Thursday, May 12, 2011

ತುಂಬಿಕೊಂಡಿರುವೆನು ನಿನ್ನನೆ ಪ್ರತಿ ಕಣದಲು.


ಮಾಮರದಲಿ ಕೋಗಿಲೆ ಇಲ್ಲ
ಹೂದೋಟದಲಿ ಹೂಗಳರಳಿಲ್ಲ
ಬಾನಲ್ಲಿ ಹುಣ್ಣಿಮೆಯ ಚಂದಿರನಿಲ್ಲ
ಸನಿಹದಲಿ ತಿಳಿ ತಂಗಾಳಿಯ ಸುಳಿವಿಲ್ಲ.

ಚೈತ್ರ ಮಾಸ ಮುಗಿಯಿತು ನನ್ನ ಲೋಕದಲಿ
ನೀ ನನ್ನ ಅಗಲಿದಾಗಿನಿಂದ
ಬರಿಯ ಶೋಕವೆ, ಬರಿಯ ಕಹಿ ನೆನಪುಗಳೆ ನನ್ನ ಪಾಲಿಗಿಲ್ಲಿ
ನೀ ನನ್ನ ಅಗಲಿದಾಗಿನಿಂದ.

ಎಂದು ಬಯಸದ ವರ
ಎಂದೂ ಕಾಣದ ಕನಸು
ನಿನ್ನ ಈ ಅಗಲಿಕೆಯು
ಮನವು ರೋಧಿಸುತಿದೆ ಪ್ರತಿ ಕ್ಷಣವು
ತುಂಬಿಕೊಂಡಿರುವೆನು ನಿನ್ನನೆ ಪ್ರತಿ ಕಣದಲು.

ಸಾಕು ಈ ನರಕ ಯಾತನೆ ನನಗೆ
ದಿನವು ಸಾಯುತಿರುವೆನು ಈ ಮೌನಕ್ಕೆ
ಕೇಳಿಕೊಳ್ಳುವೆನು ಕಾಲೂರಿ ನಿನಗೆ
ಮತ್ತೆ ಬಂದು ನಾಂದಿ ಹಾಡು ಪ್ರೀತಿಗೆ.



4 comments: