Friday, February 4, 2011

ಅವನೋದಾಗಿನಿಂದ

ಹೋದನೋ ಇನಿಯ ಬಲುದೂರ
ಮರಳಿ ಬರುವನೇನೋ ಹತ್ತಿರ.
ತಂಗಾಳಿ ತಂಪು ಬಿಸಿ ಅನಿಸುತಿದೆ ದೇಹಕ್ಕೆ
ಸವಿ ನೋಟವು ಕ್ರುರವಾಗಿದೆ ಕಣ್ಣಿಗೆ.
ತನ್ನ ಜೊತೆಯೇ ಕೊಂಡೊಯ್ದನೋ ನಗೆಯ
ಅಂದೇ ಶುರುಮಾಡಿದನೋ ನನ್ನ ಆತ್ಮದ ಹತ್ಯೆಯ.
ಇದ್ದು ಸತ್ತಂತಿದೆ ನನ್ನ ಮನಸ್ಸು ನೋವಿನಲಿ
ಕಾಣದೆ ಇನಿಯನ ಸನಿಹದಲಿ.
ಇಲ್ಲದೆ ಅವನ ಒಲವು
ಕಾಡುತಿದೆ ಹೃದಯದಲಿ ಕ್ಷಾಮವು.
ಕಣ್ಣಿರಿನ ಮಳೆ ಸುರಿಸಿದರೂ
ಹೋಗುತ್ತಿಲ್ಲ ಮನದ ಬರಗಾಲವು.

No comments:

Post a Comment