮ್ಮ, ಅಪ್ಪನ ನಗುವಿಗಾದರು ನಾ ಏನಾದರು ಸಾಧಿಸಬೇಕು.


    ದಯಮಾಡಿ ಈ ಯೋಜನೆಗೂ ಕಲ್ಲೊಡೆಯಬೇಡ. ಈ ಪತ್ರವ ಎಂದಾರು ಓದಿ ಕೊಂಚವೇ ಕೊಂಚ ಕನಿಕರಿಸು. ಅಷ್ಟೇ ಸಾಕು ಸದಾಕಾಲ ಋಣಿಯಾಗಿರುವೆ. ಸಿಗುವ ಕೊಂಚ ಖುಷಿಯಲ್ಲೆ ಹೇಗೊ ಬದುಕಿಕೊಳ್ಳುವೆ ಬಡಪಾಯಿ.


                                                                                ಇತಿ..,
                                                                                ..................!!?


Tuesday, July 26, 2011

ಕ್ಷಮಿಸಿಬಿಡು

ಅಪ್ಪಿ,
         ಕ್ಷಮಿಸಿಬಿಡೊ...I’m very sorry… ನಿನ್ಗೆ ತುಂಬಾ ನೋವು ಮಾಡ್ಬಿಟ್ಟೆ ಅನ್ನಿಸುತ್ತೆ ಅಲ್ವ? sorry da ...ತುಂಬಾ ಬೇಸರವಾಗಿತ್ತು, ಅದಕ್ಕೆ ಹಾಗೆಲ್ಲಾ ಮಾತಾಡ್ಬಿಟ್ಟೆ....ನೀನು ನನ್ನ ತುಂಬಾ ಪ್ರೀತಿಸ್ತಿದ್ದೀಯ ಅನ್ನೊದನ್ನ ಒಂದು ಕ್ಷಣ ಮರೆತು ಬಿಟ್ಟಿದ್ದೆ(?) ಎಂಥಾ ಪಾಪಿ ಅಲ್ವ ನಾನು? ಕ್ಷಮಿಸಿಬಿಡೊ... ದಿನೇ ದಿನೇ ನಿನ್ಗೆ ನೋವ್ಮಾಡ್ತಾ ಇದಿನಿ... ಬೈಕೊ ಬೇಡ ಪುಟ್ಟಾ, "ಮಾಡೋದೆಲ್ಲ ಮಾಡಿ ಆಮೇಲೆ Sorry ಕೇಳ್ತಾಳೆ" ಅಂತ...

          ತಪ್ಪಾಗಿ ಅರ್ಥ ಮಾಡ್ಕೊಬಿಟ್ಟಿದ್ದೆ ಕಣೊ...ನಿನ್ನಿಂದ ನನ್ನ studiesಗೆ ತೊಂದ್ರೆ ಆಗ್ತಿದೆ, ನನ್ನ life spoil ಆಗ್ತಿದೆ ಅಂದುಕೊಂಡು ಬಿಟ್ಟೆ... ಮತ್ತೆ ಅದನ್ನ ಯೋಚನೆನೂ ಮಾಡ್ದೆ "break up" ಆಗೋಣ , contactನಲ್ಲಿ ಇರೋದು ಬೇಡ ಅಂತ ಹೇಳ್ಬಿಟ್ಟೆ!! ಆದ್ರೆ ಈಗ ತಿಳಿತಿದೆ ಕಣೊ, ನೀನಿಲ್ದೆ lifeಏ ಇಲ್ಲ ಇನ್ನು ಅದು spoil ಆಗೋದಾದ್ರು ಹೇಗೆ ಅಂತ! ದುಡುಕಿ ಬಿಟ್ಟಿದ್ನಲ್ಲೋ ಅಪ್ಪಿ... ಅದ್ಯೇಗೊ ಏನೂ ಮಾತಾಡ್ದೆ ಇದ್ದೆ ನೀನು? break up ಆಗೋಣ ಅಂದಾಗ? ಅಷ್ಟು ಶಾಂತವಾಗಿ ಹೇಗಿದ್ದೊ? contactನಲ್ಲಿ ಇರೋಣ friends ರೀತಿಲಾದ್ರು ಅಂತ ಕೇಳ್ದೆ ನೀನು... ಆದ್ರೆ ನಾನು "ಏನೂ ಬೇಡ" ಅಂತ ಅಂದ್ಬಿಟ್ಟೆ. ನೀನು ಅಷ್ಟು ಕೇಳ್ಕೊಂಡ್ರು ಬೇಡ ಅಂತ ಹೇಳ್ದೆ, ಅದು ಅಲ್ದೆ, "ನಾನು ಸಾಯ್ಬೇಕು ಅಂತ ಏನಾದ್ರು ಇದ್ರೆ contactನಲ್ಲಿ ಇರೋಣ" ಅಂತ ಏನೇನೋ ಹೇಳ್ಬಿಟ್ಟೆ.... ನೀನು ಏನೂ ಮಾತಡ್ದೆ ಒಪ್ಪಿಕೋಂಡುಬಿಟ್ಟಲ್ಲೊ... ನಾನು ಹಾಗೆ ಹೇಳಿದ್ಮೇಲೆ ನೀನು ಒಂದು messageನೂ ಮಾಡ್ಲಿಲ್ಲ, ನಾನೂ ಕೂಡ..!! ಒಂದುವರೆ ದಿನ ನಿನ್ನ ಜೊತೆ ಯಾವ contact ಇಲ್ದೆ ಇದ್ದೆ! ಆದ್ರೆ ನೀನ್ ನೆನಪಾಗ್ಲಿಲ್ಲ ಅಂತ ಸುಳ್ಳು ಹೇಳೋಕೆ ಆಗಲ್ಲ ನನ್ಗೆ.. ಆ ಇಪ್ಪತ್ತನಾಲ್ಕು ಗಂಟೆ ಆದಾಗಲೆ ಒಂದು ಪತ್ರ, ಕವನ ಬರ್ದೆ, ನಿನ್ನ ಏಷ್ಟು miss ಮಡ್ಕೊಳ್ತಿದಿನಿ ಅಂತ.. ಆದ್ರೆ ನಿನ್ಗೆ ತೋರಿಸಿದ್ರೆ ಎಲ್ಲಿ ನಾನು ಸೋಲ್ತೀನೊ ಅಂತ ಹೇಳ್ಳೇ ಇಲ್ಲ...

            ಆದ್ರೊಂದಂತು confirm ಆಯ್ತು ಕಣೊ.., ನಿನ್ನ ಜೊತೆ ಮಾತಾಡ್ದೆ ಹೇಗೋ ದಿನ ಕಳೆದು ಬಿಡ್ಬಹುದು, ಆದ್ರೆ ನಿನ್ನ ಪ್ರೀತಿ, ನಿನ್ನ ಮಾತು, ನಿನ್ನ ಅಕ್ಕರೆ ಎಲ್ಲಾ ಪ್ರತಿ secondsಗೂ ನೆನಪಾಗುತ್ತೆ ಅಂತ.,

            ಇವತ್ತು ಒಂದು blog ಓದ್ದೆ, "ನೀನಿಲ್ಲದೇ" ಅಂತ... ಓದಿ ತುಂಬಾನೆ ಬೇಸರವಾಯ್ತು ಕಣೊ... ನೀನ್ ತುಂಬಾ ತುಂಬಾ ನೆನಪಾಗಿ ಬಿಟ್ಟೆ.. ಕಣ್ಣಲ್ಲಿ ನೀರು ತುಂಬಿ ಬಂತು.. ನಿನ್ನ ಬಿಗಿದಪ್ಪಿ ಅತ್ತು sorry ಕೇಳ್ಬೇಕು ಅನ್ನಿಸ್ತಿತ್ತು... ಕ್ಷಮಿಸಿಬಿಡೊ ಗೆಳೆಯ, ನಿನ್ನ ಬಿಟ್ಟು ನನ್ಗೆ ಇರೋಕೆ ಆಗಲ್ಲ., ಮತ್ತೆ ಮತ್ತೆ ಕೇಳ್ಕೊಳ್ತೀನಿ ದಯಮಾಡಿ ಈ ಮುಂಗೋಪಿನ ಕ್ಷಮಿಸಿಬಿಡು. . .

Tuesday, June 14, 2011

ರಾತ್ರಿಯಂದು ನ್ನಿನ್ನೊಡನೆ ನನ್ನೀ ಸಂಭಾಷಣೆ...

ನಿನ್ನೆಯ ನೆನೆದೆನು ನಾನು,
ಹೇಳಲಿಚ್ಛಿಸಿದೆ ನಿನಗೆ,
ಹೇಳಲಾಗದೇನೋ ನಾ ತಿಳಿಯೆನು,
ಆದರೆ ಆ ಭಾವನೆಗಳ
ಬಿಚ್ಚಿಡದೆ ಇರೆನು.

ಒಂದೊಮ್ಮೆ ಹೇಳಿದ್ದೆ ನೀ
ಪ್ರೀತಿಬೇಡವೆಂದು,
ಕೇಳಿ ಏರಿತ್ತು ಕೋಪ
ಆ ಹಿಮಾಲಯವನು.
ಮನಸ್ಸಲ್ಲಿ ನಿನ್ನ ಕಳೆದುಕೊಳ್ಳುವೆನೆಂಬ
ಭಯದಲಿ ಕೋಪವು ಹೆಚ್ಚಿತ್ತು.
ನೋವಾಯಿತೆ ಆ ಭಾವದಲಿ
ನಾ ಹೋಡೆದಿದ್ದು?
ಕ್ಷಮಿಸು ತಡೆಯಲಾಗಿರಲಿಲ್ಲ
ನನ್ನ ಮುನಿಸು!

ಪ್ರೀತಿಯಲಿ ಹುಚ್ಚಿಯಾಗಿರುವೆ
ನಿನ್ನಿಂದ ಕ್ಷಣದ ಅಗಲಿಕೆಯೂ
ನಾ ಬಯಸೆನು.
ಏಕಾಂಗಿಯಾದರೆ ನಾನು
ನೋಡು ಹೇಳುತಿರುವೆನು
ಬಿಟ್ಟೋಗುವೆ ಎಲ್ಲವನು
ಆದರೆ ಪ್ರೀತಿಸುವೆ
ಸಾವಲ್ಲು ನಿನ್ನನು.
ಹೀಗೆಂದು ಅತ್ತಿದ್ದೆ ನಿನ್ನೆ.
ಹಸಿಯಾರಿತೇನು? ನಿನ್ನ
ಎದೆಮೇಲಿನ ನನ್ನ
ಆ ಬಾಷ್ಪಾಂಜಲಿಯ ಹನಿ?

ಅಷ್ಟು ಬೈದರೂ, ಹೊಡೆದರು,
ಮುನಿಸಿಕೊಂಡರೂ,
ಮಗುವಂತೆ ಕಂಡೆ ನನ್ನನು.
ಇದರಿಂದ ಆದೆ ನಾ
ಶಾಂತಿ ಚಿತ್ತಳು.
ಆಗ ಕೆನ್ನೆಗೆ, ಗಲ್ಲಕ್ಕೆ,
ಕಣ್ಣಿಗಿಟ್ಟ ಮುತ್ತುಗಳು
ಸಾಕಾದವೇನು?
ಮತ್ತೆ ಬಂದು ಇನ್ನೊಮ್ಮೆ
ಕೊಡಲೇನು?

ನಿನ್ನೊಲವು, ನಿನ್ನ ಅನಿವಾರ್ಯತೆಯ
ದೂರವ ನೆನೆದು
ಅತ್ತಿದ್ದೆ ನಾನು, ದುಃಖಿಸಿದ್ದೆ ನಾನು,
ಆ ಕ್ಷಣ ನಿನ್ನ ನಾ ತಬ್ಬಿದ್ದಾಗ
ಏನೋ ಹೇಳಿ ಸಂತೈಸಿದಲ್ಲ,
ಅದೇನು? ಪುನಃ ಹೇಳು..
ಮತ್ತೆ ದುಃಖದಿ ಇರುವೆನು ನಾನು...!!!!


Sunday, June 12, 2011

ಹೀಗೊಂದು ದಿನ...


ನಿಸರ್ಗದ ಚೆಲುವಿನಲಿ
ನನ್ನ ಇನಿಯನ ಮಡಿಲಲಿ
ಮಲಗಿರಲು ನಾ ಸಂತಸದಲಿ
ಕಂಡೆನು ಸ್ವರ್ಗ ಭುವಿಯಲಿ.

ನಟ್ಟಡವಿಯಲಿ ಹಕ್ಕಿಯೊಂದು ಹಾಡಿತು
ತನ್ನ ಜೋಡಿಯ ಕರೆಯಿತು
ಮಧ್ಯೆ ಮಿಂಚೊಂದು ಮೂಡಿತು
ಹೆಣ್ಣು ಹಕ್ಕಿಯ ಹೃದಯವು ಹೇದರಿತು.

ಗಂಡು ಹಕ್ಕಿ ಸಂತೈಸಲು ಮುಂದಾಯಿತು
ತನ್ನ ಜೋಡಿ ಹಕ್ಕಿಗೆ ಧೈರ್ಯ ತುಂಬಿತು
ಹೆಣ್ಣು ಹಕ್ಕಿಯ ಕಣ್ಣು ಸಂತಸದಿ ಕೂಡಿತು
ಪ್ರಿಯನ ಜೊತೆ ಗೂಡು ಸೇರಿತು.

ಇನಿಯನ ಮಡಿಲಲಿ ಮಲಗಿ ಇದ ಕಣ್ಣು ನೋಡುತಿತ್ತು
ಕಂಡ ಕಣ್ಣು ಮುಗುಳ್ನಗೆಯಲಿ ಉತ್ತರಿಸಿ
ಪ್ರಿಯನಾಗಿರುವ ನನ್ನೊಲವು ಹೇಗೋ ಹೆಚ್ಚಾಯಿತು
ಕಾರಣ ಅದು ಮುತ್ತಿನ ಮೂಲಕ ತೋರಿಕೊಂಡಿತು.


Wednesday, June 8, 2011

ಉಸಿರು ನಿಂತರೆ ಸಾವು ಎಂದು ತಿಳಿದು ಇನ್ನು ಕಾಯುತಿರುವೆ


ಶುರುವಾಗಿತ್ತು ನಮ್ಮೊಲವು
ಕೇವಲ ಸಂದೇಶದಲಿ,
ಚಿಗುರೊಡೆಯಿತು ಸಂತೋಷದಲಿ
ಬೆಳೆಯಿತು ಹರುಷದಲಿ.

ಸಣ್ಣ ಪುಟ್ಟ ಮಾತಿಗೂ ಮನಸ್ತಾಪ
ಚಿಕ್ಕ ಚಿಕ್ಕ ವಿಷಯದಲ್ಲೂ ಉತ್ಸಾಹ.
ಹೀಗೆ ಎಷ್ಟು ಚೆಂದವಿತ್ತು
ಆ ನಿನ್ನೊಡನೆ ಕಳೆದ ಸಮಯವು.

ನನ್ನ ನೋವೆಲ್ಲ ನಿನ್ನದೆಂದು ತಿಳಿದವ ನೀನು
ನನ್ನ ಸಂತೋಷವೆಲ್ಲ ನಿನ್ನದೆಂದವ ನೀನು.
ಮಿತಿ ಇಲ್ಲದ ಪ್ರೀತಿಯಾಗಿತ್ತು ಅಂದು
ನಿನ್ನ ಪ್ರೀತಿ.

ಆದರೆ ಎಲ್ಲಿ ಬಿರುಕು ಮೂಡಿತೊ
ನಮ್ಮ ಪ್ರೀತಿ ಮಹಲಲಿ,
ಯಾರು ನಿಂಬೆ ಹುಳಿ ಹಿಂಡಿದರೊ
ನಮ್ಮ ಪ್ರೀತಿ ಹಾಲ್ಗಡಲಲಿ,
ನಶಿಸಿ ಹೋಯಿತು ನಮ್ಮ ಪ್ರೀತಿ!

ಏಕೆ ಆ ರೀತಿ ಇದ್ದವ ಹೀಗಾದೆ
ಎಂದು ತಿಳಿಯಲೋಗಿ ನಾ ನೊಂದೆ
ನೊವಲ್ಲೆ ಇರುವೆ!

ಪ್ರೀತಿ ಎಂದರೆ ನೀನು
ನೀನು ಎಂದರೆ ಉಸಿರು
ಉಸಿರು ನಿಂತರೆ ಸಾವು ಎಂದು ತಿಳಿದು
ಇನ್ನು ಕಾಯುತಿರುವೆ,
ನಿನ್ನ ಒಲವ ಶಾಶ್ವತವಾಗಿ ಪಡೆಯದ

ನತದೃಷ್ಟ ಹುಡುಗಿ. . . !

Monday, May 23, 2011

ಹಸಿಯಾದ ಕಾಗದ; ಒಲವ ಶೋಕ ಪತ್ರ

ನಿನ್ನ ಪ್ರೀತಿಗೆ ನನ್ನಲಿ ಬೆಲೆ ಇಲ್ಲದಂತಾಯಿತು
ನಿನ್ನೊಲವಿಗೆ ನಾ ತಣ್ಣೀರೆರೆಚಿದಾಯಿತು
ಏಕೆ ಇಷ್ಟಾದರು ಪ್ರೀತಿಸುತಿವೆ ನನ್ನನು?
ನನ್ನಲಿ ಅಂತಹದು ಇರುವುದಾದರು ಏನು?
ಪ್ರೀತಿಗೆ ಹೃದಯದಲಿ ಗುಡಿ ಇಲ್ಲ
ಬರಿಯ ಸ್ಮಶಾಣವೆ ಎಲ್ಲ!
ನಿನ್ನೊಲವ ಪಡೆವ ಅದೃಷ್ಟವ ಪಡೆದಿಲ್ಲ ನಾ
ಮರೆತುಬಿಡು, ಸಾಧ್ಯವಾದರೆ ಕ್ಷಮಿಸಿಬಿಡು

ಗೆಳೆಯ-ಗೆಳತಿಯರಿಬ್ಬರು, ಹೆಚ್ಚು ಪ್ರೀತಿ, ವಾತ್ಸಲ್ಯ, ಮಮತೆ ತೋರಿದರೆ ಅದೋ ಪ್ರೀತಿಯ ಮೊಳಕೆ ಚಿಗುರೊಡೆಯುವುದು! ಕೊಂಚ ಕೋಪ, ಕೊಂಚ ನಗು, ಸ್ವಲ್ಪ ತಲಹರಟೆ. ನಡುವೆಯೆ ನುಸುಳಿ ನುಸುಳಿ ಹೋಗುವ ಹುಸಿ ಮುನಿಸು. ಇದೆ ನೋಡು ಮಾರ್ಪಟ್ಟಿದೆ ಸ್ನೇಹ ಪ್ರೀತಿಗೆ!


ಆದರೆ ನನ್ನಲಿ ನಿನ್ನ ಒಲವ ಬಯಸುವ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ನನ್ನಲಿ ಪ್ರೀತಿಗೆ ಯಾವ ಜಾಗವೂ ಇಲ್ಲ! ಇಷ್ಟಾದರೂ ಪ್ರೀತಿಸುತಿರುವೆನೆಂಬ ನಂಬಿಕೆ! ಆದರೆ ಒಪ್ಪಲಾಗದ ಕಹಿ ಸತ್ಯವದು.!ಏಕೆ? ಅದೋ ಮರೀಚಿಕೆ! ನಿನ್ನ ಪ್ರತಿ ಮಾತು, ನಿನ್ನ ನಗು, ಆ ನಿನ್ನ ತುಂಟತನ ಎಲ್ಲವೂ ಅತಿ ಮಧುರ. ಆದರೆ ಅದು ಕೇವಲ ನೆನಪಿನಲ್ಲಿ ಅಮರ! ಒಂದೆಡೆ ಪ್ರೀತಿ, ಒಂದೆಡೆ ಕುಟುಂಬ! ಒಪ್ಪದಿದ್ದರೆ ಈ ಪ್ರೀತಿಯ, ಮೇಲೇರುವುದು "ಎರಡರಲ್ಲಿ ಯಾವುದು ಅತಿ ಮುಖ್ಯ?" ಎಂಬ ಯಕ್ಷ ಪ್ರಶ್ನೆ! ಎನೆಂದು ಉತ್ತರಿಸಲಿ ಅಂದು? ನೀನೋ? ಅವರೋ?
ಇದೇ ಕಾರಣಕ್ಕೆ ಇಂದು ಮನ ರೋಧಿಸುತಿದೆ. ಮುಂದೆ ಆಗುವ ಈ ಕಾರ್ಯಕ್ಕೆ ಅಂತ್ಯವಾಡಬೇಕಿದೆ ಇಂದೆ! ಸಾವರಿಸಿಕೊಂಡು ಹೇಳುತಿರುವೆನು ನಿನ್ನ ಪ್ರೀತಿ ನನಗೆ ಬೇಡವೆಂಬ ಸುಳ್ಳನ್ನು! ಎನ್ನ ಸಂತೋಷಕ್ಕೆ ಇತರರ ನೋಯಿಸೆನು. ಅದಕ್ಕೆ ನನಗೆ ನಾನೇ ಮೋಸ ಮಾಡಿಕೊಳ್ಳುತಿರುವೆನು!


ಮನ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆ ಕಣೋ. ಕಣ್ಣೀರಲ್ಲಿ ಮಿಂದಿರುವ ಕಣ್ಣಿಗೆ ಎಲ್ಲವೂ ಮಂಜು ಮಂಜು! ಎಡಗೈಯಲಿ ರಕ್ತದ ಕಲೆ, ಬಲಗೈಯಲಿ ಕಣ್ಣೀರಿನ ಹನಿ, ಮನದಲಿ ಉರಿದುರಿದು ಸುಡುತಿರುವ ಚಿತೆ! ಎನೆಂದರೂ ತಡೆಯಲಾಗುತಿಲ್ಲ ಆ ಭಾಷ್ಪಾಂಜಲಿಯ! ಕಣ್ಣೀರಿನ ಈ ಮಳೆಗೆ ಕಾಗದವೂ ಹಸಿಹಸಿಯಾಗುತಿದೆ. ಶಾಯಿಯ ಅಕ್ಷರಗಳೆಲ್ಲವು ಹರಡುತಿವೆ.ಹಾಳೆಯು ಹರೆದು ಹೋಗುವ ಸ್ಥಿತಿಯ ತಲುಪಿದೆ. ಗಟ್ಟಿ ಮನಸ್ಸೇ ಇಂದು ಈ ಕಂಬನಿಯಲಿ ನೆನೆದು ಸೊರಗುತಿದೆ ಇನ್ನು ಈ ತಿಳಿ ಹಾಳೆಯ ತಪ್ಪೇನು!?


ನನ್ನ ಮನಸ್ಸಿನಲ್ಲಿರುವುದ, ನಿನ್ನ ಪ್ರೀತಿಗೆ ನನ್ನ ಇಚ್ಛೆ ಕೊಡಲಾಗದಿರುವುದ, ನಿನಗೆ ನೇರವಾಗಿ ಹೇಳಲಾಗದೆ ಈ ಪತ್ರದ ಮೂಲಕೆ ಹೇಳುವ ಬಯಕೆಯಾಯಿತು. ಆದರೆ, ಬಳಿಕ ನಿನ್ನಲಿ ನನ್ನ ಮೇಲೆ ಯಾವ ಭಾವನೆ ಮೂಡುತ್ತದೊ ಎಂಬ ಭಯದಲಿ ಹಿಂದೆ ಸರಿಯುತಿರುವೆ!


ಕೊಡಲೆಂದೇ ಬರೆದ ಪತ್ರ,
ಕೊಡಲಾಗುತಿಲ್ಲ.
ಪ್ರೀತಿಯ ಬಯಸಿ ಪ್ರೀತಿಸಿದ ಮನ
ಇಂದು ಅದ ತೋರುವಂತಾಗುತಿಲ್ಲ.
ಒಲವ ಅಭಿಷೇಕಗೈಯುವಂತೆ ಬಯಸಿದ ನಾನು,
ಇಂದು ಪ್ರೀತಿಯನೇ ಕೊಲ್ಲುತಿರುವೆನಲ್ಲ!

ಎಷ್ಟೇ ಹೆಳಿದರು, ಎಷ್ಟೇ ಕೇಳಿದರು, ಏಷ್ಟೇ ಚರ್ಚಿಸಿದರು, ಎಷ್ಟೇ ಯೊಚಿಸಿದರೂ, ಇದೇ ಉತ್ತರವು ನ(ನಿ)ನ್ನೊಲವಿಗೆ!(?) ಹಸಿಯಾದ ಕಾಗದ; ಒಲವ ಶೋಕ ಪತ್ರ! ಹ್ಮ್ಮ್ಮ್..ಚಿಂತಿಸದಿರು ಇದ ನಾ ನೀಡುವುದಿಲ್ಲ ನಿನಗೆ! ನಿಟ್ಟುಸಿರು ಬಿಟ್ಟು ಮನದಲಿ ಉರಿಯುತಿರುವ ಚಿತೆಗೆ ಹಸಿ ಹಾರಲೆಂದು(?) ಎಸೆಯುವೆನು!
ಕ್ಷಮಿಸುವುದಾದರೆ ಕ್ಷಮಿಸಿಬಿಡು!

Saturday, May 21, 2011

ಹೀಗೊಂದು ದಿನ. . .


ಹುಸಿ ಕೋಪದ ನಡುವೆ ತುಸು
ಪ್ರೀತಿಯ ಹೊನಲು
ನಡುವೆಯೆ ಚಂದ್ರಮನ ಬೆಳಕು.
ಕೈ ಬೆರಳುಗಳ ಮಿಲನದೊಂದಿಗೆ
ಸಾಗಿದೆ ಕಾಲ್ಗಳು ಬಲು ದೂರ.
ಅರ್ಧಾಕಾರದ ಚಂದ್ರಮನ ಸನಿಹದಿ
ಒಂದು ದೃಷ್ಟಿಬಟ್ಟಿನಂತಹ ಚುಕ್ಕಿ
ಹಾರಿದೆ ಮನಸ್ಸು ಪಕ್ಷಿಯಂತೆ ಅದನು ನೋಡಿ.
ಕಾರ್ಮೋಡದ ನದುವೆ ಶುದ್ಧ ಬಿಳಿಯ ಶಶಿ
ಇನಿಯನ ಕಣ್ಣಲ್ಲಿ ಪ್ರತಿಬಿಂಬಿಸಿದ ದೃಶ್ಯ ಬಲು ಸಿಹಿ.



Thursday, May 12, 2011

ತುಂಬಿಕೊಂಡಿರುವೆನು ನಿನ್ನನೆ ಪ್ರತಿ ಕಣದಲು.


ಮಾಮರದಲಿ ಕೋಗಿಲೆ ಇಲ್ಲ
ಹೂದೋಟದಲಿ ಹೂಗಳರಳಿಲ್ಲ
ಬಾನಲ್ಲಿ ಹುಣ್ಣಿಮೆಯ ಚಂದಿರನಿಲ್ಲ
ಸನಿಹದಲಿ ತಿಳಿ ತಂಗಾಳಿಯ ಸುಳಿವಿಲ್ಲ.

ಚೈತ್ರ ಮಾಸ ಮುಗಿಯಿತು ನನ್ನ ಲೋಕದಲಿ
ನೀ ನನ್ನ ಅಗಲಿದಾಗಿನಿಂದ
ಬರಿಯ ಶೋಕವೆ, ಬರಿಯ ಕಹಿ ನೆನಪುಗಳೆ ನನ್ನ ಪಾಲಿಗಿಲ್ಲಿ
ನೀ ನನ್ನ ಅಗಲಿದಾಗಿನಿಂದ.

ಎಂದು ಬಯಸದ ವರ
ಎಂದೂ ಕಾಣದ ಕನಸು
ನಿನ್ನ ಈ ಅಗಲಿಕೆಯು
ಮನವು ರೋಧಿಸುತಿದೆ ಪ್ರತಿ ಕ್ಷಣವು
ತುಂಬಿಕೊಂಡಿರುವೆನು ನಿನ್ನನೆ ಪ್ರತಿ ಕಣದಲು.

ಸಾಕು ಈ ನರಕ ಯಾತನೆ ನನಗೆ
ದಿನವು ಸಾಯುತಿರುವೆನು ಈ ಮೌನಕ್ಕೆ
ಕೇಳಿಕೊಳ್ಳುವೆನು ಕಾಲೂರಿ ನಿನಗೆ
ಮತ್ತೆ ಬಂದು ನಾಂದಿ ಹಾಡು ಪ್ರೀತಿಗೆ.



Wednesday, May 4, 2011

ಸ್ನೇಹ. . .???ಪ್ರೀತಿ. . .???. . .ಸ್ನೇಹ. . . :)

ಸ್ನೇಹಿತನಾಗಿರುವ ಅವನ ಮೇಲೆ
ಹೇಗೆ? ಏಕೆ? ಹುಟ್ಟಿತೋ ಈ ಪ್ರೀತಿ ನಾ ಕಾಣೆನು.
ಅವನೊಂದಿಗೆ ಸಲುಗೆ ಹೆಚ್ಚಿತೆ?
ಇಲ್ಲ ಸ್ನೇಹ ಹೆಚ್ಚಾಯಿತೆ?
ಪ್ರತಿದಿನದ ಹರಟೆ
ಪ್ರತಿ ದಿನದ ಹುಸಿ ಮುನಿಸು
ಇದೆ ಪ್ರೇರೇಪಿಸಿತೆ ಪ್ರೀತಿಸಲು?
ಎಂತಹ ಹುಚ್ಚು ಮನಸ್ಸು ನನ್ನದು?
ಅವನ ಅಮೃತ ಸ್ನೇಹವ
ಪ್ರೀತಿ ಎಂದು ಭಾವಿಸುತಿರುವೆನಲ್ಲ!
ಛೆ!! ಮರೆತು ಬಿಡು ಆ ಮಾತನ್ನು ಮನವೆ, ಅದು ತರವಲ್ಲ.
ಪ್ರೀತಿಯ ಹೆಸರಲಿ ಸ್ನೆಹ ಅಂತ್ಯಗೊಳ್ಳುವುದು ಬೇಡ.
ಪ್ರೀತಿಯ, ನಲುವಿನ ವಾತ್ಸಲ್ಯದ,
ಎಲ್ಲಾ ಭಾವನೆಗಳ ತುಂಬಿರುವ ಪರಿಶುದ್ಧ ಸ್ನೇಹಕ್ಕೆ
ಅಂತ್ಯವಾಡುವುದು ಬೇಡ.
ಸ್ನೇಹದ ಛಾಯೆ ಹೀಗೆ ಕಲ್ಮಶವಿಲ್ಲದೆ
ಕಾಂತಿಯ ಬೀರುತ ಚಿರವಾಗಿರಲಿ....


