Sunday, February 13, 2011

ಕಥೆ ಅಲ್ಲ ವ್ಯಥೆ


ಅಂದೊಂದು  ದಿನ  ರಾತ್ರಿ  11 ಗಂಟೆ. ಆಕಾಶದಲಿ  ಕಪ್ಪು, ಅರ್ಧ  ಚಂದ್ರನ ಬಿಳುಪು, ನಡುವೆ  ಅಲ್ಲೊಂದು  ಇಲ್ಲೊಂದು  ಬೆಳ್ಳಿಯ  ಚುಕ್ಕಿಗಳ  ಹೊಳಪು. ಇಡೀ  ಜಗವೇ  ಕತ್ತಲೆಯ  ಆ  ಕಪ್ಪಿಗೆ  ರಂಗೆರಚಲು  ಯೋಜನೆಗಳ  ಹಾಕುತ್ತ, ಕನಸುಗಳ  ನೆಯ್ಯುತ್ತ  ಮಲಗಿದ್ದಾರೆ. ಆದರೆ  ಇತ್ತ  ಒಬ್ಬಳು  ಹೆಣ್ಣು  ಮಗಳು, ತನ್ನ  ಪ್ರಿಯತಮನನ್ನು  ನೆನೆಯುತ್ತ, ಕಿಟಕಿ  ಆಚೆಗಿರುವ  ಚಂದ್ರನಲ್ಲಿ  ತನ್ನ  ನಲ್ಲನನ್ನು  ಚಿತ್ರಿಸುತ್ತ  ಹೊತ್ತಿನ  ಅರಿವಿಲ್ಲದೆ  ಕಣ್ತೆರೆದೆ  ಕನಸು  ಕಾಣುವಲ್ಲಿ  ನಿರತಳಗಿದ್ದಳು.

ತಿಳಿ  ತಂಗಾಳಿ  ಬೀಸಿ  ಬಂದಾಗ,  ತನ್ನ a ಮುಂಗುರುಳು  ಕಣ್ಣ  ತಾಕಿದಾಗಲೇ  ಅವಳಿಗೆ  ಆ  ಕನಸಿನಿಂದ  ಎಚ್ಚರವಾಗಿದ್ದು . ಅತ್ತ  ಬೀದಿಯ ಕಡೆ  ನೋಡುತಾಳೆ  ಆದರೆ  ಬೀದಿಯಲ್ಲಿ  ಒಂದು  ನರಪಿಲ್ಲೆಯ  ಸುಳಿವೂ  ಇರಲಿಲ್ಲ . ಅವಳು  ಬಯಸಿದ್ದು  ಅದನ್ನೇ . ಇಡೀ  ಜಗತ್ತಿನಲ್ಲಿ  ತಾನು  ಹಾಗು  ತನ್ನ  ಇನಿಯ  ಇಬ್ಬರೇ  ಇದ್ದಾರೆ  ಚೆನ್ನ  ಎಂಬುದು  ಅವಳ  ಅನಿಸಿಕೆ  ಆಗಿತ್ತು . ಅವನು  ಸನಿಹದಲ್ಲಿ  ಇಲ್ಲದಿದ್ದರೂ , ಅವನ  ನೆನಪು , ಪ್ರೀತಿ  ಅವನ  ಧನಿ  ಮಾತು  ಅವಳಲ್ಲಿ  ತುಂಬಿಕೊಂಡಿತ್ತು . ಆ  ದಿನದಂದು  ಅವಳು  ಭಾವನೆ  ಎಂಬ  ಮಹಾ  ಲೋಕವನ್ನೇ  ಸುತ್ತು  ಬರಲು  ಹೊರಡುವವಳಗಿದ್ದಳು. ಹೌದು  ಹೊರಟಳು . 


