Saturday, October 1, 2011

ಶೃತಿಯ ಮರೆತಿಹನು, ಒಲವ ಮರೆತಿಹನು


ಪ್ರೀತಿಯ ಮೆರವಣಿಗೆ ಮುಗಿದ ಮೇಲೆ
ಖಾಲಿ ಖಾಲಿಯು ಈ ಹಾದಿಯು
ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
ಮಸಣದ ಗೂಬೆಯ ಕೂಗೇ ಎಲ್ಲವು. . !

ಒಲವಿಲ್ಲದ ನಾನು
ಶಪಿಸುತ್ತಿರುವೆನು ಈ ಘಳಿಗೆ
ನಲ್ಲನಾಶ್ರಯದಲಿ ಲೋಕ ಮರೆತಿರುವ
ನಲ್ಲೆಯ ಕಂಡು ಒಳಗೇ. . .

ಅನುರಾಗದ ಸ್ವರ ಮೂಡದ
ಮುರಳಿಯ ಹಿಡಿದಿಹನು ನಲ್ಲ
ಶೃತಿಯ ಮರೆತಿಹನು, ಒಲವ ಮರೆತಿಹನು
ಉಸಿರು ಬಾರದು ಹೊರಗೆ,
ನನ್ನ ಮೇಲೆ ಮನಸ್ಸಿಲ್ಲದಾಗಿ ಅವನಿಗೆ. . !

20 comments:

  1. ನೊಂದ ಭಾವನೆಗಳು ಕವನದಲ್ಲಿ ಚೆನ್ನಾಗಿ ಮೂಡಿ ಬಂದಿದೆ.ನನ್ನ ಬ್ಲಾಗಿಗೆ ಒಮ್ಮೆ ಭೇಟಿ ಕೊಡಿ.ನಮಸ್ಕಾರ.

    ReplyDelete
  2. ಮನನೊಂದಾಗ ಕೊಳಲಿನದು ಕೂಡ ಅಳೋ ಸ್ವರವೇ.
    ಚೆನ್ನಾಗಿದೆ

    ReplyDelete
  3. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ...
    ತುಂಬ ಚೆನ್ನಾಗಿದೆ ಸಿಸ್ಟರ‍್...
    ಹೀಗೆ ಸಾಗಲಿ ಬರವಣಿಗೆಯ ಪಯಣ...
    ಶುಭದಿನ...

    ReplyDelete
  4. ನಮಸ್ತೆ,
    ತಮ್ಮ ಕವನ ಓದಿದೆ ಚೆನಾಗಿದೆ..

    "ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
    ಮಸಣದ ಗೂಬೆಯ ಕೂಗೇ ಎಲ್ಲವು. . !"

    ಈ ಸಾಲು ,ಹಾಗು ಅದರೊಳಗಿನ ಕಲ್ಪನೆ ಇಸ್ಟವಾಯ್ತು...ಏಕೆಂದರೆ ಸಾಮಾನ್ಯವಾಗಿ ಕೋಗಿಲೆಗೆ ವಿರುದ್ಧವಾಗಿ ಕಾಗೆಯನ್ನು ಬಳಸುವುದು ವಾಡಿಕೆ...

    ಮುಂದುವರೆಸಿ...
    ಬನ್ನಿ ನಮ್ಮನೆಗೂ,
    http://chinmaysbhat.blogspot.com/

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  5. ಸಾಲುಗಳು ಚೆನ್ನಾಗಿದೆ .

    ReplyDelete
  6. @akuva,
    thank u...welcome to my blog..:)

    ReplyDelete
  7. @dr.d.t.krishna murthy,
    thank u so much sir...hearty welcome to my blog... kandita omme baruttene nimma blog'gigu. . .

    ReplyDelete
  8. @vichalita,
    hmm correct....and thank u...

    ReplyDelete
  9. @chinmay bhat,
    thank u...nanna blog gige bandiddakke haagU comment ge dhanyavaadagalu.... kandita omme bEti kodteeni...:)

    ReplyDelete
  10. Vidya... This poem is very good....

    ReplyDelete
  11. @girish,
    thank u so much. . . :)

    ReplyDelete
  12. This comment has been removed by the author.

    ReplyDelete
  13. ಪ್ರೀತಿಯ ಮೆರವಣಿಗೆ ಮುಗಿದ ಮೇಲೆ
    ಖಾಲಿ ಖಾಲಿಯು ಈ ಹಾದಿಯು
    ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
    ಮಸಣದ ಗೂಬೆಯ ಕೂಗೇ ಎಲ್ಲವು. . ! these lines are awesome... keep going......

    ReplyDelete
  14. ಪ್ರೀತಿಯ ಮೆರವಣಿಗೆ ಮುಗಿದ ಮೇಲೆ....ಖಾಲಿ ಖಾಲಿಯು ಈ ಹಾದಿಯು...

    ಉತ್ತಮವಾದ ಸಾಲುಗಳು ಗೆಳತಿ.. ಶುಭವಾಗಲಿ..:)

    ReplyDelete
  15. ಸಾಲುಗಳು, ಶಬ್ಧಗಳು ಇನ್ನೂ ಗಟ್ಟಿಯಾಗಬೇಕು
    ಅದಕ್ಕೆ ಇನ್ನಷ್ಟು ಉತ್ತಮ ಕೃತಿಗಳನ್ನು ಓದಬೇಕು,
    ಅನುಭವಗಳನ್ನು ಪಡೆಯಬೇಕು.
    ಆಗ ಮತ್ತಷ್ಟು ಉತ್ತಮ ಬರಹಗಳು ನಿಮ್ಮಿಂದ ಬರುತ್ತವೆ...ಆಲ್ ದಿ ಬೆಸ್ಟ್

    ReplyDelete
  16. ಅನುರಾಗದ ಸ್ವರ ಮೂಡದ
    ಮುರಳಿಯ ಹಿಡಿದಿಹನು ನಲ್ಲ
    ಶೃತಿಯ ಮರೆತಿಹನು, ಒಲವ ಮರೆತಿಹನು
    ಉಸಿರು ಬಾರದು ಹೊರಗೆ,
    ನನ್ನ ಮೇಲೆ ಮನಸ್ಸಿಲ್ಲದಾಗಿ ಅವನಿಗೆ. . !

    ಒಲ್ಲದ ಇನಿಯನ ಬಗೆಗಿನ ನಿಮ್ಮ ಸಾಲುಗಳು ಸುಂದರ.

    ReplyDelete