Friday, April 29, 2011

ನಿನ್ನ ಪ್ರೀತಿಗೆ ನನ್ನ ಕಾಣಿಕೆ

ಆನಂದ ಕಂಬನಿ ತುಂಬಿದೆ ಕಣ್ಣುಗಳ
ಕೇಳಿ ಒಲವ ಮಾತುಗಳ.


ಎಲ್ಲಿ ಬಚ್ಚಿಟ್ಟುಕೊಂಡಿರುವೆ ಅಷ್ಟು ಪ್ರೀತಿ?
ತಿಳಿದು ಬದಲಾಗಿದೆ ನನ್ನ ಸ್ಥಿತಿ.

ನಿನ್ನಷ್ಟು ಯಾರೂ ಪ್ರೀತೀಸಲಾರರು ನನ್ನನು,
ಸಾವಿರ ಜನುಮಕ್ಕೂ ನಿನ್ನನ್ನೇ ಬೇಡುವೆನು.

ಆಣೆ ಹಾಕುವೆನು ಗೆಳೆಯ ಉಳಿಸಿಕೊಳ್ಳುವೆನು ಈ ಬಂಧ,
ನೀಡುವೆನು ನಿನಗೆ ಎಲ್ಲಾ ಆನಂದ.

ಜೊತೆಗಿರುವೆನು ಎಂದೆಂದಿಗೂ,
ಮಳೆಯಲಿ ಪ್ರೀತಿಯ ಕೊಡೆಯಾಗಿ,
ಚಳಿಯಲಿ ಬೆಚ್ಚನೆಯ ಅಪ್ಪುಗೆಯಾಗಿ.

ಹೇಳುತಿರುವೆನು ಕೇಳು, ನಿನ್ನೆಡೆಗಿಲ್ಲ ನನ್ನಲ್ಲಿ
ಯಾವುದೇ ಸಂಕೊಂಚ,
ನನ್ನನ್ನೇ ಅರ್ಪಿಸಿರುವೆ ನಿನಗೆ ನಾ. . .

Wednesday, April 27, 2011

ಮನವು ಒಲವ ಬಯಸಿದ್ದೇ ತಪ್ಪ?


ದೇವರೆ ಇದು ತರವೆ?
ಎನ್ನ ವಿನೋದವ ಕೊಂದೆ ಏಕೆ?
ನಿನಗೆಕಿಷ್ಟು ಕ್ರೂರ ಮನಸ್ಸು?
ನನ್ನ ಮೆಲೆ ಕೊಂಚವಾದರೂ ಕನಿಕರಿಸು.
ಉಸಿರುಸಿರಿಗು ಸಾವು,
ಪ್ರತಿ ಸಂತೋಷಕ್ಕೂ ನೋವು.
ಮನವು ಒಲವ ಬಯಸಿದ್ದೇ ತಪ್ಪ?
ಬಣ್ಣದ ಬದುಕಿಗೇಕೆ ಎಸದೆ ನೀ ಕಪ್ಪ?
ನನ್ನದೋ ನಿರುಪಮ ಪ್ರೀತಿ
ಒಪ್ಪದೆ ಹೋದನೋ ಅವನು ಯಾವ ರೀತಿ
ನಿರ್ನಾಮವಾಯಿತು ನನ್ನ ಅನುರಾಗ
ಇದುವೆ ಎನೋ ನನ್ನ ದೌರ್ಭಾಗ್ಯ?

Monday, April 25, 2011

ತಿಳಿಸಲೇಳುತಿರುವೆಯ ನನ್ನ ಪ್ರೀತಿಯನು?


ಕೇಳುತಿರುವೆಯ ನನ್ನ ಪ್ರೀತಿ ಎಷ್ಟೆಂದು?
ತಿಳಿಯೆಯ ಹೇಳದೆ ನಾನೆಂದು?
ನೋಡು ಆ ನೀಲಿ ಆಕಾಶವ,
ಹೇಳುವೆಯ ಅದರ ಕೊನೆಯ?
ಇತ್ತ ನೋಡು ಈ ಕೊಳ,
ಹೇಳುವೆಯ ಅದರಲ್ಲಿರುವ
ಹನಿಗಳ ಸಂಖ್ಯೆಯ?
ಕಣ್ಣಾಯಿಸು ಆ ಕಾರ್ಮೊಡದ ಕಡೆ
ಎಣಿಸುವೆಯ ಆ ಚುಕ್ಕಿ ತಾರೆಗಳ?
ಎಲ್ಲಿರುವುದು ನೋಡು ಹಿಡಿ ಮಣ್ಣು,
ತಿಳಿಯೆಯ ಇದರಲ್ಲಿರುವಷ್ಟು ಅಣುಗಳನು?
ಹಿಡಿದಿಕೋ ಈ ಕೈಯನು
ಎಣಿಸುವೆಯ ಆ ರೇಖೆಗಳನು?
ಚಿಕ್ಕ ಸಂಗತಿಯೇ ತಿಳಿಸಲಾದೆ ನೀನು
ಅಂತಹದರಲ್ಲಿ ತಿಳಿಸಲೇಳುತಿರುವೆಯ
ನನ್ನ ಪ್ರೀತಿಯನು?
ನೋಡೆನ್ನ ಕಣ್ಣುಗಳನು ಕಾಣುವುದು ಒಲವಿನಧಾರೆ
ಬಳಸೆನ್ನ ಸನಿಹದಿ, ನೀ ತಿಳಿಯುವೆ ನಿನಗಿರುವ ರಕ್ಷಣೆ
ಹಿಡಿದು ನಡೆ ಎನ್ನ ಕೈ, ಕಾಣುವೆ ನೀ ಹರುಷವಲ್ಲಿ
ಹೀಗೆ ಬಣ್ನಿಸುತಿರಬಹುದು ಎನ್ನ ಪ್ರೀತಿಯನು
ಆದರೆ ಸಾಕಾಗುವುದಿಲ್ಲವೋ ಆ ಅಕ್ಷರ ಮಾಲೆಯ ಪದಗಳು.
ಹೇಳಲಾಗದು ಈ ಪ್ರೀತಿ, ನೋಡಲಾಗದು ಈ ಪ್ರೀತಿ
ಕೇವಲ ತಿಳಿಯಬೇಕು ಅಂತರಂಗದಲ್ಲಿರುವ
ಪ್ರೀತಿಯ ಭಾವನೆಯಲಿ ಮುಳುಗಿ.

Saturday, April 23, 2011

ಅವನು....


ನಲ್ಲನ ನಲುವಿನ ನಗೆ ಶಶಿಯು ಬೆಳಗಿದಂತೆ,
ಅವನ ನುಡಿಯು ಮುತ್ತುಗಳುದುರಿದಂತೆ,
ಅವನ ನೋಟವು ಮನ್ಮತ ಬಾಣ ಬಿಟ್ಟಂತೆ,
ಅವನ ಧನಿಯು ಕೊಳಲಿನ ಮಧುರ ಗೀತೆಯಂತೆ
ಅವನ ಸ್ಪರ್ಶವು ತಿಳಿ ತಂಗಾಳಿಯಂತೆ
ಅವನ ಪ್ರತಿ ಮಾತು ಭಾಷೆಯಿಟ್ಟಂತೆ
ಅವನ ಒಲವು ಆಕಾಶ ಜ್ಯೋತಿಯಂತೆ
ಇವೆಲ್ಲ ಮೀರಿ ಅವನು ನನ್ನ ಪ್ರಾಣವಂತೆ.

Tuesday, April 19, 2011

ಮೊದಲ ಮಳೆಗೆ...........


ಇಳಿಹೊತ್ತಿಗೆ ಶುರುವಾಯ್ತು ಮಳೆ
ವರುಷದ ಮೊದಲ ಮಳೆ
ತುಂಬು ಚಂದ್ರನ ಬೆಳದಿಂಗಳಲಿ
ತಂಪ್ಪಾದ ತಂಗಾಳಿಯ ಜೊತೆ
ಮನವ ನೆನೆಸಲು ಬಂತು
ತುಂತುರು ಮಳೆ.
ವರುಣದೇವನ ಈ ಬರುವಿಕೆಯೇ
ಕಾಯುತ್ತಿದ್ದ ಹೂದೋಟಗಳು ನಲಿಯುತಿವೆ
ಭುವಿಯು ಘಮಿಸುತಿದೆ
ಆ ಮಣ್ಣಿನ ಸುವಾಸನೆಗೆ ಎನ್ನ
ಮನಸ್ಸು ಬಯಸುತಿದೆ ಎಂದೂ ಬಯಸದ
ಲೋಕವ;ಪ್ರೇಮ ಲೋಕ!
ಬಯಸಿದೆ ಮನ ಒಬ್ಬ ಗೆಳೆಯನನು
ತವಕಿಸುತಿದೆ ಹೃದಯವು ಪ್ರೀತಿ ಎಂಬ
ಲೋಕವ ಸುತ್ತಿ ಬರಲು!
ಬೇಕೆಂದಿದೆ ಭಾವನೆಗಳ ಪ್ರಪಂಚ,
ಎಲ್ಲಿ ಇರುವಳು ನಲ್ಲೆ ನಲ್ಲನ ಆಸರೆಯಡಿಯಲಿ,
ಪ್ರೀತಿಯ ಬೆಚ್ಚುಗೆಯಲಿ!
ಬಯಸುತಿರುವೇನು ಒಲವ ಸಿಂಚನ,
ಆಗಲಿ ಅದು ಅವನ ನನ್ನ ಮನದ ಆಲಿಂಗನ
ಕೇವಲ ಪ್ರೀತಿಯೇ ನನ್ನ ಮನದ ಸಂಜೀವನ
ಅದಕ್ಕೆ ಅರ್ಪಿಸುವೆನು ನಾ ನಮನ.

Saturday, April 16, 2011

ಕೇವಲ ಸುಳ್ಳು ಕವಿತೆ!!!!!?


ಮರದ ಮರೆಯಲಿ ಮನಸ್ಸಿದೆ ದಿನವಿಡೀ
ತಿಲಿಯದೆ ಹಾರಿಹೊಯಿತ್ತೆಲ್ಲೋ ಅಲ್ಲೆ ಇದ್ದ ಹಕ್ಕಿ.
ಒಲವಿನ ಅಣತೆ ಹುರಿದು-ಹುರಿದೆ ಸತ್ತು
ಕಪ್ಪು ತಂದಿದೆ ಸುತ್ತಲು
ಮತ್ತೆ ಬರುವುದೋ ಬೆಳಕೆಂಬ ಪ್ರೀತಿ
ಹೋಗಿ ಈ ಕತ್ತಲು.
ಹುರಿಯುವ ಬೆಂಕಿಯೋಳಗೆ ಬಿದ್ದಂತಾಗಿದೆ ಎನ್ನ
ಮನಸ್ಸು ಪ್ರಿತಿಯ ಹುಡುಕಲೋಗಿ.
ಯಾರೂ ಇಲ್ಲದಂತ್ತಾದರು ಸಂತೈಸಲು
ನನ್ನ ಮನವ ತೂಗಿ.
"ಯಾರಿಗೂ ಯಾರು ಇಲ್ಲ ಈ ಜಗದಲಿ"
ಸತ್ಯವೇ ಈ ಮಾತು ಮನವೆ? ಸತ್ಯವೆ?
ಹೌದು ಅದು ಸತ್ಯ ಎನ್ನ ಬಾಳಲಿ
ತಿಳಿದುಕೊಂಡಿರುವೆನು ಹಾಗೆಂದು ನಾನಿಲ್ಲಿ.
ವಿಶಾಲವಾದ ತಿಳಿ ನೀರಿನಂತಿದ್ದ ಮನಸ್ಸಿಗೆ
ಎಸೆದರು ನೋವೆಂಬ ಕಲ್ಲ.
ಸಂತಸದ ಹಸಿರು ನೆಲದಲಿ
ಖುಷಿಯಲ್ಲಿರುವ ಹುಡುಗಿ ನಾನಲ್ಲ.
ತೊರಲಾಗದು ಇನ್ನು ನನ್ನೀ ನಟನೆಯ ನಗು
ಆ ಅರ್ಥವಿಲ್ಲದ ಮಾತುಗಳೂ ಸಾಕು.
ಇಂತ್ತಾದರು ನನಗೆ ಆ ಹುಸಿ ಪ್ರೀತಿ ಬೇಕೆ?
ಸತ್ತೋದರು ಆ ಮುಗುಳುನಗೆ, ನನಗೆ ಈ ಬದುಕೇಕೆ?
ತಿಳಿಯದೆ ನಿಮಗೆ ನಾನೇಕಿರುವೆ ಹೀಗೆ?
ಹುಡುಕಲೋಗದಿರಿ ಇದು ಕೇವಲ ಸುಳ್ಳು ಕವಿತೆ.

Thursday, April 14, 2011

ಒಂದು ಮುಂಜಾವಿನ ದಿನ...

ಮುರಿದು ಬಿದ್ದ ಸೇತುವೆಯ ಮೇಲೆ ಕುಳಿತು
ಕಾಲುಗಳ ತಿಳಿ ನೀರಲಿ ನೆನೆಯ ಬಿಟ್ಟು
ಕಣ್ಣುಗಳ ರೆಪ್ಪೆಗಳು ಅಪ್ಪಲಾಗದಂತೆ ಮಾಡಿ
ಕಣ್ಣುಗಳಲೇ ಮಾತನಾಡಿ
ಮಾತು ಮುಗಿಯುವ ಮೊದಲೇ 
ತಂಗಾಳಿಗೆ ಮನಸೋತಿ
ನಿನ್ನ ಹೆಗಲಮೇಲೆ ತಲೆಯಿಟ್ಟು
ನಿನ್ನ ಅಂಗೈಯ ಜೊತೆ ನನ್ನ
ಬೆರಳಿಂದ ಚಿತ್ರ ಬಿಡಿಸುವ ಆಟವಾಡುತ್ತಾ
ನೀರಿಗೆ ನೆನೆಯಲು ಬಿಟ್ಟ ಕಾಲುಗಳಿಂದ
ಶಾಂತಿಯುತವಾದ ನೀರ ನಿನ್ನ ನನ್ನ 
ಹೆಸರ ಬರೆದು ಕದಡುತ
ನಡುವೆಯೇ ಹುಸಿ ಮುನಿಸಿಗೆ ಆಮಂತ್ರಣ ನೀಡುತ
ಮರುಕ್ಷಣವೇ ಕೋಪವ ತೊರೆದು ರಾಜಿಯಾಗುತ
ಮತ್ತೆ ತಿಳಿ ನೀರಿಗೆ ಕಾಲುಗಳ ನೆನೆಯಲು ಬಿಡುತ್ತಾ
ನಿನ್ನ ಪ್ರೀತಿಯ ಸವೆಯುತ ಕಳೆದ
ಆ ಮುಂಜಾವು ಅತಿ ಮಧುರ
ಓ ನನ್ನ ಇನಿಯ....


ಚಿತ್ರ ಕೃಪೆ:Harshad Uday Kamath


Wednesday, April 13, 2011

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ

ಜಲಿಯನ್ ವಾಲಾ ಬಾಗ್.....; ಹೆಸರು ಕೇಳುತಿದ್ದಂತೆ ಕಿವಿ ನೆಟ್ಟಗಾಗುತ್ತದೆ, ಕಣ್ಣು ತುಂಬುತ್ತದೆ,  ಕೋಪ ನೆತ್ತಿಗೇರುತ್ತದೆ, ರೋಷ ಉಕ್ಕಿಬರುತ್ತದೆ. ಕಾರಣ ಅಂದು ಆ ಉದ್ಯಾನವನದಲಿ ನಡೆದ ಸಾವಿರಾರು ಜನರ ಮಾರಣಹೋಮ.

೧೩ ಏಪ್ರಿಲ್ ೧೯೧೯, ಪಂಜಾಬ್ ಪ್ರಾಂತ್ಯದ ಸಿಖ್ಖರ ಪವಿತ್ರ ಕ್ಷೇತ್ರವಾದ ಅಮೃತಸರದಲ್ಲಿರುವ ಚಿನ್ನದ ದೆವಸ್ಥಾನದ ಸಮೀಪದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನ ವನದಲ್ಲಿ ಸಹಸ್ರಾರು ಮಂದಿ ಬೈಸಾಖಿ/ವೈಸಾಖಿ ಹಬ್ಬವನ್ನಾಚರಿಸಲು ನೆರೆದಿದ್ದರು. ಆದರೆ, ಅಮೃತಸರದಲ್ಲಿ ಮಾರ್ಷಲ್ ನಿಯಮದಂತೆ ನಾಲ್ಕಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ. ಆದ್ದರಿಂದ ಅಂದು ನಡೆಯಲಾಗಿದ್ದ ಆ ಹಬ್ಬದ ಆಚರಣೆಯು ನಿಯಮದ ಉಲ್ಲಂಘನೆ ಎಂಬ ಕಾರಣದಿಂದ ಅಲ್ಲಿ ಸಾವಿರಾರು ಜನರ ಕಗ್ಗೊಲೆ ನಡೆಯಿತು.


ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅವನಿಂದ ಈ ಕೃತ್ಯ ನಡೆಯಿತು. ಬಂದೂಕುಗಳಿಂದ ಸಜ್ಜಿತವಾದ ಐವತ್ತು ಸೈನಿಕರುಳ್ಳ ಒಂದು ಸೇನೆಯ ಗುಂಪು ಉದ್ಯಾನವನದೊಳಗೆ ಪ್ರವೆಶಿಸಿತು. ಬರುತಿದ್ದಂತೆಯೇ ಅಲ್ಲಿ ಹಬ್ಬವನ್ನಾಚರಿಸಲು ನೆರೆದಿದ್ದ ಜನರಿಗೆ ಯಾವುದೇ ರೀತಿಯಾದ ಆದೇಶವಾಗಲಿ, ಎಚ್ಚರಿಕೆಯಾಗಲಿ ಕೊಡದೆ, ಗುಂಡು ಹಾರಿಸುವಂತೆ ಸೈನಿಕರಿಗೆ ಆಜ್ಞೆ ಮಾಡಿದನು ಜನರಲ್ ಡೈಯರ್. ಸತತವಾಗಿ ೧೦ ರಿಂದ ೧೫ ನಿಮಿಷದವರೆಗೆ ಗುಂಡಿನ ಸುರಿಮಳೆಯಾಯಿತು. ಉದ್ಯಾನವನದ ಗೋಡೆಗಳು ಎತ್ತರವಾಗಿದ್ದರಿಂದ ಹಾಗೂ ಇತರೆ ಪ್ರವೇಶದ್ವಾರಗಳು ಶಾಶ್ವತವಾಗಿ ಮುಚ್ಚಲ್ಪಡಲಾಗಿದ್ದರಿಂದ ಬೀತಿಗೊಂಡ ಜನರು, ಗೋಡೆ ಹತ್ತಿಯಾದರು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಇನ್ನು ಕೆಲವರು ಉದ್ಯಾನವನದಲ್ಲಿದ್ದ ಬಾವಿಯೊಳಗೆ ಹಾರಿದರು. ಅಂಕಿಅಂಶದ ಪ್ರಕಾರ, ಬಾವಿಯೊಳಗಿಂದ ನೂರಕ್ಕೂ ಹೆಚ್ಚು ಶವಗಳನ್ನು ತೆಗೆಯಲಾಗಿತ್ತು. '೩೭೯' ಬ್ರಿಟಿಷ್ ಸರ್ಕಾರವು ನೀಡಿದ್ದ ಸಾವಿಗೀಡದವರ ಸಂಖ್ಯೆಯಾಗಿತ್ತು. ಆದರೆ ಇಂಡಿಯನ್ ನಾಶನಲ್ ಕಾಂಗ್ರೆಸ್ ಅವರ ಹೇಳಿಕೆಯ ಪ್ರಕಾರ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಹಾಗೂ ಸಾವಿರದ ಐದುನೂರಕ್ಕು ಹೆಚ್ಚು ಜನ ಗಾಯಗೊಂಡಿದ್ದರು. ಕರ್ಫ್ಯು ಇದ್ದ ಕಾರಣ ಎಷ್ಟೋ ಗಾಯಗೊಂಡ ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಲಿಲ್ಲ.

ಘಟನೆಯ ನಂತರ ಡೈಯರನು ಮೇಲಧಿಕಾರಿಗಳಿಗೆ, ವಿದ್ರೋಹಿ ಸೈನ್ಯವು ಎದುರಾದುದರಿಂದ ಅವರಿಗೆ ಪಾಠ ಕಲಿಸುವುದಕ್ಕಾಗಿ ಈ ರೀತಿ ಮಾಡಿದೆನೆಂದು ಹೇಳಿದನು. ಪ್ರತಿಯಾಗಿ ಅಂದಿನ ಲೆಫ್ಟಿನೆಂಟ್ ಗವರ್ನರ್ ಆದ ಓ'ಡ್ವಯರ್, 'ಈ ಘಟನೆಯನ್ನು ನಾವು ಒಪ್ಪುತ್ತೆವೆ, ಸರಿಯಾಗಿ ಪಾಠ ಕಲಿಸಿದಿರಿ' ಎಂದು ಸಂದೇಶ ಕಳುಹಿಸಿದ.
 


ನಂತರದಲ್ಲಿ, ವಿಚಾರಣೆಗಾಗಿ ಡೈಯರ್ ನನ್ನು ಹಂಟರ್ ಆಯೋಗಕ್ಕೆ ಬರುವುದಾಗಿ ಆದೇಶ ಕಳುಹಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಡೈಯರ್, ಜಲಿಯನ್ ವಾಲ ಬಾಗ್ನಲ್ಲಿ ನಡೆಸಲು ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗೆಗೆ ನನಗೆ ಮಧ್ಯಾನವೇ ತಿಳಿದಿತ್ತಾದರೂ, ಅದ ತಡೆಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗು ತಾನು ಜಲಿಯನ್ ವಾಲಾ ಬಾಗ್ಗಿಗೆ ಗುಂಡು ಹಾರಿಸುವ ಉದ್ದೆಶದಿಂದಲೇ ತೆರಳಿದ್ದಾಗಿ ಹಾಗು ಗಾಯಗೊಂಡವರ ಆರೈಕೆ ಆಸ್ಪತ್ರೆಗಳ ಕರ್ತವ್ಯ ನನ್ನದಲ್ಲ ಎಂದು ರಾಜಾರೋಷವಾಗಿ ಹೇಳಿಕೊಂಡನು. ಇವನ ಈ ಅಮಾನುಷ ಕೃತ್ಯದಿಂದಾಗಿ ಇವನನು 'ಅಮೃತಸರದ ನಿರ್ದಯಿಪಶು' ಅಥವಾ 'The Butcher of Amritsar' ಎಂದು ಕರೆಯುತಿದ್ದರು.


ಈ ಹತ್ಯಾಕಾಂಡವು ಭಾರತದ ಸ್ವತಂತ್ರ್ಯ ಚಳುವಳಿಗೆ ವೇಗೊತ್ಕರ್ಷವಾಗಿ ಪರಿಣಮಿಸಿತು. ಈ ದುರಂತದಿಂದ ಬ್ರಿಟಿಷರು ಹಾಗೂ ಭಾರತೀಯರ ನಡುವೆ ದೊಡ್ಡ ಕಂದರ ನಿರ್ಮಾಣವಾಗಿ ವಿಶ್ವಾಸವಿಟ್ಟವರಲ್ಲೂ ಕೂಡ ನಂಬಿಕೆ ಸಡಿಲವಾಯಿತು. ಆಳುವವರ ಮತ್ತು ಪ್ರಜೆಗಳ ನಡುವೆ ವಿಶ್ವಾಸ-ಸಂಬಂಧ ಕುಸಿದು ಬಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಚಳುವಳಿಯ ರೂಪ ಬದಲಾಯಿತು. ಈ ಘಟನೆಯೇ ಕ್ರಾಂತಿಕಾರಿ 'ಶಹೀದ್ ಭಗತ್ ಸಿಂಗ್' ಅವರನು ಸ್ವತಂತ್ರ್ಯ ಹೋರಟದಲಿ ನಾನೂ ಭಾಗಿಯಾಗಬೇಕು, ಭಾರತಮಾತೆಯನು ಇಂತಹ ಪಶುಗಳಿಂದ  ರಕ್ಷಿಸಬೇಕೆಂಬ ಸ್ಫೂರ್ತಿ ತಂದಿತು. ಈ ಕೃತ್ಯದಿಂದಾಗಿಯೆ ಗಾಂಧಿ ಬ್ರಿಟಿಷರ ವಿರುದ್ಧ ನಡೆಸಿದ 'ಅಸಹಕಾರ ಸತ್ಯಾಗ್ರಹ'ಕ್ಕೆ ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು.

ರಾಷ್ರೀಯ ಚಳುವಳಿಯ ಕಾವನ್ನು ಆರಿಸಲು ಮಾಂಟೇಗೊಚೇಮ್ಸ್ ಫರ್ಡ್ ಸುಧಾರಣೆಗಳನ್ನು ಬ್ರಿಟಿಷ್ ಸರ್ಕಾರ ಪ್ರಕಟಿಸಿತು. ಆದರೆ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳಲ್ಲಿ. ಸುಧಾರಣೆಗಳು ಭಾರತೀಯರಿಗೆ ಸಮಾಧಾನ ತರಲಿಲ್ಲ.
 
ನಂತರ ಮಾರ್ಚ್ ೧೩, ೧೯೪೦, ಉಧಾಮ್ ಸಿಂಗ್ (ಅವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗೂ ಅಲ್ಲಿ ನಡೆದ ಕೃತ್ಯದಿಂದ ನೋವನುಭವಿಸಿದವರು) ಎಂಬ ವ್ಯಕ್ತಿ ಓ'ಡ್ವಯಾರ್ ನನ್ನು ಲಂಡನ್ನಿನ ಕ್ಯಾಕಿಸ್ಟನ್ ಹಾಲ್ನಲ್ಲಿ ಹತ್ಯೆ ಮಾಡಿದರು. ಓ'ಡ್ವಯಾರ್, ಡೈಯರ್ ನ ಕೃತ್ಯವನ್ನು ಅನುಭೋದಿಸಿದಕ್ಕಾಗಿ ಹಾಗೂ ಸ್ವತಃ ಅವನೇ ಈ ಕೃತ್ಯದ ಯೋಜನೆಗಾರನಾಗಿದ್ದನೆಂಬ ಕಾರಣದಿಂದ ಅವನನ್ನು ಹತ್ಯೆ ಮಾಡಲಾಯಿತು.
    
ವಿಚಾರಣ ವೇಳೆ ನ್ಯಾಯಾಲಯದಲಿ ಉಧಾಮ್ ಸಿಂಗ್ ಅವರು, "ನಾನು ಹೀಗೆ ಮಾಡಲು ಅವನ ಮೇಲೆ ಇದ್ದ ಹಗೆಯೇ ಕಾರಣ. ಈ ಸೇಡು ತೀರಿಸಿಕೊಳ್ಳಲು ೨೧ ವರುಷಗಳಿಂದ ಕಾಯುತಿದ್ದೆ. ಕೊನೆಗೂ ನಾನು ಯಶಸ್ವಿಯಾಗಿದ್ದೇನೆ. ನನಗೆ ಸಂತೋಷವಾಗುತಿದೆ. ನನಗೆ ಸಾಯಲು ಭಯವಿಲ್ಲ. ನನ್ನ ದೇಶಕ್ಕಾಗಿ ಮಡಿಯುತಿದ್ದೇನೆ. ನನ್ನ ದೇಶದ ಜನರು ಬ್ರಿಟೀಷರ ಆಳ್ವಿಕೆಯಡಿಯಲ್ಲಿ ನೋವನುಭವಿಸುತಿರುವುದನು ನಾನು ನೋಡಿದ್ದೇನೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ. ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಿಂತ ಹೆಚ್ಚಿನ ಗೌರವ ನನಗೆ ಬೇರೆ ಯಾವುದರಿಂದಲೂ ಸಿಗುವುದಿಲ್ಲ" ಎಂದು ಹೇಳಿದರು.

ಉಧಾಮ್ ಸಿಂಗ್ ಅವರನ್ನು ೧೯೪೦, ಜುಲೈ ೩೧ರಂದು ಓ'ಡ್ವಯಾರ್ ನ ಹತ್ಯೆಯ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ಉಧಾಮ್ ಸಿಂಗ್ ಅವರ ಕಾರ್ಯಕ್ಕೆ ಎರಡೂ ರೀತಿಯಾದ ಪ್ರತಿಕ್ರಿಯೆಗಳು ಬಂದಿದ್ದವು. ಪ್ರಶಂಸೆಯ ಜೊತೆಗೆ ಖಂಡನೆಯೂ. ಗಾಂಧಿ, ನೆಹರು ಹಾಗೂ ಮತ್ತಿತ್ತರ ಅಹಿಂಸವಾದಿಗಳು ಒಳಗೊಂಡಂತೆ, ಉಧಾಮ್ ಸಿಂಗ್ ಅವರ ಕೃತ್ಯವನ್ನು 'ವಿವೇಚನಾ ರಹಿತ' ಎಂದು ಖಂಡಿಸಿದರು.

ಆದರೆ ೧೯೫೨ರಲ್ಲಿ ನೆಹರು, "ನಮ್ಮೆಲ್ಲರನು ಸ್ವತಂತ್ರ್ಯ ಭಾರತದಲ್ಲಿ ನಲಿಯಲೆಂದು ಮೃತ್ಯು ಬಾಗಿಲನ್ನು ತಟ್ಟಿದ ಶಾಹಿದ್-ಇ-ಆಜೀಮ್ ಉಧಾಮ್ ಸಿಂಗ್ ಅವರನ್ನು ಗೌರವದಿಂದ ನಮಿಸುತ್ತೇನೆ" ಎಂದು ಪ್ರಶಂಸಿದರು!?
 

ಏನೇ ಆಗಲಿ ಇಂದಿಗೆ ಈ ಘೋರ ಕೃತ್ಯ ನಡೆದು ೯೨ ವರುಶವಾಗಿದೆ. ಸ್ವತಂತ್ರ್ಯ ಸಂಗ್ರಾಮದಲ್ಲಿ ಹೋರಡಿದ, ಹೆಸರೂ ತಿಳಿಯದ ಸ್ವತಂತ್ರ್ಯ ಹೋರಾಟಗಾರರಿಗೆ, ಇಂತಹ ದುರಂತಗಳಲಿ ಸಾವಿಗೀಡಾದ ಅಮಾಯಕರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಅವರು ಶ್ರಮಿಸಿ ನೀಡಿರುವ ನಮ್ಮ ಈ ಸ್ವತಂತ್ರ್ಯ ದೇಶವು ಮತ್ತೆ ಇಂತಹ ಕ್ರೂರಿಗಳ ಕಾಣದಂತೆ ಕಾಪಾಡುವ ಬನ್ನಿ. . . . .