ಆದರೆ  ಮತ್ತೆ  ಈ  ಲೋಕಕ್ಕೆ  ಬರುವ  ಯಾವ  ಸುಚನೆಯು  ಇರಲಿಲ್ಲ . ಕಾರಣ ಅವಳ  ಪ್ರಿಯತಮನ  ಸಂದೇಶ  ಇನ್ನು  ಬಂದಿರಲಿಲ್ಲ . ಅವನ  ‘ಶುಭ  ರಾತ್ರಿ'  ಎಂಬ  ಸಂದೇಶ  ನೋಡದೆ  ಅವಳು  ಮಲುಗುವವಳಾಗಿರಲಿಲ್ಲ . ಅವನ  ಧನಿ ಕೇಳದೆ  ಅವಳಿಗೆ  ಯಾವ  ಕೆಲಸದ  ಮೆಲಿಯೂ  ಆಸಕ್ತಿ  ಮುಉದುತಿರಲಿಲ್ಲ . ಅಂತಹದರಲ್ಲಿ  ಇನ್ನು  ಅವಳ  ನಲ್ಲನಿಂದ  ಕರೆ  ಬಾರದ  ಕಾರಣ  ಅವಳು  ತನ್ನ  ಭಾವನೆಯ  ಪ್ರಪಂಚದಲ್ಲೇ  ಮುಳುಗಿ ಏಳಲು  ಇಚ್ಚಿಸದೆ  ಅಲ್ಲಿಯೇ  ನೆಲಸಿದ್ದಳು .


ಚಂದ್ರನು  ಆ  ಕಾರ್ಮೋಡದ  ತೆರೆಯ  ಹಿಂದೆ  ಹೋಗುತಿದ್ದನದರು  ಆ  ಹುಡುಗಿ  ತನ್ನ  ಭಾವನೆಗಳಿಂದ  ಇನ್ನ  ಹೊರಬರಲಿಲ್ಲ . ಹಾಗೆಯೆ  ಅವಳ  ಇನಿಯನಿಂದ  ಇಷ್ಟು  ಹೊತ್ತಾದರೂ  ಕರೆ  ಬಂದಿರಲಿಲ್ಲ . ಆದರೂ  ಅವಳ  ‘ಇನಿಯನ  ಧನಿ  ಕೆಲುವು’  ಬಯಕೆಗೆ  ಯಾವುದೇ ಕೊರತೆ  ಇರಲಿಲ್ಲ .

ಅವಳನ್ನು  ಆ  ಭಾವನೆಗಳ  ಪ್ರಪಂಚದಿಂದ  ಹೊರತರಲೆಂದೇ ಏನೋ , ಅವಳ  ಫೋನೆನಿಗೆ ಸಂದೇಶವೊಂದು   ಪ್ರವೇಶ  ಮಾಡಿತು . ಸಂದೇಶದ  ಟ್ಯೂನ್  ಕೆಳುತಿದ್ದಂತೆ  ಅವಳನ್ನು  ಬಡೆದು  ಎಬ್ಬಿಸಿತು  ಅವಳ  ಮನವು . ತನ್ನ  ಪ್ರಿಯನಿಂದಲೇ  ಬಂದಿರಲೆಂದು  ಕೂರುತ್ತ , ಸಂದೆಶವನ್ನೋದಲು  ಮುಂದಾದಳು .

ಸಂದೇಶವ  ಒದಲೋರಟಾಗ  ಅವಳ  ಮುಖ  ಅರಳಿತದರೂ , ಓದಿದ  ಮನವು  ಸಂತ್ಹೊಶದಲ್ಲೇನು  ತೇಲಿ  ಹೋಗಲಿಲ್ಲ . ತನ್ನ  ಇನಿಯನಿಂದ  ‘ದಯಮಾಡಿ  ನನ್ನನ್ನು  ಮರೆಬಿಡು’ ಎಂಬ  ಒಂದು  ಸಂದೇಶವೂ  ಆದೇಶವೂ  ಆಗಿದ್ದ  ಅವನ  ಮಾತು  ಅವಳನ್ನು  ಚಿಂತೆಗೆ  ಕರೆದೊಯ್ಯಿತು.  ಪ್ರತಿ  ರಾತ್ರಿಯೂ  ತಾನು  ಅವಳನ್ನು  ತುಂಬಾ  ಪ್ರಿತಿಸುತಿರುವುದಾಗಿ  ಹೇಳುತಿದ್ದವನು , ಕರೆ  ಮಡಿ  ಅವಳಿಗೆ  ಒಂದು[ಕೇವಲ  ಮಾತಿನಲ್ಲಿ , ಸ್ಪಷ್ಟವಾಗಿ  ಹೇಳುವುದಾದರೆ  ನೂರೆನ್ದರೂ  ತಪ್ಪಾಗುವುದು] ಮುತ್ತಿದುತಿದ್ದವನು , ಇಂದು  ತನ್ನನು  ಮರೆತು  ಬಿಡುವುದಾಗಿ  ಹೇಳಿದ್ದು  ಅವಳನ್ನು  ಚಿಂತೆಯ  ಸಂತೆಗೆ  ಆಮಂತ್ರಣ  ಕೊಟ್ಟಂತಾಯಿತು.

ಭಾವನೆಗಳ  ಲೋಕದಲ್ಲಿದ್ದ  ಅವಳನು  ಚಿಂತೆಯ  ಲೋಕಕ್ಕೆ  ದುಉದಿಸಿತು  ಅಂದು  ಆ  ಒಂದು  ಪುಟ್ಟ  ಸಂದೇಶವು . ತನ್ನ  ಪ್ರಿಯತಮ  ಈಕೆ  ಹೀಗೆ  ಹೇಳಿರುವನು , ಅವನ  ಉದ್ದೇಶವೇನು  ಎಂಬುದನ್ನು  ಅರಿಯಲು  ಪ್ರಯತ್ನಿಸಿದಳದರೂ , ಪ್ರತಿಫಲಿಸಲಿಲ್ಲ .. ಏಕೆ? ಎನ್ನುವ  ಆ  ಪ್ರಶ್ನೆಗೆ  ಪೂರ್ಣ  ವಿರಾಮವಿಲ್ಲದ  ಉತ್ತರವೂ  ಸಿಗಲಿಲ್ಲ . ನಿದ್ರಿಸುವ  ಮನಸ್ಸು  ಅಥವಾ  ಕನಸನ್ನು  ಸ್ವಾಗತಿಸುವ  ಆಸಕ್ತಿಯೂ  ಅವಳಲ್ಲಿರಲಿಲ್ಲ .

ಅವನ  ಆ  ಸಂದೇಶದ  ಬಗೆಗೆಯೇ ಯೋಚಿಸುತ್ತಾ, ಏಕೆ ಎನ್ನುವ  ಆ  ಪ್ರಶ್ನೆಗೆ  ಉತ್ತರ  ಹುಡುಕುತ್ತಾ , ಸಿಕ್ಕ  ಉತ್ತರಕ್ಕೆ  ಮತ್ತೆ  ಪ್ರಶ್ನೆ  ಎಸೆಯುತ್ತ,  ಅದಕ್ಕೆ  ಪುನಃ  ಉತ್ತರ  ಹುಡುಕುತ್ತ , ಕೂತಲ್ಲಿಯೆ  ಇದ್ದುಬಿಟ್ಟಳು .

ಮೂಡಣದ  ಮೋಡ  ತೆರೆಯನ್ನು  ಸರಿಸಿ  ಅರುಣದೆವನನ್ನು ಸ್ವಾಗತಿಸಿದದರೂ , ಅವಳು  ಆ  ಜಾಗದಿಂದ  ಸರೆದಿರಲಿಲ್ಲ … ಹಕ್ಕಿಗಳೆಲ್ಲ  ಹೊಸದೊಂದು  ದಿವಸಕ್ಕಾಗಿ  ದೇವರಿಗೆ  ಪ್ರಾರ್ಥಿಸುತಿದ್ದರೂ  ಇವಳಿಗೆ  ಹೊಸ  ದಿವಸಕ್ಕಾಗಿ  ಯಾವುದೀ  ಆದ  ಯೋಜನೆ , ಕನಸು , ಹೆಚ್ಚಾಗಿ  ಮನಸು  ಇರಲಿಲ್ಲ .

ಆ  ದಿನದ  ರಾತ್ರಿಯಂದು  ಕಂಡದ್ದೇ  ಅವಳ  ಭಲಿನ  ಕೊನೆಯ  ಸವಿಗನಸು . ಅಂದು  ಸಂದೇಶವ  ಓದುವ  ಮುನ್ನ  ಮೂಡಿದ  ಆ  ಹುವಿನಂತಹ   ನಗುವೇ  ಕೊನೆಯ  ನಗು .

ಅವಳು  ಮತ್ತದೇ  ಭಾವನೆಗಳ  ಲೋಕದ  ಹೊಸ್ತಿಲ  ದಾಟಿ  ಒಳಗೆ  ಪ್ರವೇಶಿಸಿದಳು . ಆದರೆ  ಆ  ಲೋಕವು  ಮೊದಲಿನಂತಹ  ಸುಖಕರ  ಭಾವನೆಗಳ  ಲೂಕವಗಿರಲಿಲ್ಲ . ಅದು  ನೋವೆಂಬ  ಮುಳ್ಳಿನಲ್ಲಿ  ಕಟ್ಟಿದ್ದ  ಲೂಕವಗಿತ್ತು . ಆದರೆ  ಅಲ್ಲಿ  ಅವಳ  ಇನಿಯನಿಗೆ  ಇದ್ದ  ಒಲವು  ಮಾಸಿರಲಿಲ್ಲ . ಬದಲಾಗಿ  ದಿನೇ  ದಿನೇ  ಹೆಚ್ಚಾಗಿ  ಹೋಗಿತ್ತು . ಅದು  ಅಲ್ಲಿಯೇ  ಮುಳ್ಳಿನ  ಮಧ್ಯೆ  ಸುಂದರ  ಹೂವಗಿ  ಅರಳಿತ್ತು .


ಅವಳ  ಕೊನೆಯ  ಉಸಿರಿರುವವರೆಗೂ  ಅವಳಲಿ  ಯಾರ  ಮಾತಿಗೂ  ಸ್ಪಂದಿಸುವ  ಆಸೆ  ಇರಲಿಲ್ಲ . ಬಾಳಿನಲಿ  ಪ್ರಿತಿಸಿದವನನ್ನು , ಬಾಳಿಗಿಂತ  ಹೆಚ್ಚಾಗಿ  ಪ್ರಿತಿಸಿದವನನ್ನು  ಕಳೆದುಕೊಂಡ  ಅವಳು ಕಡೆವರೆಗೂ  ತನ್ನ  ಮನಸ್ಸಿನಲ್ಲಿ  ಚೇತನವನ್ನು  ಕಾಣಲೇ  ಇಲ್ಲ …. 


[ವ್ಯಥೆ ಅಲ್ಲ  ಕಥೆ]


4 comments:

  1. ಅಬ್ಬಾ....! ನೀವು ಬರೆಯುತ್ತಿರುವ ಸ್ಪೀಡ್ ನೋಡಿದರೆ ತಿ೦ಗಳಿಗೊಮ್ಮೆ ಬರೆಯುತ್ತಿರುವ ನನ್ನ ಬಗ್ಗೆ ನನಗೆ ನಾಚಿಕೆ ಆಗುತ್ತದೆ:) ಒ೦ದು ಸಲ ಬಿಡುವು ಮಾಡಿಕೊ೦ಡು ನಿಮ್ಮೆಲ್ಲಾ ಬರಹಗಳನ್ನು ಓದಬೇಕೆ೦ದು ಅ೦ದು ಕೊ೦ಡಿದ್ದೇನೆ.

    ಹೀಗೆ ಬರಿತಾ ಇರಿ....

    ReplyDelete
  2. hmmm odi hegide anta heLi tilisi...... tappiddare tiddi heLi... odidakke tumba thanks....

    nan blog ge first comment nimde:):):)thanks...

    ReplyDelete