Tuesday, April 12, 2011

ವಿರಹ ಕವಿತೆ


ಇನಿಯ,
ತಾಳಲಾರೆ  ಇನ್ನು  ನಾ  ಈ  ದೂರವ 
ಬಂದು  ಬೇಗ  ಒಪ್ಪಿಕೊ  ಈ  ಪ್ರೀತಿಯ
ಇದೆ  ಬದುಕು  ಒಂದು  ಸುಡುಗಾಡಲ್ಲಿದಂತೆ
ಇದೆ  ಮನಸ್ಸು  ಕೂಡ  ಸತ್ತಂತೆ

ಅನಿಸುತಿಲ್ಲವೇ  ನಾ  ನಿನಗೆ  ಬೇಕೆಂದು?
ಬಿಟ್ಟು  ಹೋಗಲು  ನಿರ್ಧರಿಸಿರುವೆಯ  ನೀ  ಎಂದೂ?
ಬೇಡವೋ  ಈ  ವಿರಹದ  ಬೇಗೆ  ನನಗೆ
ಯಾಕುಂಟು  ನಿನಗೆ  ನನ್ನ  ಮೇಲೆ  ಈ  ಹಗೆ?

ನಗುವೆನು  ಜಗತ್ತಿಗಾಗಿ  ಹೊರಗೆ
ಮರುಗುವೇನು  ಪ್ರಿತಿಗಾಗಿ  ಒಳಗೆ
ನೋಡು  ಕಾದಿ  ಕೂತಿರುವೇನು  ನಾನು
ಬಂದು  ಮತ್ತೆ  ನೀಡು  ನಿನ್ನ ಪ್ರೀತಿಯನು

ದಿನವು  ನೊಂದು  ಅಳುವಂತೆ  ಮಾಡಿದೆ
ಆ  ನಿನ್ನ  ಪ್ರೀತಿಯ  ನೋವು
ಆದರು  ಮಾಸುವುದಿಲ್ಲ  ನಿನ್ನೆಡೆಗಿರುವ
ಈ  ಒಲವು
ಅಮರವಾಗಿರುವೆ  ನೀ  ಎನ್ನ  ಮನದಲಿ
ನನ್ನ  ಬದುಕಿರುವವರೆಗೆ
ಪ್ರಿತಿಸುವೇನು  ನಿನ್ನ  ನಾನು 
ನನ್ನೀ  ಉಸಿರಿನ  ಜೊತೆಗೆ. . .

Friday, April 8, 2011

ನನ್ನ ಮನದ ಭಾವನೆ ಎ(ಯಾ)(ಲ್ಲ)ರಿಗೂ ತಿಳಿಯದು. . .


ದೊರಕುತಿರುವುದು  ನೋಡು  ಮೆಚ್ಚುಗೆ 
ಹೊಗಳಿಕೆ  ನನ್ನ  ಕವನಗಳಿಗೆ 
ಯಾರಿಗೂ  ತಿಳಿಯಲಿಲ್ಲ  ಅದು 
ಒಲವಿನ  ಶೋಕ  ಗೀತೆ.
ಕೇವಲ  ನೋಡುವರು  ನನ್ನ  ಬರಹವ 
ಆದರೆ  ತಿಳಿಯರು  ನಾ  ಪಟ್ಟಿರುವ  ನೋವ.


Thursday, April 7, 2011

ಪಾಪಿ ಎಂಬ ಭಾವದಿಂದ....ಬದುಕಿನಲಿ ನಿರಾಶೆ...


ನೋಡತ್ತ ಮನವೆ
ನಿನ್ನ ಆಸೆ ನೆರವೆರುತಿದೆ
ಸಾವೆಂಬ ಗುರಿಯ ತಲುಪುತಿರುವೆ
ಕೆಟ್ಟ ಜಗವ ಬಿಟ್ಟು ಹೋಗಲು ಕೇವಲ
ಕೆಲವೆ ಗಳಿಗೆ ಬಾಕಿ ಇದೆ
ನಿನ್ನ ಸಭ್ಯವಿಲ್ಲದ ಕೆಲಸಗಳ
ತೊಯ್ಯಲು ಸಿಕ್ಕಿದೆ ನಿನಗೊಂದು ದಾರಿ;ಸಾವು
ಮಡಿದು ಬಿಡು.. ಚಿತೆಯಲಿ ಬೆಂದು ಬಿಡು...
ನಿನ್ನ ಪಾಪವ ತೊಳೆದು ಬಿಡು...
ಮತ್ತೆ ಹುಟ್ವುವುದಾದರೆ
ಹುಟ್ಟ ಬೇಡ ಮಾನವನಾಗಿ
ಬಾವನೆಯೆಂಬ ಮಹಾಸಾಗರದಲಿ
ಸಿಲುಕಿ ಬಿಡುವೆ.. ಸತ್ತು ಬಿಡುವೆ...
ಬೇಡವೋ ಬೇಡ...
ಈ ಮಾನವ ಜನ್ಮ ನಿನಗೆ
ಬೇಡ ಮನವೇ ಬೇಡ!!!


Tuesday, April 5, 2011

ಕಥೆ:-ಸ್ನೇಹದ ಕಡಲಲ್ಲಿ ಮೂಡಿದ ಪ್ರೀತಿಯ ಅಲೆ-3

ಪವಿ  ಮತ್ತೆ  ತನ್ನ  ಊರಿಗೆ  ಹಿಂದಿರುಗಿಬಿಡುವುದಾಗಿ  ಅನಿಸಿತು . ಹೇಗೋ  ಹೃದಯ  ಗಟ್ಟಿ  ಮಾಡಿಕೊಂಡಳು. ಆದರೆ  ಒಳಗೆ  ತಡೆಯಲಾರದಷ್ಟು  ದುಃಖ. ಮೊದಲ  ಪ್ರೀತಿ  ಹೀಗೆ  ಆಯಿತಲ್ಲ, ಇದ  ಮರೆಯುವುದಾದರೂ  ಹೇಗೆ? ಇಷ್ಟು  ದಿನ  ಪಟ್ಟಿದ್ದ  ಸಂಕಟವೇ  ನರಕದಂತಿತ್ತು. ಇನ್ನು  ಮುಂದೆ? ಅಯ್ಯೋ  ಹೇಗೆ  ಈಚೆ  ಬರೋದು  ಈ  ಪ್ರೀತಿಯಿಂದ? ಮನಸ್ಸು  ಸೊರಗಿತು . ತನುವಿನಲ್ಲೇ  ಆಗಲಿ  ಮನದಲ್ಲೇ  ಆಗಲಿ  ಚೈತನ್ಯವಿರಲಿಲ್ಲ.
 ಅಂತು  ಮೈಸೂರಿಗೆ  ಬಂದಾಯಿತು . ಸಬರ್ಬ್  ಬಸ್  ಸ್ಟ್ಯಾಂಡ್  ಇಂದ  ಆಟೋ  ಇಡಿದು  ರೂಮ್ನತ್ತ  ಹೊರಟಳು . ಈ  ಸಪ್ಪೆ  ಮೊರೆ  ಇಟ್ಟುಕೊಂಡು  ಹೇಗೆ  ಹೋಗೋದು? ಸ್ವಲ್ಪವಾದರೂ  ಹುಸಿನಗುವಾದರೂ  ಇರಲಿ  ಎಂದುಕೊಂಡು  ಮುಖವಾಡದ  ನಗು  ಹೊತ್ತಳು. ಆಟೋ  ಅವಳ  ರೂಮ್ನ  ಮುಂದೆ  ನಿಂತಿತು . ರೂಮ್ನ  ಮುಂದೆ  ಮಂಜು!! ನೋಡಿ  ಕಣ್ಣಲ್ಲಿ  ಜೋಗ  ಹರಿಯುವಂತಾಯಿತು. ಮಂಜು  ಅವಳನು  ಕಂಡೊಡನೆ  ಓಡಿ  ಹೋಗಿ  ಬಿಗಿಯಾಗಿ  ಅಪ್ಪಿಕೊಂಡ [ಮೊದಲ  ಅಪ್ಪುಗೆ!]
 ಪವಿಗೆ  ಹೇಗೆ  ಪ್ರತಿಕ್ರಯಿಸಬೇಕೆಂದು  ತಿಳಿಯಲಿಲ್ಲ.
“I missed you a lot ಕಣೆ  ಗೂಬೆ . ಅಟ್  ಲೀಸ್ಟ್   ನಿನಾದ್ರು  ಮಾತಾಡಿಸಬಾರದಿತ್ತ?”
“ಹ್ಮ್ ... ಸಾರೀ”
“ಅಯ್ಯೋ  ಬಿಡೆ  ಆಗಿದೆಲ್ಲ  ಆಗೋಯ್ತು . ಅದ್ಸರಿ  ಯಾಕ್  ಟೆನ್ಶನ್ ? Cheer  up!!”
“ಹ್ಮ್...”
“ಯಾಕೆ  ಹೀಗಿದ್ದಿಯ?”
“tired ಆಗಿದೆ  ಅಲ್ವ  ಅದಕ್ಕೆ”
“ಸಾಕು  ಮುಚ್ಚು. ನನ್ಗೊತ್ತಗಲ್ವ? ಏನಾಯ್ತು?
“ಏನಿಲ್ಲ... lover  ಸಿಕ್ಕಿದಾಳೆ  ನಿನಗೆ... ಇನ್ನು  ನಮ್ಮ  ಜೊತೆ  ಅಷ್ಟಾಗಿ  ಬೇರೆಯಲ್ಲ  ಅಲ್ವ  ಅದಕ್ಕೆ...!”
“ಅಯ್ಯೋ  ಹುಚ್ಚಿ. Friendship first ಆಮೇಲೆ  love”
ಪವಿಗೆ  ಏನು  ಹೇಳಬೇಕೆಂದು  ತಿಳಿಯಲಿಲ್ಲ.
“ಲೇ  ನನ್  ಹುಡುಗಿ  ಬಗ್ಗೆ  ಕೇಳೋಲ್ವ?”
“ಹಾಂ  ಹೇಳು ..ನಿನ್  ಹುಡುಗಿ  ಬಗ್ಗೆ” ಮೆಲ್ಲ  ಧನಿಯಲ್ಲಿ.
“ಹ್ಮ್.. . ತುಂಬಾ  ಒಳ್ಳೆ  ಹುಡುಗಿ . B.com ಓದ್ತಾ  ಇದ್ದಾಳೆ. ಮಾತು  ಸ್ವಲ್ಪ  ಕಮ್ಮಿ . ನನ್  ಜೊತೆ  ಮಾತ್ರ  ತುಂಬಾ  ಮಾತಾಡ್ತಾಳೆ. ಆಗಾಗ  ಕಥೆ, ಕವನ  ಬರಿತಾಳೆ. ಭಾವಗೀತೆ  ಅಂದ್ರೆ  ತುಂಬಾ  ಇಷ್ಟ. ಭಾವನೆನೆ  ಜೀವನ  ಅಂದ್ಕೊಂಡಿರುವವಳು. ಸ್ವಲ್ಪ  seriousness   ಜಾಸ್ತಿನಿ . ಜೊತೆಗೆ  sense of humor ಕೂಡ  ಇದೆ  ಆದ್ರೆ  ನನ್ನಷ್ಟ್  ಇಲ್ಲ.., ನನ್  ಜೊತೆ  ಮಾತಾಡಕ್ಕೆ  ತುಂಬಾ  ಇಷ್ಟ  ಅವಳಿಗೆ. ನನಗು  ಇಷ್ಟನೇ  ಆದ್ರೆ  ತೋರಿಸ್ಕೊಂಡಿಲ್ಲ.... ಹಾಂ  ಅವಳು  ಜಗಳಗಾತಿ  ಕಣೆ . ಕಾಲ್  ಕೆರ್ಕೊಂಡ್  ಜಗಳಕ್  ಬರ್ತಾಳೆ. ಎಷ್ಟೋ  ಸರ್ತಿ  ಜಗಳ  ಆಡಿದಿವಿ . ಈಗಲೂ  ಅಷ್ಟೇ  ಜಗಳ  ಆಗಿತ್ತು  ಸೊ  ೬ months  ಕಾಂಟಾಕ್ಟ್  ಇರಲಿಲ್ಲ . ಇವತ್ತು  ಮಧ್ಯಾನ  ಮಾತಾಡಿಸಿದೆ . ಅವಳಿಗೆ  ಇನ್ನ  ನಾನ್  ಪ್ರಿತ್ಸ್ತಿರೋದು  ಹೇಳಿಲ್ಲ . ಹೇಗೆ  ಹೇಳಿ  ಅಂತ  ಗೊತ್ತಾಗ್ತಾ  ಇಲ್ಲ”
ಅವನು  ಹೇಳ್ತಾ  ಇರೋ  ಹುಡುಗಿ  ಯಾರು ? ಕನ್ನಡಿಯಲ್ಲಿ  ನನ್ನ  ನೋಡಿದಾಗೆ  ಇತ್ತು . ಇವನು  ನನ್ನ  ಪ್ರಿತಿಸ್ತಿದಾನ? ಹೀಗೆ  ಪವಿ  ಮನಸ್ಸಲ್ಲಿ  ಹೇಳ್ಕೋತ  ಇದ್ಲು. ಅವಳಿಗೆ  ತಿಳಿಯದೆ  ಇರೋ  ಹಾಗೆ  ಅಧರದ  ಮೇಲೊಂದು  ಮಂದಾರ!!ಆ  ಹುಡುಗಿ  ಯಾರು  ಅಂತ  ಬೇಗ  ತಿಳಿದಿಕೋ  ಎಂದು  ಮನಸ್ಸು  ಒಂದೇ  ಸಮನೆ   ಹೇಳ್ತಾ  ಇತ್ತು.
“ಮಂಜು, ಅವಳ  ಹೆಸರೇನು?”
“ಪವಿ.. ಪವಿತ್ರ..!!”
ಪವಿಗೆ  ಆಶ್ಚರ್ಯ . ಜೊತೆಗೆ  ಆನಂದ.
“are you talking about me?”
“ಹೌದೆ. ನೀನೆ  ನಾನ್  ಲವ್  ಮಾಡ್ತಿರೋ  ಹುಡುಗಿ. ಬಿಟ್ಟಿರಕ್ಕೆ  ಆಗಲ್ವೇ  ನಿನ್ನ. ನೀನೆ  ಹೇಳು  ಹೇಗೆ  ಪ್ರೊಪೋಸ್  ಮಾಡಬೇಕು  ಅಂತ . ನೀನು  ಒಪ್ಪಿಕೊಳ್ಳೋ  ಹಾಗೇನೆ  ಪ್ರೊಪೋಸ್  ಮಾಡ್ತೀನಿ. ನಿಜವಾಗ್ಲೂ!”
“are you serious? ನಿಜವಾಗ್ಲೂ  ನನ್ನ  ಪ್ರಿತಿಸುತಿದಿಯ?
“ಹ  ಹ  ಹ… ಹೋಗೆಲೇ... ನಿನ್ನಂತಹ  ಬೋರ್  ಹೊಡ್ಸೋ  ಹುಡ್ಗಿನ  ಯಾರ್  ಲವ್ ಮಾಡ್ತಾರೆ?”
“????????”
“ಓಯ್  ಓಯ್.…!ಯಾಕೆ  ಬೇಜಾರ್  ಮಾಡ್ಕೊತ್ಯ....?ಈ  ರೀತಿ  ನಿನ್ನ  ನೋಡೋಕಾಗಲ್ವೆ.... ನೀನೆ  ಕಣೆ....ನಿಜವಾಗ್ಲೂ”
“ನಾನು  ಬೋರ್  ಹೊಡ್ಸೋ  ಹುಡುಗಿ. ನನ್ನಂಥ ಹುಡ್ಗಿನ  ಯಾರ್  ಲವ್  ಮಾಡ್ತಾರೆ  ಹೇಳು?” ಅವನ  ಮಾತನ್ನು  ನೆಗ್ಲೆಕ್ಟ್ ಮಾಡೋ  ಹಾಗೆ  ಹೇಳುತ್ತಾಳೆ  ಪವಿ.
“ನಾನ್  ಮಾಡ್ತಾ  ಇದ್ದೀನಲ್ಲ”
“ನಿಜವಾಗ್ಲೂ?”
“ಹ್ಮ್  ಕಣೆ  ನಿಜವಾಗ್ಲೂ”
“ಪ್ರಾಮಿಸ್?”
“ಹ್ಮ್  ಪ್ರಾಮಿಸ್  ಕಣೆ. ನಂಬಿಕೆ  ಇಲ್ವಾ? ಬೇಕಾದ್ರೆ  ನನ್  ಫ್ರೆಂಡ್ಸ್ ನ  ಕೇಳು  ನಿನ್ನ  ಎಷ್ಟು  ಮಿಸ್  ಮಾಡ್ಕೊಂಡೆ  ಅಂತ  ಹೇಳ್ತಾರೆ  ಮತ್ತೆ  ಲವ್  ಮಾಡ್ತಿರೋದನ್ನು  ಕೂಡ”
“ಮತ್ತೆ  ಆಗ್ಲೆ  ಹೇಳ್ಬಹುದಾಗಿತ್ತಲ್ಲ  ಕಾಲ್  ಮಾಡ್ದಾಗ”
“ನಿನ್ನ  ಲವ್  ಮಾಡ್ತಿರೋದನ್ನ  ಹೀಗೆ  ಹೇಳ್ಬೇಕು  ಅಂತ  ಪ್ಲಾನ್  ಮಾಡಿದ್ದೆ. ನೀನೂ  ನನ್ನ  ಲವ್  ಮಾಡ್ತಿರುತಿಯ  ಅನ್ನೋ  confidence ಮೇಲೆ  ಹೀಗೆ  ಆಟ  ಆಡದೆ ;)”
“ಹೋಗೋ  ನಾನೇನ್  ನಿನ್ನ  ಲವ್  ಮಾಡ್ತಿಲ್ಲ :P”
“ಅಯ್ಯೋ!!!!!! ಪವಿ  ಯಾವಾಗಲೇ  ಇಷ್ಟು  ಚೆನ್ನಾಗಿ  ಕಾಮಿಡಿ  ಮಾಡೋದ್  ಕಲಿತುಕೊಂಡೆ?"
ಪವಿ  ಪ್ರತಿಯುತ್ತರ  ಕಣ್ಣಲಿ  ಹನಿ  ಬಿಂದು, ತುಟಿ  ಮೇಲೆ  ಕಿರು  ನಗು. ಒಮ್ಮೆ  ಮಂಜುನನ್ನು  ಅಪ್ಪಿಕೊಂಡು
“missed you ಕಣೋ  ಕಪಿ. ಇನ್ಮೇಲಾದ್ರು  ಸತಾಯಿಸಬೇಡ”
“ಹ್ಮ್  ಸತಾಯಿಸದೆ  ಹೇಗಿರೋದು? ನೀನಲ್ದೆ  ಇನ್ಯರಿದರೆ ಸತಯಿಸೋಕೆ ?? ಓಕೆ  ನೋಡೋಣ  ಟೈಮ್  ಹೇಗಿರುತ್ತೆ  ಅಂತ:)”
“ದೆವ್ವ...!!!!!”
“ಒಹ್  ನಿನ್  ಹೆಸರಲ್ವ? ಮರತೋಗಿತ್ತು;)”........
ಇಬ್ಬರು  ನಗುತ್ತ..,  ಮಾತಾಡುತ್ತ  ಪಾರ್ಕ್ನ  ಕಡೆ  ಹೆಜ್ಜೆ  ಹಾಕುತ್ತ...,
“ಮನೇಲಿ  ಯಾವಾಗ  ಹೇಳೋಣ್ವೋ?”
“ಲೇ   ಓಡೋಗಿ  ಮದ್ವೆ  ಆಗೋಣ  ಥ್ರಿಲ್  ಆಗಿರುತ್ತೆ”
“ಹೇಯ್  ಕತ್ತೆ  ತಮಾಷೆ  ಸಾಕು. ನಾನ್  ಸೀರಿಯಸ್  ಆಗಿ  ಕೇಳ್ತಾ  ಇದ್ರೋದು”
“ಹ್ಮ್  ಓಕೆ.. ಇಬ್ರು  ಎಜುಕೇಶನ್  complete  ಆಗ್ಲಿ  ಕೆಲಸ  ಸಿಕ್ಲಿ, ಲೈಫ್  settle ಆಗ್ಲಿ  ಆಮೇಲೆ  ಹೇಳೋಣ”
“ಹ್ಮ್ಮ್ಮ್   long way to go .!! ಸರಿ  ಬಿಡು... ಆದ್ರೆ  ನೀನು,  ನಿನ್ನ  ಆ  flirting ಪ್ರೊಗ್ರಾಮ್  ಎಲ್ಲಾ  ಬಿಟ್ಬಿಡು . ಇನ್ನು  ಹುಡ್ಗೀರ್  ಜೊತೆ  ಲಲ್ಲೆಹೊಡಿಯೋದು  ಬೇಡ”
“ಅಯ್ಯಪ್ಪಾ!!!!!!! ಪೀಡೆ  ಕಣೆ  ನೀನು. ಹ್ಮ್  ಓಕೆ ... ಸರಿ  ಬಿಡೋಣ. ಕಷ್ಟ  ಆಗುತ್ತೆ  ಬಟ್  ಓಕೆ  I'll   try  my  best :P” ಮಂಜು  ಮುಂದುವರೆಸುತ್ತ.. “ಲೇ  ಅಲ್ನೋಡೆ  ರಚನಾ! ಇವತ್ತು  ಸೂಪರ್  ಆಗಿ  ಕಾಣಿಸ್ತ  ಇದಾಳೆ  ಅಲ್ವ!? ನಮ್  ಏರಿಯ  ಬೊಂಬಾಟ್  figure! ಕಾಳಾಕ್ಕಕ್ಕೆ  ಟ್ರೈ  ಮಾಡ್ಬೇಕು. ಹೆಲ್ಪ್  ಮಾಡೇ :P!”
“ಥೂ...ಹೋಗಲೋ  ಗಲ್ಲಿ  ಹುಚ್ಚ...!!!!”
“ತಮಾಷೆಗೆ  ಕಣೆ ಹೇಳಿದ್ದು. ನನ್  ಬಗ್ಗೆ  ಗೊತ್ತಿಲ್ವ  ನಿನಗೆ ?”
“ಹಾಂ  ಗೊತ್ತು  ಗೊತ್ತು...”
ಜಗತ್ತನ್ನೇ  ಮರೆಸುತ್ತೆ  ಪ್ರೀತಿ  ಅನ್ನೋದು  ನಿಜ . ಇಲು  ಅದೇ  ಆಯಿತು . ಪವಿ  ಮಂಜು  ಕೈ  ಬೆಸೆದಳು, ಕಾಲ್ಗಳು ಸಮನಾಗಿ.., ನಿಧಾನವಾಗಿ, ಚಲಿಸುತಿದ್ದವು. ಪವಿ  ಮಂಜುನ  ಹೆಗಲನ್ನು  ಒರಗಿಕೊಂಡಳು. ಸುಮ್ಮನೆ  ಏನೇನೋ  ಮಾತಾಡುತ್ತ,  ಜಗಳವಾಡುತ್ತಾ, ಹುಸಿಕೊಪಗಳ  ತೋರುತ್ತ  ಸಾಗಿತ್ತು  ಅವರ  ಪ್ರೀತಿಯ  ದಿಬ್ಬಣ...., ಆ  ದಿನ  ಪವಿಗೆ  ಮರಿಯಲಾಗದ  ದಿನವಾಯಿತು...,




******************************ದಿ ಎಂಡ್*********************

Saturday, March 26, 2011

ಕಥೆ:-ಸ್ನೇಹದ ಕಡಲಲ್ಲಿ ಮೂಡಿದ ಪ್ರೀತಿಯ ಅಲೆ-2

ಮಂಜುನ  ಮೇಲೆ  ಪವಿಗೆ  ಸ್ನೇಹಕ್ಕೂ  ಮೀರಿದ  ಭಾವನೆಯೊಂದು  ಚಿಗುರುತಿತ್ತು . ಆದರೆ  ಇವಳಿಗೆ  ಭಯ . ಅವನಲ್ಲಿ  ಈ  ಭಾವನೆಗಳಿಲ್ಲದಿದ್ದರೆ  ನನ್ನ  ಗತಿ  ಏನೆಂದು ? ಅವನೆಂದು  ಪ್ರೀತಿಯ  ವಿಷಯವಾಗಿ  ಮಾತಾಡಿದವನಲ್ಲ. ಅವನಲ್ಲಿ  ಪ್ರೀತಿಗೆ ಅಷ್ಟಾಗಿ  ಬೆಲೆ  ಇರಲಿಲ್ಲ. ಪ್ರೀತಿ  ಕೇವಲ  enjoymentಗಾಗಿ  ಇರುವುದು  ಎಂಬುದು  ಅವನ  ಹೇಳಿಕೆಯಾಗಿತ್ತು. ಅದು  ಅವನ  ಕಾರ್ಯಗಳಲ್ಲೂ  ಕಾಣಬಹುದಾಗಿತ್ತು. ಸುಂದರ  ಹುಡುಗಿಯರ  ಜೊತೆ  ಹಾಸ್ಯ  ಮಾಡಿಕೊಂಡು  ಮಾತಾಡೋದು, flirt  ಮಾಡೋದು  ಕೂಡ  ಅವನ  ಹವ್ಯಾಸಗಳಲ್ಲಿ  ಒಂದು  ಎಂದು  ಇವಳಿಗೆ  ತಿಳಿದಿತ್ತು . ಎಷ್ಟೇ  ಆದರೂ  ಅವನು  ನನ್ನ  ಜೊತೆ  ಯಾವದನ್ನು  ಮುಚ್ಚಿಟ್ಟಿಲ್ಲ. ಹುಡುಗಿಯರು  ಚೆನ್ನಾಗಿ  joke ಮಾಡ್ಕೊಂಡು , ತರ್ಲೆ  ಮಾಡ್ಕೊಂಡು  ಇರುವ  ಹುಡುಗರ  ಜೋತೆ  ಮಾತಾಡ್ತಾರೆ  ಹೊರತು  bore ಮಾಡಿಸೋರ  ಜೋತೆ  ಮಾತಾಡಲ್ಲ  ಅದಕ್ಕೆ  ನಾನು  ಹಾಗೆ  ಮಾಡೋದು  ಎಂದು  ತುಂಬಾ  frank ಆಗೇ  ಹೇಳ್ಕೋತ  ಇದ್ದ . ಆದರೆ   ಇವಳ   ಜೊತೆ  ಎಂದೂ  flirt ಮಾಡೋ  ಉದ್ದೇಶ  ಅವನಿಗೆ  ಇರಲಿಲ್ಲ . ಅವನು  ಬೇರೆ  ಅವರ  ಜೊತೆ  ಬೇರೆ  ಥರ  ಇದ್ದರೂ  ನನ್ನ  ಜೊತೆ ಅವನು  ಅವನಾಗೇ  ಇರುತ್ತಾನೆ; ಇದು  ಅವಳಿಗೆ  ಇಡಿಸಿತ್ತು. ಇಷ್ಟು  ಪ್ರೀತಿ ಇದ್ದರೂ ಪವಿ  ಅವನಲ್ಲಿ  ತನ್ನ  ಪ್ರೀತಿಯನ್ನು   ತಿಳಿಸಿರಲಿಲ್ಲ . ಆದರೆ  ಹೃದಯದಲ್ಲಿ  ಆ  ಒಲವಿನ  ಚಿಗುರಿಗೆ  ನೀರೆರೆಯುತ್ತ ಪೋಷಿಸುತಿದ್ದಳು.

ಆದರೆ  ವಿಧಿಯಾಟವೇ  ಬೇರೆ . ಯಾವುದೊ  ಒಂದು  ಸಣ್ಣ  ವಿಷಯಕ್ಕಾಗಿ  ಮುನಿಸಾಗಿತ್ತು.  ಮುನಿಸು  ಜಗಳವಾಗಿ  ಅವರ  ಮಧ್ಯೆ  contact ತಪ್ಪಿ  ಹೋಯಿತು. ಒಬ್ಬರನ್ನೊಬ್ಬರು  ನೋಡಿದರು  ಯಾರೋ  ಅಪರಿಚಿತರೆನ್ನುವ  ಹಾಗೆ  ಇರುತಿದ್ದರು . ಆದರೆ  ಪವಿಗೆ  ಮನಸ್ಸಲ್ಲೇ  ಬೇಗೆ . ತನ್ನ  ಪ್ರೀತಿಯನ್ನು  ಬಚ್ಚಿಡಲು  ಆಗದೆ , ಹೇಳಲು  ಆಗದೆ  ಕಡಲ  ದಡದ  ಮೇಲೆ  ಬಿದ್ದ  ಮೀನಿನ  ಹಾಗೆ  ಚಡಪಡಿಸುತಿದ್ದಳು . ಎಷ್ಟೋ  ಸರತಿ  ಅವನ  ಜೊತೆ  ಮಾತಾಡಲು , ಕ್ಷಮೆಯಾಚಲು  ಪ್ರಯತ್ನಿಸಿದಳಾದರು , ಮಂಜು  ಅವಳನ್ನು  ಕಾಣುತಿದ್ದಂತೆಯೇ  ಆ  ಜಾಗವನ್ನು  ಕಾಲಿ  ಮಾಡಿಬಿಡುತಿದ್ದ. ಇವಳಲಿ  ಇದ್ದ  ಸ್ವಾಭಿಮಾನ  ಎಚ್ಚರಕೊಂಡಿತು . ಅವಳು  ಮತ್ತೆ  ಅವನನ್ನು  ತಾನಾಗಿಯೇ  ಮಾತಾಡಿಸುವುದು  ಬೇಡ  ಎಂದು  ತಿರ್ಮಾನಿಸಿದಳು . ಹಾಗೆಯೆ  ಅವಳು  ಮುಂದೆಂದು  ಅವನನ್ನು  ಮಾತನಾಡಿಸುವ  ಪ್ರಯತ್ನ  ಮಾಡಲೇ  ಇಲ್ಲ .

ಆದರೆ  ಮಂಜುವಿನ  ನೆನಪು  ಮಾತ್ರ  ಅವಳಿಗೆ  ದಿನವಿಡೀ  ಕಾಡುತಿತ್ತು . ಬದುಕಿನಲ್ಲಿ  ಅಮ್ಮನನ್ನು  ಬಿಟ್ಟು  ಹೆಚ್ಚಾಗಿ  ಮಾತನಾಡಿರುವುದು , ಕಾಲ  ಕಳೆದಿರುವುದು  ಅವನ  ಜೊತೆಗೆಯೇ . ಅವನನ್ನು  ಮರೆಯಲು  ಅವಳಿಗೆ  ಸಾಧ್ಯವೇ  ಆಗುತಿರಲಿಲ್ಲ . ಅವನ  ನೆನಪೇ  ಅವಳಿಗೆ  ಬದುಕಾಗಿ  ಹೋಗಿತು . ತಾನು  ಎಲ್ಲಿಯು  ಆಸಕ್ತಿ  ತೋರಿಸುತಿರಲಿಲ್ಲ . ಓದು  ಕೂಡ  ಕೊಂಚ  ಕಡಿಮೆಯಾಯಿತು . ಮೊದಲನೇ  ವರ್ಷದಲಿ  ತೆಗೆದಷ್ಟು  ಉತ್ತಮ  ಪಲಿತಾಂಶವಿರಲಿಲ್ಲ . ಒಬ್ಬಳೇ  ಸುಮ್ನೆ  ಕೂತುಬಿಡುತಿದ್ದಳು . ಒಮ್ಮೊಮ್ಮೆ  depress ಆಗುತಿದ್ದಳು . ಒಬ್ಬಳೇ  ರೂಮ್ನಲ್ಲಿ  ಕೂತು  ಜೋರಾಗಿ  ಅಳುತಿದ್ದಳು .

ಬಸ್  suddenಆಗಿ  ಬ್ರೇಕ್  ಹಾಕಿತು . ಮುಂದೆ  ನೋಡಿದರೆ  ದೊಡ್ಡ  ಜಾಮ್!!! ಯಾವುದೊ  ಒಂದು  ದೊಡ್ಡ  ಮರ  ಬಿದ್ದು  ಹೋಗಿತ್ತು . ಅದನ್ನು  ಸರಿಸಲು  ಇನ್ನು  ಸಮಯ  ಹಿಡಿಯುತ್ತದೆ  ಎಂದು  ಹೇಳಿದರು . ಸುತ್ತ  ಹಸಿರು, ಸೋನೆ  ಮಳೆ, ಮೋಡದ  ಮರೆಯಿಂದ  ಇಣುಕಿ  ನೋಡುವ  ಸೂರ್ಯ, ಹಕ್ಕಿಗಳ  ಇಂಚರ..., ಇಷ್ಟು  ಸಾಕಲ್ಲವೇ  ಸಮಯ  ಕಳೆಯಲು? ಪವಿಗೂ  ತನ್ನ  ಮನಸ್ಸು  relax ಆಗಬೇಕು  ಎಂದು  ಅನಿಸಿತು . ಆದ  ಕರಣ  ಬಸ್ಸಿಂದ  ಕೆಳಗಿಳಿದಳು . ಸುತ್ತ  ಮುತ್ತ  ಕಣ್ಣಾಯಿಸಿ  ಪ್ರಕೃತಿಯ  ಸೌಂದರ್ಯವನ್ನು  ಸವಿಯುತಿದ್ದಳು . ತನ್ನ  ಪ್ರಿಯತಮನ  ಬೆರಳುಗಳ  ಜೊತೆ  ತನ್ನ  ಬೆರಳುಗಳ  ಬೆಸೆದು  ಹೆಗಲ  ಮೇಲೆ  ತಲೆ  ಇಟ್ಟು  ನಡೆಯುತಿದ್ದ  ಹುಡುಗಿಯರನ್ನು  ಕಂಡು  ಅವಳ  ಹೊಟ್ಟೆಯಲ್ಲಿ  ಹುಳಿ  ಹಿಂಡಿದ  ಹಾಗೆ  ಅನಿಸಿತು . ನಾನು  ಕೂಡ  ಹೀಗೆ  ಮಂಜು  ಜೊತೆ  ಹೋಗುತಿದ್ದಾರೆ  ಎಷ್ಟು  ಚೆನ್ನ  ಎಂದು  ಅನಿಸಿತು . ಹೌದು . ಆ  climate ಹಾಗಿತ್ತು . ಮಳೆ, ತಂಪಾದ  ಗಾಳಿ, ಹಕ್ಕಿ  ಹಾಡು, ಒಂಟಿತನ  can make any girl to sing “ನನಗು  ಒಬ್ಬ  ಗೆಳೆಯ  ಬೇಕು”


ಇಷ್ಟರ  ನಡುವೆ  ಆ  ಗುಡ್ಡ  ಪ್ರದೇಶದಲ್ಲಿ  network ಸಿಕ್ಕಿದ್ದು  ಅದೃಷ್ಟ  ಎಂದರೆ  ತಪ್ಪಾಗಲಾರದು . Network ಸಿಕ್ಕಿದ್ದು  ಹಾಗೆ  ಒಂಟಿ  ಅಂತ  ಅನಿಸುತಿದ್ದರಿಂದ  ಪವಿ  ತನ್ನ  ಬೆಸ್ಟ್  ಫ್ರೆಂಡ್  ದೀಪಾಗೆ  ಕಾಲ್  ಮಾಡಿದಳು.
“ಹೇಗಿದ್ದೀಯ??ಊಟ  ಆಯ್ತಾ?”
“ಯಾವಾಗಲೇ  ಹೋದೆ? ನಂಗೆ  ತಿಳಿಸಲೇ  ಇಲ್ಲ?ಮನೆ  ತಲುಪಿದ್ಯ?”
“ಇನ್ನ  ಇಲ್ವೆ  ಮರಬಿದ್ದು  ಹೋಗಿದೆ  ಇನ್ನ  ಟೈಮ್  ಆಗುತ್ತೆ”
ಹೀಗೆ  ಮಾತು  ಮುಂದುವರೆದಿತ್ತು . ದೀಪ  ಏನೋ  ಮರೆತದನು  ನೆನಪಿಸಿಕೊಂಡು....,

“ಲೇ  ಯಾರೇ  ಮಂಜು ? ನಿನ್ನ  ಕೇಳ್ತಾ  ಇದ್ದ . ಇವತ್ತು  ಬೆಳಗೆ  ಸುಮಾರ್  ೧೧ ಗಂಟೆಗೆ  ನಿನ್ನ  ನೋಡೋಣ  ಅಂತ  ನಿನ್  ರೂಂ  ಹತ್ರ  ಬಂದಿದ್ದೆ . ನಿಮ್  owner ಹೇಳಿದ್ರು  ನೀನು  ಊರಿಗೆ  ಹೋಗಿದ್ದೀಯ  ಅಂತ . ಈಚೆ  ಬಂದಾಗ  ಅವನು  ಅಲ್ಲೇ  ಇದ್ದ . ನಿಮ್  owner ಮಾತು  ಕೆಳಿಸ್ಕೊಂಡಿದ್ದ  ಅನಿಸುತ್ತೆ , ಪವಿ  ಊರಿಗೆ  ಹೋಗಿದಾಳ ? ಯಾವಾಗ  ಬರ್ತಾಳೆ ? ಹೇಗಿದ್ದಾಳೆ? sudden ಆಗಿ  ಯಾಕ್  ಹೋದಳು? Exams ಎಲ್ಲ  ಆಯ್ತಾ ? ಹಾಗೆ  ಹೀಗೆ  ಅಂತ  ಪ್ರಶ್ನೆ  ಮೇಲೆ  ಪ್ರಶ್ನೆ  ಕೇಳ್ತಿದ್ದ .  ನಾನು, ನಂಗು  ಗೊತ್ತಿಲ್ಲ  inform ಮಾಡಿರಲಿಲ್ಲ , ಈಗಲೇ ನನಗು  ಗೊತ್ತಾಗಿದ್ದು  ಅಂತ  ಹೇಳ್ದೆ .ಆಮೇಲೆ  ಅವನು  ನಿಂಗೆ  ಕಾಲ್  ಮಾಡ್ತಿದ್ದ  ಅನಿಸುತ್ತೆ, ಫೋನ್  ಮಾಡ್ತಿದೀನಿ  ಸಿಗ್ತಾ  ಇಲ್ಲ  ಅಂತ  ಹೇಳ್ತಿದ್ನೆ” ದೀಪ ಒಂದೇ  ಸಮನೆ  ಹೇಳಿದಳು.
ಪವಿಗೆ  ಆಶ್ಚರ್ಯ . ಅರಿವಿಲ್ಲದೆ  ತುಟಿಯ  ಮೇಲೆ  ಹುವಿನಂತಹ  ನಗೆ .
“ಯಾರೇ  ಅವನು?ಚೆನ್ನಾಗಿ  ಮಾತಾಡ್ತಾನೆ!”
ಹ್ಮ್   ಎಲ್ಲಾ  ಹುಡ್ಗಿರು  ಇದ್ನೆ  ಹೇಳೋದು  ಅವನಿಗೆ!!!
“ನನ್  ಫ್ರೆಂಡ್  ಕಣೆ . ಮಂಜು  ಅಂತ”
“ನನಗು  ಗೊತ್ತಮ್ಮ  ಅವನ  ಹೆಸರು . ನಾನ್  ಕೇಳಿದ್ದು  ಏನಾದ್ರು  special ಇದಿಯ  ಅಂತ . ಅವನು  ಆ  ರೀತಿ  ಕೇಳ್ತಾ  ಇದ್ದಿದ್ದನ್ನ  ನೋಡಿದ್ರೆ  something ಇದೆ  ಅಂತ  ಅನಿಸುತ್ತೆ!?”

“ಇಲ್ವೆ . ಹಾಗೇನು   ಇಲ್ಲ ”
“ಇದನ್ನ  ನಾನು  ನಂಬಬೇಕ? ಹಾಗೇನು  ಇಲ್ಲ  ಅಂತ  ನಿನೆಳೋ  ರೀತಿಲೇ  ಗೊತ್ತಾಗುತ್ತೆ  ಬಿಡು”
ಪವಿ  ಮುಗುಳ್ನಕ್ಕಳಷ್ಟೇ.
“ಲೇ  don’t mind  ಕೆಲಸ  ಇದೆ . ಸ್ವಲ್ಪ  busy ಇದೀನಿ  bye”
“OK carry on. Bye take care”

ದೀಪ  ಹೇಳಿದನ್ನು  ಕೇಳಿ  ಪವಿಗೆ  ಆ  ಚಂದ್ರನೇ  ಕೈಗೆ  ಸಿಕ್ಕಂತಾಯಿತು . ಅವಳ  ಮನಸ್ಸು  ರೆಕ್ಕೆ  ಕೂಡಿ  ಸಂತೋಷದಲ್ಲಿ  ಹಾರಿ  ಹೋಯಿತು . ಕಾಲ್ಗಳು  ನಿಂತಲ್ಲಿ  ನಿಲ್ಲು  ಅಂದರೆ  ಕೇಳುತಿರಲಿಲ್ಲ . ನೋವೆಲ್ಲ  ತೊರೆದು  ಕುಣಿಯಬೇಕು  ಎಂದು  ಅನಿಸುತಿತ್ತು . ಅಷ್ಟರಲ್ಲಿ  ಮರವನ್ನು  ಸರಿಸಲಾಗಿತ್ತು . ಒಂದೊಂದೇ  ಗಾಡಿಗಳು  ಸರಿಯುತಿದ್ದವು . ಪವಿ  ಹೋಗಿ  ಬಸ್  ಒಳಗೆ  ಕೂತಳು . ಈಗ  ಮೋರೆಯಲ್ಲಿ  ಏನೋ  ಚೈತನ್ಯ . ಯಾವುದೊ  ಸಂತೋಷ . ಮನಸ್ಸೊಳಗೆ  ಬೆಚ್ಚಗೆ  ಮುಸುಕು  ಹಾಕಿಕೊಂಡು  ಮಲಗಿದ್ದ  ನಗು  ಎದ್ದಿತ್ತು.

ಮಂಜು  ಏಕೆ  ನನ್  ರೂಂ  ಹತ್ರ  ಬಂದಿದ್ದ ? ಅಷ್ಟು  ಕೇರ್  ಇಂದ  ದೀಪ  ಹತ್ರ  ನನ್  ಬಗ್ಗೆ  ಯಾಕೆ  ಕೇಳ್ದ? ನಂಗೆ  ಅಷ್ಟು  ಸರ್ತಿ  ಯಾಕ್  ಕಾಲ್  ಮಾಡಿದ್ದ ? ಇಷ್ಟು  ದಿವಸಗಳಾದಮೇಲೆ  ನನ್  ಜೊತೆ  ಮಾತಾಡಬೇಕು  ಅಂತ  ಯಾಕೆ  ಅನಿಸ್ತು? ಅವನಿಗೂ  ನನ್  ಮೇಲೆ  ಪ್ರೀತಿ  ಏನಾದ್ರೂ? ಹೀಗೆ  ಅವಳ  ಮನಸ್ಸಲ್ಲಿ  ಪ್ರಶ್ನೆಗಳು  ಮೂಡುತಿದ್ದವು . ಇನ್ನೊಂದು  ಕಡೆ  ಅದೇ  ಮನಸ್ಸು  negativeಆಗಿ  ಯೋಚಿಸುತಿತ್ತು . ಹೀಗೆ  ಜಗಳ  ಆದ್ಮೇಲೆ  ಕೆಲವೊಂದು  ಸಲ  ಅವನೇ  ಬಂದು  ಮಾತಾಡಿಸ್ತಾನೆ. ಇಲ್ಲ  ಯಾವ್ದಾದ್ರು  ಹೆಲ್ಪ್  ಬೇಕಂದ್ರೆ  ಬರ್ತಾನೆ . ಪ್ರೀತಿ  ಗೀತಿ  ಏನು  ಇರಲ್ಲ  ಅಂತ ಹೇಳ್ತಾ ಇತ್ತು . ಅವನು  ಕೇವಲ  ಹೆಲ್ಪ್ಗೋಸ್ಕರ  ಮಾತಾಡಿಸಕ್ಕೆ  ಬಂದಿದ್ನ  ಅಂತ  ಯೋಚಿಸುತ್ತ  ಬೇಸರವಾಯ್ತು  ಅವಳಿಗೆ . ಆದರು  ಹೇಗೋ  ಅವನೇ  ನನ್ನ  ಹುಡ್ಕೊಂಡು  ಬಂದಿದ್ನಲ್ಲ  ಅನ್ನೋ  ಖುಷಿ.

ಹೀಗೆ  ಪವಿ  ಆ  ಖುಷಿ  ಇನ್ದಲೋ , ಸಮಾಧಾನದಿಂದಲೋ  ಮನೆಗೆ  ಒಳ್ಳೆ  mood ಇಂದಾನೆ  ಹೋದಳು . ಸಂಜೆ  5-5:30 ಸಮಯ . ಫ್ರೆಶ್  ಆದಳು. ಅವರದು  joint family. ಸುಮಾರು  ೬ ಗಂಟೆಗೆ  ಎಲ್ಲರ  ಜೊತೆ  ಹರಟುತ್ತ  ಕುಳಿತಳು . ಎಲ್ಲರಿಗು  ಒಂದೇ  ಆಶ್ಚರ್ಯ  ‘ಏನಪ್ಪಾ  ನಮ್  ಪವಿ  ಇಷ್ಟೊಂದು  ಮಾತಾಡ್ತಿದಾಳೆ, ಇಷ್ಟೊತ್ತು  ಎಲ್ಲರ  ಜೊತೆ  ಹಾಸ್ಯ  ಮಾಡ್ಕೊಂಡು  ಹರಟೆ  ಹೊಡಿತಾ  ಇದಾಳೆ ’ ಅಂತ . ಏನೇ  ಹೀಗೆ  ಅಂತ  ಕೇಳಿದ್ದಕ್ಕೆ, ಇನ್ಮೇಲೆ  ಹೀಗೆ  ಅಂತ  ಹೇಳಿ  ತುಂಟ  ನಗೆ  ಬಿರ್ತಾಳೆ. ‘ಏನೋ  ಹೀಗೆ  ಇರು. ಚೆನ್ನಾಗಿದೆ. ನಿನ್  ಈ  ಚೇಂಜ್ ಗೆ  ಕಾರಣ  ಆಗಿರೋರ್ಗೆ  ಒಂದು  ದೊಡ್ಡ  ಥ್ಯಾಂಕ್ಸ್’ ಅವಳ  cousins  ಎಲ್ಲಾ  ಒಟ್ಟಾಗಿ  ಹೇಳ್ತಾರೆ . ಮಾತಾಡ್ತಾ  ಮಾತಾಡ್ತಾ  ಯಾರಗೂ  ಟೈಮ್  ಆಗಿದ್ದೆ  ಗೊತ್ತಾಗ್ಲಿಲ್ಲ . ರಾತ್ರಿ  ಸುಮಾರು  ೧೦:೩೦ಕ್ಕೆ  ಊಟ  ಮಾಡಿ  ಮತ್ತೆ  ಹರಟೆ  ಶುರು!! ಆಮೇಲೆ  ಮಧ್ಯ  ರಾತ್ರಿ  ೧ಗಂಟೆಗೆ  ನಿದ್ದೆ!!

ಇತ್ತ  ಮೈಸೂರಿನಲ್ಲಿ  ಮಂಜು  ಪವಿಗೆ  ಕಾಲ್  ಮಾಡ್ತಾನೆ  ಇದ್ದಾನೆ . ಆದ್ರೆ  no use . ಅವಳಿದಿದ್ದು  ಒಂದು  ಸಣ್ಣ  ಊರಲ್ಲಿ . ನೆಟ್ವರ್ಕ್  ಸಿಗೋದು  ತುಂಬಾ  ಕಷ್ಟವಾಗಿತ್ತು.


ಮರು ದಿನ ಪವಿ  ತನ್ನ  ಬಾಲ್ಯದಲ್ಲಿ  ಓದಿದ್ದ  ಶಾಲೆಗೆ  ಒಮ್ಮೆ  ಬೇಟಿ  ಕೊಟ್ಟಿ , ಅಲ್ಲಿ  ಮಕ್ಕಳ  ಜೊತೆ  ತಾನು  ಮುಗುವಾಗಿ  ಆಟವಾಡಿದಳು . ಪಕ್ಕದ  ತೋಟದ  ಮನೆಯ  ಕವಿತಾ , ಗೌಡ್ರು  ಮಗ  ಸತೀಶ , ಹಳೆ  ಬಿದಿ  ಶಿಲ್ಪ , ಮೀಸೆ  ತಮ್ಮಯ್ಯನ  ಮಗ  ಪುಟ್ಟು  ಎಲ್ಲಾ  ಸೆರೆ  ಮದುವೆ  ಆಟ  ಆಡಿದ್ದು  ನೆನೆಪಿಗೆ  ಬಂತು . ಅವಳ  ಗೆಳತಿಯರಿಗೆಲ್ಲ  ಆಗಲೇ  ಮದುವೆ  ಆಗಿ  ಗಂಡರ  ಮನೆಗೆ  ಹೋಗಿದ್ದರು . ಸಿಕ್ಕಿದ್ದು  ಕೇವಲ  ಪುಟ್ಟು  ಒಬ್ಬನೇ . ಅವನ  ಜೊತೆ  ಒಂದಿಷ್ಟೊತ್ತು  ತಮ್ಮ  ಬಾಲ್ಯದ  ಬಗ್ಗೆ  ಮಾತಾಡಿದಳು .

ಹೀಗೆ  ಪವಿಗೆ  ತನ್ನ  ಸಂಭಂದಿಕರ  ಜೊತೆ , ಸ್ನೇಹಿತರ  ಜೊತೆ  ಕಾಲ  ಕಳೆದು  ಹೇಗೆ  ನಾಲ್ಕು  ದಿನಗಳು  ಕಳಿಯಿತು  ಅನ್ನೋದೇ   ತಿಳಿಲಿಲ್ಲ .

ಏನೋ  ಮೈಸೂರು , ಮೈಸೂರಿನ  ಫ್ರೆಂಡ್ಸ್  ಎಲ್ಲಾ  ಕೈ  ಬೀಸಿ ಕರಿತಿದ್ದಾರೆನೋ  ಅನ್ನೋ  ಹಾಗೆ  ಭಾಸವಾಯಿತು. ಅಂತು  ಮೈಸೂರಿಗೆ  ಹೊರಡೋ  ದಿನ  ಬಂದೆ  ಬಿಡ್ತು . ಅವಳಮ್ಮ  ಅವಳಿಗೆ  ಸಂಡಿಗೆ , ಹಪ್ಪಳ , ಉಪ್ಪಿನ  ಕಾಯಿ  ಅದು  ಇದು, ಇದು  ಅದು  ಅಂತ  ಪ್ಯಾಕ್  ಮಾಡಿ  ಕೊಟ್ರು . ಅವಳ  cousins  ಎಲ್ಲಾ  'ಮುಂದಿನ  ಸರ್ತಿ  ಬರುವಾಗಲೂ  ಇದೆ  ರೀತಿ  ಇರೆ  ಮಾರಾಯ್ತಿ'  ಅಂತ  ಹೇಳಿದ್ರು.

ಬೆಳಗೆ  ೯ಕ್ಕೆ  ಬಸ್ಸೇರಿದಳು . ಹೋದ  ತಕ್ಷಣ  ಮಂಜುವನ್ನೇ  ಕಾಣಬಹುದೇನೋ, ಅವನು  ನನ್ನ  ರೂಮ್ನ  ಹತ್ರ  ಕಾಯುತ್ತ  ಇರುತಾನೇನೋ . ಹೀಗೆ  ಉಹೆಗಳ  ಸುರಿಮಳೆ!! ಗುಡ್ಡ  ಪ್ರದೇಶಗಳ  ಬಿಟ್ಟು  ಪಟ್ಟನಗಳ  ಕಡೆ  ಮುಖ  ಮಾಡಿತು  ಬಸ್. ಆಗ  ದೊರೆಯಿತು  ನೋಡಿ  ‘ನೆಟ್ವರ್ಕ್’!!

ಒಂದೆರಡು  ನಿಮಿಷಗಳಾದ  ಮೇಲೆ  ಅವಳ  ಮೊಬೈಲ್ಗೆ ಒಂದು  ಮೆಸೇಜ್  ಬಂದಿತು . ಮೆಸೇಜ್  ಟ್ಯೂನ್  ಕೇಳಿಸಿದಾಗ  ಮೊಬೈಲ್  ಅನ್ನು  ತನ್ನ  wallet ಇಂದ  ತೆಗೆದು  ಓದಲು  ಮುಂದಾದಳು . ಅವಳು  ಅಂದುಕೊಂಡ  ಹಾಗೆ  ಅದು  ಮಂಜು  ಕಳಿಸಿದ  ಮೆಸೇಜ್  ಆಗಿತ್ತು . “missing you. ನೆಟ್ವರ್ಕ್  ಸಿಕ್ಕಿದ  ತಕ್ಷಣ  ಕಾಲ್  ಮಾಡು” ಅಂತ  ಇತ್ತು . ಕಾಲ್  ಏನೋ  ಮಾಡಬೇಕು  ಅಂತ  ಅನಿಸ್ತು  ಅವಳಿಗೆ,  ಆದರೆ  ಅವನೇ  ಮಾಡ್ಲಿ  ಇಷ್ಟೊಂದು  ಸತಾಯಿಸಿದಾನಲ್ಲ  ಅಂತ  ಹೇಳ್ಕೊಂಡು  ಸುಮ್ಮನಾದಳು . ಹೀಗೆ  ಮಾಡಲೋ  ಬೇಡವೋ  ಅಂತ  ಇರುವಾಗ  ಮಂಜುಯಿಂದ  ಕಾಲ್  ಬಂತು . ನೋಡಿದ  ಇವಳಿಗೆ  ಸಂತೋಷ  ಎಲ್ಲೇ  ಮೀರಿತ್ತು .

“ಹೇಗಿದ್ದಿಯೇ? ಎಷ್ಟು  ದಿವಸ  ಆಯಿತು  ಮಾತಾಡಿ? ಏನು?ಊರಿಗೆ  ಹೋಗಿಬಿಟ್ಟಿದಿಯ? ಅಲ್ವೇ  ಇಷ್ಟು  ದಿವ್ಸ  ನನ್ನ  ಜೊತೆ  ಮಾತಾಡಬೇಕು  ಅಂತ  ಅನಿಸಲೇ  ಇಲ್ವಾ  ನಿಂಗೆ??
ಪವಿ  ಏನು  ಮಾತಾಡಲಿಲ್ಲ
“ಹಲೋ.….ಮಾತಾಡೆ”
“ಇಷ್ಟೊಂದು  ಪ್ರಶ್ನೆ  ಕೇಳಿದ್ರೆ  ಯಾವುದಕ್ಕೆ  ಅಂತ  ಉತ್ತರ  ಕೊಡಲಿ?”ಹುಸಿ  ಕೋಪದಿಂದ.
“ಹ್ಮ್ ಎಷ್ಟೋ  ದಿವಸ  ಆಯ್ತಲ್ಲ  ಮಾತಾಡಿ  ಅದಕ್ಕೆ  ಇಷ್ಟೊಂದ್  ಪ್ರಶ್ನೆಗಳು:) ಸೊ  ಹೇಗಿದಿಯೇ?
“ಚೆನ್ನಗಿದಿನೋ. ನೀನು?”
“ಚೆನ್ನಾಗಿಲ್ವೆ...ಏನು  ಸರಿ  ಇಲ್ಲ . ನೀನಿಲ್ದೆ  ಎಲ್ಲಾ  ಖಾಲಿ-ಖಾಲಿ. ಬೇಗ  ಬಂದುಬಿಡೆ  ಮಾತಾಡೋಣ”
“ಹ್ಮ್  ಯಾಕೋ  ಏನು  ಸರಿ  ಇಲ್ಲ? ಆರೋಗ್ಯವಾಗಿ ಇದ್ದೀಯ ತಾನೇ? I’m on my way ಕಣೋ . ಇನ್ನೊಂದು  ಗಂಟೇಲಿ  ಅಲ್ಲಿರುತ್ತೇನೆ"
“ಹ್ಮ್  ಬೇಗ  ಬಾರೆ . ನಿನ್ನಿಂದ  ಒಂದ್ ಹೆಲ್ಪ್  ಬೇಕು .
ಮನಸ್ಸು  ಹೇಳ್ದಂಗೆ  ಇವನು  ಕೇವಲ  ಹೆಲ್ಪ್ಗಾಗಿ  ನನ್ನ  ಮಾತಾಡಿಸುತ್ತ  ಇದಾನೆ !? ಬೇರೆ  ಯಾವ  ಭಾವನೆನು  ಇಲ್ವಾ  ಇವನಿಗೆ??ಛೆ! ಆದ್ರೆ  ನನ್ನಿಂದ  ಏನ್  ಹೆಲ್ಪ್  ಬೇಕು  ಇವನಿಗೆ  ಎಂದುಕೊಳ್ಳುತ್ತ...,
“ಏನ್  ಹೆಲ್ಪ್  ಬೇಕೋ??”
“ಬಾ  ಹೇಳ್ತೀನಿ”
“ಏನು  ಅಂತ  ಹೇಳು . ಹೇಗೆ  ಹೆಲ್ಪ್  ಮಾಡೋದು  ಅಂತ  ಥಿಂಕ್  ಮಾಡ್ತಿರ್ತೀನಿ ;)”
“ಹ್ಮ್ಮ್ಮ್ …I’m in love ಕಣೆ . ಆ  ಹುಡುಗಿ  ಸ್ವಲ್ಪ  ನಿನ್  ಥರ . ಸೊ  ಹೇಗೆ  ಅವಳಿಗೆ  ಪ್ರೊಪೋಸ್  ಮಾಡಿದ್ರೆ  ಒಪ್ಕೊತಾಳೆ  ಅನ್ನೋದರ ಬಗ್ಗೆ  ನಿನ್  ಹತ್ರ  ಐಡಿಯಾ  ಕೇಳೋಣ  ಅಂತ”

ಪವಿ  ಮನಸ್ಸಿನಲ್ಲಿ  ಅಲೆಗಳ  ಆರ್ಭಟ . ಮಿಂಚು  ಸಿಡಿಲಿನ  ಒಡನಾಟ . ಏನೋ  ಸಂಕಟ . ಆ  ಹುಡುಗಿ  ನಿನ್  ಥರ  ಅನ್ನೋ  ಬದ್ಲು  ನೀನೆ  ಅಂತ  ಹೇಳಿದಿದ್ರೆ? ಕಣ್ಣಂಚು  ಒದ್ದೆಯಾಯಿತು . ಗಂಟಲು  ಒಣಗಿತು . ಮಾತು  ಹೊರಬರದಂತಾಯಿತು.

“ಹಲೋ.. ಏನೇ  ಶಾಕ್  ಆದ್ಯ ? ನಂಗು  ಇದು  ಪ್ರೀತಿ  ಅಂತ  ಗೊತ್ತಾದಾಗ  ಫುಲ್  ಶಾಕ್!!! ಅದರಲ್ಲೂ  ಅವಳನ್ನ  ಅಂತ  ಗೊತ್ತಾದಾಗ  ಡಬಲ್  ಶಾಕ್. ಅವಳಿಗೂ  ಪ್ರೀತಿ  ಇರಲಿ  ಅಂತ  ಬೇಡ್ಕೊತ  ಇದಿನೆ. ನೀನು  ಬೇಡ್ಕೋ... ಮತ್ತೆ  ಹೇಗೆ  ಪ್ರೊಪೋಸ್  ಮಾಡ್ಲಿ  ಅಂತ ಹೇಳು ಓಕೆ?”
ಪವಿಗೆ  ಏನು  ಹೇಳಬೇಕು  ಅಂತ  ತಿಳಿಯಲಿಲ್ಲ .
“ಹ್ಮ್  ಸರಿ  will get you later bye”
“ಹ್ಮ್  OK take care. ಬೇಗ  ಬಂದ್ಬಿಡು  with nice idea”
ಅತ್ತ  ಮಂಜು  ಸಡಗರದ  ಸಾಗರದಲ್ಲಿ  ತೆಲಾಡುತಿದ್ದ. ಇತ್ತ  ಪವಿ  ದುಃಖದ  ಕಡಲಲಿ  ಮುಳುಗುತಿದ್ದಳು..


ಮುಂದುವರೆಯುತ್ತದೆ....